*ಯೂತ್ ಅಥ್ಲೆಟಿಕ್ ಚಾಂಪಿಯನ್‍ಶಿಪ್ ಸ್ಪರ್ಧೆಗೆ ಜಿಲ್ಲೆಯ 4 ಕ್ರೀಡಾಪಟುಗಳು ಆಯ್ಕೆ*

*ಯೂತ್ ಅಥ್ಲೆಟಿಕ್ ಚಾಂಪಿಯನ್‍ಶಿಪ್ ಸ್ಪರ್ಧೆಗೆ ಜಿಲ್ಲೆಯ 4 ಕ್ರೀಡಾಪಟುಗಳು ಆಯ್ಕೆ*

ಶಿವಮೊಗ್ಗ

19 ನೇ ಯೂತ್ ನ್ಯಾಷನಲ್ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್ ಸ್ಪರ್ಧೆ ಜೂ.15 ರಿಂದ 17 ರವರೆಗೆ ಛತ್ತಿಸ್‍ಗಡದ ಬಿಲಾಸ್‍ಪುರದಲ್ಲಿ ನಡೆಯಲಿದ್ದು, ಈ ಸ್ಪರ್ಧೆಯಲ್ಲಿ ಜಿಲ್ಲೆಯಿಂದ ಕ್ರೀಡಾಪಟುಗಳಾದ ಗೌರಾಂಗಿ ಗೌಡ – ಹೆಪ್ಪಾತ್‍ಲೈನ್, ಗೌತಮಿ ಗೌಡ –ಎತ್ತರ ಜಿಗಿತ, ರೋಹಿತ್ ಕುಮಾರ್-ಎತ್ತರ ಜಿಗಿತ, ತೇಜಸ್ -1000 ಮೀ ಕ್ರೀಡೆಗಳಲ್ಲಿ ಭಾಗವಹಿಸಲಿದ್ದಾರೆ.
ಈ ಕ್ರೀಡಾಪಟುಗಳು ದೈನಂದಿನ ತರಬೇತಿಯನ್ನು ಬಾಳಪ್ಪ ಮನೆ, ಅಥ್ಲೆಟಿಕ್ಸ್ ತರಬೇತುದಾರರಿಂದ ಪಡೆಯುತ್ತಿದ್ದಾರೆ. ಮಂಜುನಾಥಸ್ವಾಮಿ ಎಂ.ಟಿ ಸಹಾಯಕ ನಿರ್ದೇಶಕರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮತ್ತು ಸಿಬ್ಬಂದಿ ವರ್ಗದವರು ಕ್ರೀಡಾಪಟುಗಳಿಗೆ ಶುಭಾಹಾರೈಸಿದ್ದಾರೆ.