ಗಾಂಜಾ ಗಿರಾಕಿಗಳಿಗೆ 10 ವರ್ಷಗಳ ಕಠಿಣ ಜೈಲು;ಜೈಲು ಪಾಲಾದ ದೌಲತ್ @ ಗುಂಡು, ಮುಜೀಬ್ @ ಬಸ್ಟ್, ಶೋಹೇಬ್ @ ಚೂಡಿ ಮತ್ತು ಮಹಮ್ಮದ್ ಜಫ್ರುಲ್ಲಾ ಗಾಂಜಾ ದಂಧೆ ಹೇಗಿತ್ತು? ಸಿಕ್ಕಿಬಿದ್ದಿದ್ದು ಹೇಗೆ?

ಗಾಂಜಾ ಗಿರಾಕಿಗಳಿಗೆ 10 ವರ್ಷಗಳ ಕಠಿಣ ಜೈಲು;

ಜೈಲು ಪಾಲಾದ ದೌಲತ್ @ ಗುಂಡು, ಮುಜೀಬ್ @ ಬಸ್ಟ್, ಶೋಹೇಬ್ @ ಚೂಡಿ ಮತ್ತು ಮಹಮ್ಮದ್ ಜಫ್ರುಲ್ಲಾ ಗಾಂಜಾ ದಂಧೆ ಹೇಗಿತ್ತು? ಸಿಕ್ಕಿಬಿದ್ದಿದ್ದು ಹೇಗೆ?

ದಿನಾಂಕಃ 11-12-2021 ರಂದು ಮಧ್ಯಾಹ್ನ ಶಿವಮೊಗ್ಗ ಟೌನ್ ನ ವಾಸಿಗಳಾದ 1) ದೌಲತ್ @ ಗುಂಡು, 2) ಮುಜೀಬ್ @ ಬಸ್ಟ್, 3) ಶೋಹೇಬ್ @ ಚೂಡಿ ಮತ್ತು 4) ಮಹಮ್ಮದ್ ಜಫ್ರುಲ್ಲಾ ರವರು *ಅಕ್ರಮವಾಗಿ ಮಾದಕ ವಸ್ತು ಗಾಂಜಾವನ್ನು* ಇನೋವಾ ಕಾರಿನಲ್ಲಿ ಸಂಗ್ರಹಿಸಿಟ್ಟುಕೊಂಡು, ಸಾರ್ವಜನಿಕರಿಗೆ ಮಾರಾಟ ಮಾಡುವ ಉದ್ದೇಶದಿಂದ *ಆಂದ್ರಪ್ರದೇಶದಿಂದ ಶಿವಮೊಗ್ಗ ನಗರದ ಕಡೆಗೆ ಸಾಗಾಣಿಕೆ* ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ *ಶ್ರೀ ದೀಪಕ್ ಎಂ ಎಸ್, ಪಿಐ* ತುಂಗಾನಗರ ಪೊಲೀಸ್ ಠಾಣೆ ರವರ ನೇತೃತ್ವದ ತಂಡವು ಶಿವಮೊಗ್ಗ ಟೌನ್ *ಲಕ್ಕಿನಕೊಪ್ಪ ಕ್ರಾಸ್* ನ ಹತ್ತಿರ ಹಾಲ್ ಲಕ್ಕವಳ್ಳಿ ಕಡೆಗೆ ಹೋಗುತ್ತಿದ್ದ *ಇನೋವಾ ಕಾರನ್ನು* ತಡೆದು ಪರಿಶೀಲಿಸಲಾಗಿ ಕಾರಿನ *ಸ್ಟೆಪ್ನಿ, ಹಿಂಬಾಗದ ಡೋರ್ ಗಳು, ಮುಂಬಾಗದ ಡೋರ್ ಗಳು ಮತ್ತು ಬಾನೆಟ್ ನ ಒಳಗೆ ಗಾಂಜಾ ಪ್ಯಾಕೇಟ್* ಗಳು ದೊರೆತಿದ್ದು, ನಂತರ ಸದರಿ ನಾಲ್ಕು ಜನ ಆರೋಪಿತರನ್ನು ದಸ್ತಗಿರಿ ಮಾಡಿ, *ಅಂದಾಜು ಮೌಲ್ಯ 6,50,000/- ರೂಗಳ 21 ಕೆ.ಜಿ. 315 ಗ್ರಾಂ ತೂಕ ಗಾಂಜಾ ಮತ್ತು ಕೃತ್ಯಕ್ಕೆ ಬಳಸಿದ ಕಾರ್ ಅನ್ನು* ವಶಪಡಿಸಿಕೊಂಡು, ತುಂಗಾನಗರ ಪೊಲೀಸ್ ಠಾಣೆ ಗುನ್ನೆ ಸಂಖ್ಯೆ 0403/2021 ಕಲಂ 8(c),20(b),20(ii) (C)) *NDPS ಕಾಯ್ದೆ ರೀತ್ಯಾ* ಪ್ರಕರಣ ದಾಖಲಿಸಿಕೊಳ್ಳಲಾಗಿರುತ್ತದೆ.

