ಬಾಪೂಜಿ ನಗರದ ಕಳ್ಳತನ ರಹಸ್ಯ ಬಯಲು…15.40 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳರ ಹಿಡಿದ ಕೋಟೆ ಪೊಲೀಸರುಪೊಲೀಸ್  ಪ್ರಕಟಣೆ ಏನು ಹೇಳುತ್ತೆ?

ಬಾಪೂಜಿ ನಗರದ ಕಳ್ಳತನ ರಹಸ್ಯ ಬಯಲು…

15.40 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳರ ಹಿಡಿದ ಕೋಟೆ ಪೊಲೀಸರು

ಪೊಲೀಸ್  ಪ್ರಕಟಣೆ ಏನು ಹೇಳುತ್ತೆ?

ದಿನಾಂಕ: 29-06-2024 ರಂದು ರಾತ್ರಿ *ಶಿವಮೊಗ್ಗ ಟೌನ್ ಬಾಪೂಜಿನಗರದ ಮಹಿಳೆಯೊಬ್ಬರ* ವಾಸದ ಮನೆಯಲ್ಲಿ *ಯಾರೋ ಕಳ್ಳರು ಸುಮಾರು 234 ಗ್ರಾಂ ತೂಕದ ಬಂಗಾರದ ಆಭರಣಗಳು ಮತ್ತು ಹಣವನ್ನು ಕಳ್ಳತನ ಮಾಡಿಕೊಂಡು* ಹೋಗಿರುತ್ತಾರೆಂದು ಮಹಿಳೆಯು ನೀಡಿದ ದೂರಿನ ಮೇರೆಗೆ *ಕೋಟೆ ಪೊಲೀಸ್ ಠಾಣೆ ಗುನ್ನೆ ಸಂಖ್ಯೆ 0110/2024 ಕಲಂ 457, 380 ಐಪಿಸಿ* ರೀತ್ಯ ಪ್ರಕರಣವನ್ನು ದಾಖಲಿಸಿ ಕೊಳ್ಳಲಾಗಿರುತ್ತದೆ.

ಸದರಿ ಪ್ರಕರಣದಲ್ಲಿ ಕಳುವಾದ ಮಾಲು ಮತ್ತು ಆರೋಪಿತರ ಪತ್ತೆಗಾಗಿ *ಶ್ರೀ ಮಿಥುನ್ ಕುಮಾರ್ ಜಿ. ಕೆ ಐಪಿಎಸ್* ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ, *ಶ್ರೀ ಅನಿಲ್ ಕುಮಾರ್ ಭೂಮರಡ್ಡಿ,* ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1 ಶಿವಮೊಗ್ಗ ಜಿಲ್ಲೆ, *ಶ್ರೀ ಎ ಜಿ ಕಾರ್ಯಪ್ಪ* ಹೆಚ್ಚುವರಿ ಪೊಲೀಸ್ ಅಧೀಕ್ಷಕರು – 2 ಶಿವಮೊಗ್ಗ ಜಿಲ್ಲೆ ರವರ ಮಾರ್ಗದರ್ಶನದಲ್ಲಿ, *ಶ್ರೀ ಬಾಬು ಆಂಜನಪ್ಪ ಪೊಲೀಸ್ ಉಪಾಧೀಕ್ಷಕರು* ಶಿವಮೊಗ್ಗ ಎ ಉಪ ವಿಭಾಗ ರವರ ಮೇಲ್ವಿಚಾರಣೆಯಲ್ಲಿ *ಶ್ರೀ ಗುರುಬಸವರಾಜ್, ಹೆಚ್* ಪೋಲಿಸ್ ನಿರೀಕ್ಷಕರು ಕೋಟೆ ಪೊಲೀಸ್ ಠಾಣೆ ರವರ ನೇತೃತ್ವದ, *ಪಿ.ಎಸ್.ಐ ಶ್ರೀ ಕುಮಾರ್, ಶ್ರೀ ಸಿ.ಆರ್.ಕೊಪ್ಪದ್* ಶ್ರೀಹರ್ಷ, ಎಎಸ್‌ಐ ಹಾಗೂ ಸಿಬ್ಬಂಧಿಗಳಾದ ಹೆಚ್.ಸಿ. ಅಣ್ಣಪ್ಪ, ನಾಗರಾಜ, ಸಿಪಿಸಿ ರವರಾದ ಗೊರವರ ಅಂಜಿನಪ್ಪ, ಕಿಶೋರ, ಪ್ರಕಾಶ್, ರಂಗನಾಥ್ ರವರನ್ನು ಒಳಗೊಂಡ *ತನಿಖಾ ತಂಡವನ್ನು* ರಚಿಸಲಾಗಿರುತ್ತದೆ.

ಸದರಿ ತನಿಖಾ ತಂಡವು ದಿನಾಂಕ: 01-07-2024 ರಂದು ಪ್ರಕರಣದ ಆರೋಪಿತರಾದ *1) ಮೊಹಮ್ಮದ್ ರಫೀಕ್ @ ಕಾಣ 24 ವರ್ಷ, ಚಿಕ್ಕಲ್, ಶಿವಮೊಗ್ಗ 2) ಅತಾವುಲ್ಲಾ, 29 ವರ್ಷ, ಬಾಪೂಜಿನಗರ. ಶಿವಮೊಗ್ಗ, 3) ರೂಮನ್ ಕುರೇಶಿ, 20 ವರ್ಷ ಬಾಪೂಜಿನಗರ, ಶಿವಮೊಗ್ಗ* ಇವರನ್ನು ದಸ್ತಗಿರಿ ಮಾಡಿ ಆರೋಪಿತರಿಂದ ಪ್ರಕರಣಕ್ಕೆ ಸಂಬಂಧಿಸಿದ *ಅಂದಾಜು ಮಾಲ್ಯ 15,40,500/- ರೂಗಳ 237 ಗ್ರಾಂ ಬಂಗಾರದ ಒಡವೆಗಳು ಮತ್ತು ಕೃತ್ಯಕ್ಕೆ ಬಳಸಿದ ಅಂದಾಜು ಮೌಲ್ಯ 50,000/- ರೂ ಮೌಲ್ಯದ ಬೈಕ್ ಸೇರಿ ಒಟ್ಟು 15,90,500/- ರೂ ಗಳ ಮಾಲನ್ನು* ಅಮಾನತ್ತು ಪಡಿಸಿಕೊಂಡಿರುತ್ತದೆ.

ಸದರಿ ತನಿಖಾ ತಂಡದ *ಉತ್ತಮವಾದ ಕಾರ್ಯವನ್ನು ಮಾನ್ಯ ಪೋಲಿಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆರವರು ಪ್ರಶಂಸಿಸಿ* ಅಭಿನಂದಿಸಿರುತ್ತಾರೆ.