ಬಂಡಾಯದ ಹಾದಿಯಲ್ಲಿ ಈಶ್ವರಪ್ಪ ಹಿಡಿಶಾಪ ಮೋಸ ಮಾಡಿದ್ದೇ ಯಡಿಯೂರಪ್ಪ ಶೋಭಾಗೆ ಹಠ ಹಿಡಿದು ಟಿಕೆಟ್ ಕೊಡಿಸಿದಂತೆ ಕಾಂತೇಶ್ ಗೂ ಕೊಡಿಸಬೇಲಿತ್ತು

ಬಂಡಾಯದ ಹಾದಿಯಲ್ಲಿ ಈಶ್ವರಪ್ಪ ಹಿಡಿಶಾಪ

ಮೋಸ ಮಾಡಿದ್ದೇ ಯಡಿಯೂರಪ್ಪ
ಶೋಭಾಗೆ ಹಠ ಹಿಡಿದು ಟಿಕೆಟ್ ಕೊಡಿಸಿದಂತೆ ಕಾಂತೇಶ್ ಗೂ ಕೊಡಿಸಬೇಲಿತ್ತು

ಮೋಸ ಮಾಡಿದ್ದೇ ಯಡಿಯೂರಪ್ಪ. ಹಾವೇರಿ ಟಿಕೇಟ್ ಖಂಡಿತ ಕೊಡಿಸುತ್ತೇನೆ ಎಂದಿದ್ದ ಯಡಿಯೂರಪ್ಪ ಮೋಸ ಮಾಡಿದ್ದಾರೆ. ಈಗ ಮೂಗಿಗೆ ತುಪ್ಪ ಸವರುವುದು ಬೇಡ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಬೆಂಗಳೂರಿನಲ್ಲಿ ಮತ್ತೆ ಗುಡುಗಿದ್ದಾರೆ.

ಪುತ್ರ ಕಾಂತೇಶ್ ಗೆ ಹಾವೇರಿ ಟಿಕೆಟ್ ತಪ್ಪಿಸಿ ಬಸವರಾಜ್ ಬೊಮ್ಮಾಯಿಗೆ ಕೊಟ್ಟಿದ್ದಾರೆ. ಮಾತಿನಂತೆ ನಡೆದುಕೊಳ್ಳದೇ ಮೋಸ ಮಾಡಿದ್ದಾರೆ. ಎಂ ಎಲ್ ಸಿ ಮಾಡುವ ಮಾತನ್ನು ಈಗ ಯಡಿಯೂರಪ್ಪ ಮಾತಾಡುತ್ತಿದ್ದಾರೆ. ಇದು ತುಪ್ಪ ಸವರುವ ಕೆಲಸವಷ್ಟೇ ಎಂದು ಕಿಡಿ ಕಾರಿದರು.
ಶೋಭಾ ಕರಂದ್ಲಾಜೆ ವಿರುದ್ಧ ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ದೊಡ್ಡ ವಿರೋಧವಿತ್ತು. ಅಲ್ಲಿಂದ ಬೆಂಗಳೂರಿಗೆ ಹಠದಿಂದ ಶೋಭಾರಿಗೆ ಟಿಕೆಟ್ ಕೊಡಿಸಿದ್ದಾರೆ.ಹಾಗೆಯೇ ಕಾಂತೇಶ್ ಗೂ ಕೊಡಿಸಬಹುದಿತ್ತಲ್ಲ ಎಂದು ಈಶ್ವರಪ್ಪ ಪ್ರಶ್ನಿಸಿದ್ದಾರೆ.

ಈ ಮೂಲಕ ತಮ್ಮ ಬಂಡಾಯದ ಕಾವನ್ನು ಈಶ್ವರಪ್ಪ ಹಾಗೆಯೇ ಉಳಿಸಿಕೊಂಡಿದ್ದಾರೆ.