ಪ್ರಕಣದಲ್ಲಿ ಆಗಿನ ತನಿಖಾಧಿಕಾರಿಗಳಾದ *ಶ್ರೀಮತಿ ಭಾರತಿ, ಬಿ ಹೆಚ್, ಪಿಎಸ್ಐ* ತುಂಗಾನಗರ ಪೊಲೀಸ್ ಠಾಣೆರವರು ಪ್ರಕರಣದ ತನಿಖೆ ಪೂರೈಸಿ ಘನ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿರುತ್ತಾರೆ.

ಘನ ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ *ಶ್ರೀ ಸುರೇಶ್ ಕುಮಾರ್ ಎ. ಎಂ. ಸರ್ಕಾರಿ ಅಭಿಯೋಜಕರವರು,* ಪ್ರಕರಣದ ವಾದ ಮಂಡಿಸಿದ್ದು, *ಘನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ* ಶಿವಮೊಗ್ಗದಲ್ಲಿ ಪ್ರಕರಣದ ವಿಚಾರಣೆ ನಡೆದು, ಆರೋಪಿತರ ವಿರುದ್ಧ ಆರೋಪ ದೃಡಪಟ್ಟ ಹಿನ್ನೆಲೆಯಲ್ಲಿ, ಮಾನ್ಯ ನ್ಯಾಯಾಧಿಶರಾದ *ಶ್ರೀ ಮಂಜುನಾಥ್ ನಾಯಕ್* ರವರು ದಿನಾಂಕಃ 15-06-2024 ರಂದು ಆರೋಪಿತರಾದ *1) ದೌಲತ್ @ ಗುಂಡು, 27 ವರ್ಷ, ಇಂದಿರಾನಗರ್, ಶಿವಮೊಗ್ಗ ಟೌನ್, 2) ಮುಜೀಬ್ @ ಬಸ್ಟ್, 27 ವರ್ಷ, ಇಂದಿರಾನಗರ, ಶಿವಮೊಗ್ಗ ಟೌನ್, 3) ಶೋಹೇಬ್ @ ಚೂಡಿ, 24 ವರ್ಷ, ಕಡೇಕಲ್, ಶಿವಮೊಗ್ಗ ಟೌನ್ ಮತ್ತು 4) ಮಹಮ್ಮದ್ ಜಫ್ರುಲ್ಲಾ, 24 ವರ್ಷ, ಕಡೇಕಲ್ ಶಿವಮೊಗ್ಗ ಟೌನ್, ಇವರುಗಳಿಗೆ 10 ವರ್ಷ ಕಠಿಣ ಕಾರಾವಾಸ ಶಿಕ್ಷೆ ಮತ್ತು ತಲಾ ರೂ 1,05,000/- ದಂಡ, ದಂಡ ಕಟ್ಟಲು ವಿಫಲರಾದಲ್ಲಿ ಹೆಚ್ಚುವರಿ 01 ವರ್ಷ ಸಾಧಾ ಕಾರಾವಾಸ ಶಿಕ್ಷೆ* ವಿಧಿಸಿ ಆದೇಶಿಸಿರುತ್ತಾರೆ.