ಅಡಿಕೆ ತೋಟದಲ್ಲಿ ಗಾಂಜಾ ಬೆಳೆದವನು ಪೊಲೀಸರ ಬಲೆಗೆ*

*ಅಡಿಕೆ ತೋಟದಲ್ಲಿ ಗಾಂಜಾ ಬೆಳೆದವನು ಪೊಲೀಸರ ಬಲೆಗೆ*

ಅಡಿಕೆ ಗಿಡಗಳ ಮಧ್ಯೆ 2.50 ಲಕ್ಷ ರೂ.,ಗಳ ಮೌಲ್ಯದ 9.524 ಕೆ.ಜಿ. 14 ಹಸಿ ಗಾಂಜಾ ಗಿಡಗಳನ್ನು ಬೆಳೆದಿದ್ದ ತೀರ್ಥಹಳ್ಳಿ ತಾಲ್ಲೂಕಿನ ಹುತ್ತಳ್ಳಿ ಗ್ರಾಮದ ರೈತನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಹುತ್ತಳ್ಳಿ ಗ್ರಾಮದ ಮನೆಯ ಹಿಂದೆಯೇ ಅಡಿಕೆ ತೋಟ ಹೊಂದಿರುವ ಗುರುಮೂರ್ತಿ, ಅಲ್ಲಿ ಗಾಂಜಾ ಗಿಡಗಳನ್ನು ಬೆಳೆಸಿದ್ದ.

ಈ ಬಗ್ಗೆ ಖಚಿತ ಮಾಹಿತಿ ಎಸ್ ಪಿ ಮಿಥುನ್ ಕುಮಾರ್ ರವರಿಗೆ ಬಂದಿದ್ದು, ತೀರ್ಥಹಳ್ಳಿ ಡಿವೈಎಸ್ ಪಿ ಗಜಾನನ ವಾಮನ ಸುತರ ನೇತೃತ್ವದ ಪೊಲೀಸರ ತಂಡ ಸ್ಥಳಕ್ಕೆ ಹೋಗಿ ದಾಳಿ ಮಾಡಿದ್ದಾರೆ.

ತನಿಖೆ ಮುಂದುವರೆದಿದೆ.