ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ಸಿಗೆ ಹಳೇ ಅನುಭವದ ಹೊಸ ಸಾರಥಿ ಆರ್.ಪ್ರಸನ್ನ ಕುಮಾರ್*

*ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ಸಿಗೆ ಹಳೇ ಅನುಭವದ ಹೊಸ ಸಾರಥಿ ಆರ್.ಪ್ರಸನ್ನ ಕುಮಾರ್*

ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿಗೆ ನೂತನ ಸಾರಥಿಯನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ನೀಡಿದ್ದು, ಆರ್.ಪ್ರಸನ್ನ ಕುಮಾರ್ ರವರಿಗೆ ನೇಮಕ ಮಾಡಿದೆ.

ಈ ಹಿಂದೆ 10 ವರ್ಷಗಳ ಕಾಲ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿಗೆ ಅಧ್ಯಕ್ಷರಾಗಿದ್ದ ಪ್ರಸನ್ನ ಕುಮಾರ್ ರವರು, ಈಗ ಲೋಕಸಭೆ ಚುನಾವಣೆಯ ಈ ಕ್ಲಿಷ್ಟ ಸಮಯದಲ್ಲಿ ಅಧ್ಯಕ್ಷರಾಗಿ ನೇಮಕವಾಗಿದ್ದಾರೆ.

ಆರ್.ಪ್ರಸನ್ನ ಕುಮಾರ್ ರವರು ಕೌನ್ಸಿಲರ್ ಆಗಿ, ಶಿವಮೊಗ್ಗ ನಗರಸಭೆಗೆ ಅಧ್ಯಕ್ಷರಾಗಿ, ಕಾಡಾ ಅಧ್ಯಕ್ಷರಾಗಿ, ಆರು ವರ್ಷಗಳ ಕಾಲ ವಿಧಾನ ಪರಿಷತ್ ಸದಸ್ಯರಾಗಿ ಅನುಭವ ಹೊಂದಿದವರು. ಅವರಿಗೀಗ ಮತ್ತೆ ಅಧ್ಯಕ್ಷಗಿರಿ ದೊರೆತಿರುವುದರಿಂದ ಕಾಂಗ್ರೆಸ್ ನಲ್ಲಿ ಹರ್ಷೋದ್ಗಾರ ಮೂಡಿದೆ.ಅಭಿಮಾನಿಗಳ ಅಭಿನಂದನೆಗಳು, ಗೌರವಗಳು ಹಾರ ತುರಾಯಿಗಳ ಮೂಲಕ ರಾತ್ರಿಯಿಂದಲೇ ಶುರುವಾಗಿದೆ.

ಶಿವಮೊಗ್ಗ ಲೋಕಸಭಾ ಅಭ್ಯರ್ಥಿಯಾಗಿರುವ ಶ್ರೀಮತಿ ಗೀತಾ ಶಿವರಾಜ್ ಕುಮಾರ್ ರವರನ್ನು ಗೆಲ್ಲಿಸಿಕೊಂಡು ಬರುವ ಬಹುದೊಡ್ಡ ಜವಾಬ್ದಾರಿ ಆರ್. ಪ್ರಸನ್ನ ಕುಮಾರ್ ರವರ ಮೇಲಿದೆ.

ನೂತನ ಅಧ್ಯಕ್ಷರಾಗಿ ನೇಮಕವಾಗಿರುವ ಆರ್.ಪ್ರಸನ್ನ ಕುಮಾರ್ ರವರಿಗೆ ಅಭಿನಂದನೆಗಳು