ಕೊಚ್ಚಿ ಹೋಗುತ್ತಿದ್ದ ವ್ಯಕ್ತಿಯನ್ನು ರಕ್ಷಿಸಿದ್ದ 112 ಸಿಬ್ಬಂದಿ ರಂಗನಾಥ್- ಪ್ರಸನ್ನರನ್ನು ಗೌರವಿಸಿದ ಎಸ್.ಪಿ.*

*ಕೊಚ್ಚಿ ಹೋಗುತ್ತಿದ್ದ ವ್ಯಕ್ತಿಯನ್ನು ರಕ್ಷಿಸಿದ್ದ 112 ಸಿಬ್ಬಂದಿ ರಂಗನಾಥ್- ಪ್ರಸನ್ನರನ್ನು ಗೌರವಿಸಿದ ಎಸ್.ಪಿ.*

ಮಳೆ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ವ್ಯಕ್ತಿಯೊಬ್ಬನನ್ನು ಬಚಾವು ಮಾಡಿದ ERSS-112 ವಾಹನದ ಅಧಿಕಾರಿಗಳಾದ ಹೆಡ್ ಕಾನ್ಸ್ ಟೆಬಲ್ ರಂಗನಾಥ್, ಎ.ಹೆಚ್.ಸಿ ಪ್ರಸನ್ನ ಕುಮಾರ್ ರವರನ್ನು ಶಿವಮೊಗ್ಗ ಜಿಲ್ಲಾ ಎಸ್ ಪಿ ಜಿ.ಕೆ.ಮಿಥುನ್ ಕುಮಾರ್ ಪ್ರಶಂಸನಾ ಪತ್ರ ನೀಡಿ ಗೌರವಿಸಿ ಅಭಿನಂದಿಸಿದರು.

ಮೆ.18 ರ ಶನಿವಾರ ರಾತ್ರಿ ಅಬ್ಬಲಗೆರೆಯಿಂದ ಮುಂದೆ ಕೊಮ್ಮನಾಳು ಸಮೀಪ ಬೈಕ್ ನಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬ ರಸ್ತೆ ಮೇಲೆ ಹರಿಯುತ್ತಿದ್ದ ಮಳೆ ನೀರಿನಿಂದ ಬೈಕ್ ನಿಂದ ಬಿದ್ದು ಅದೇ ನೀರಿನಲ್ಲಿ ಕೊಚ್ಚಿಹೋಗುತ್ತಿರುವ ಮಾಹಿತಿ 112 ಗೆ ಬಂದಿತ್ತು. ಕೂಡಲೇ ಬಂದ ರಂಗನಾಥ್ ಮತ್ತು ಪ್ರಸನ್ನ ಕುಮಾರ್ ಕೂಡಲೇ ಸ್ಥಳಕ್ಕೆ ಬಂದು ಆ ವ್ಯಕ್ತಿಯನ್ನು ರಕ್ಷಿಸಿದ್ದರು.