ಜಿಲ್ಲಾ ಕುರುಬ ಸಂಘದಿಂದ ಸಚಿವ ಮಧು ಬಂಗಾರಪ್ಪರಿಗೆ ಸನ್ಮಾನ

*ಜಿಲ್ಲಾ ಕುರುಬ ಸಂಘದಿಂದ ಸಚಿವರಿಗೆ ಕೃತಜ್ಞತೆ*

*ಶಿವಮೊಗ್ಗ ಜಿಲ್ಲಾ ಕುರುಬ ಸಂಘದ ವತಿಯಿಂದ ಬಾಲರಾಜ್ ಅರಸ್ ರಸ್ತೆಯಲ್ಲಿರುವ ಕುರುಬರ ವಿದ್ಯಾರ್ಥಿ ನಿಲಯದ ಆವರಣದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಕರ್ನಾಟಕ ರಾಜ್ಯ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು ಈ ಸಾಲಿನ ಬಜೆಟ್ ನಲ್ಲಿ ಮೂರು ಕೋಟಿ ರೂಪಾಯಿಗಳನ್ನು ಘೋಷಣೆ ಮಾಡಿ ಬಿಡುಗಡೆ ಮಾಡಿದ್ದು, ಈ ಅನುದಾನಕ್ಕೆ ಕಾರಣೀಭೂತರಾದ, ಕರ್ನಾಟಕ ರಾಜ್ಯ ಸರ್ಕಾರದ ಶಿಕ್ಷಣ ಸಚಿವರು ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್ ಮಧು ಬಂಗಾರಪ್ಪನವರನ್ನು ಇಂದು ಅವರ ಶಿವಮೊಗ್ಗದ ಸ್ವಗೃಹದಲ್ಲಿ ಭೇಟಿ ಮಾಡಿ ಕೃತಜ್ಞತೆ ಸಲ್ಲಿಸಿ, ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಕುರುಬರ ಸಂಘದ ಅಧ್ಯಕ್ಷರಾದ ಪಿ ಮೈಲಾರಪ್ಪ, ಮಾಜಿ ವಿಧಾನಪರಿಷತ್ ಸದಸ್ಯರಾದ ಆರ್ ಪ್ರಸನ್ನ ಕುಮಾರ್, ಸಮಾಜದ ರಾಜ್ಯ ಮುಖಂಡರಾದ ಎಂ ಶ್ರೀಕಾಂತ್ , ಮಾಜಿ ಮಹಾಪೌರರಾದ ಎಸ್ .ಕೆ ಮರಿಯಪ್ಪ, ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯ ಉಪಾಧ್ಯಕ್ಷ ಕೆ ರಂಗನಾಥ್, ರಾಜ್ಯ ನಿರ್ದೇಶಕರಾದ ಎಸ್.ಎಂ ಶರತ್, ಸಮಾಜದ ಮುಖಂಡರುಗಳಾದ ಎಚ್ ಪಾಲಾಕ್ಷಿ, ರಾಮಕೃಷ್ಣ ಮೂಡ್ಲಿ, ಇಕ್ಕೇರಿ ರಮೇಶ್, ಬಿಜಲಿ ಹನುಮಂತಪ್ಪ, ನವುಲೆ ಮಂಜುನಾಥ್, ಮೋಹನ್ , ರವಿ ಶಾಸ್ತ್ರಿ ಗುರುಪ್ರಸಾದ್, ಎಂ.ರಾಕೇಶ್, ಕೆ .ಎಲ್ . ಪವನ್ , ವಿನಯ್, ಹಾಗೂ ಇತರರು ಇದ್ದರು*