ಚಳುವಳಿಗಳಿಂದ ಮಾತ್ರ ಸರ್ಕಾರದ ಧೋರಣೆ ಬದಲಿಸಲು ಸಾಧ್ಯ; ಹೆಚ್.ಆರ್.ಬಸವರಾಜಪ್ಪ

ಚಳುವಳಿಗಳಿಂದ ಮಾತ್ರ ಸರ್ಕಾರದ ಧೋರಣೆ ಬದಲಿಸಲು ಸಾಧ್ಯ; ಹೆಚ್.ಆರ್.ಬಸವರಾಜಪ್ಪ

ಶಿವಮೊಗ್ಗ ಜುಲೈ 6. ಚಳುವಳಿಗಳಿಂದ ಮಾತ್ರ ಸರ್ಕಾರದ ಧೋರಣೆ ಬದಲಿಸಲು ಸಾಧ್ಯ ಎಂದು ಕರ್ನಾಟಕ ರಾಜ್ಯ ರೈತಸಂಘದ ಅಧ್ಯಕ್ಷರಾದ ಹೆಚ್ ಬಸವರಾಜಪ್ಪ ಹೇಳಿದರು.ಅವರು ಬಹುಮುಖಿ ವತಿಯಿಂದ ನ್ಯಾಶನಲ್ ಕಾಮರ್ಸ್ ಕಾಲೇಜಿನ ಪ್ರೆಂಡ್ಸ್ ಸೆಂಟರ್ ಹಾಲ್ ನಲ್ಲಿ ಕೃಷಿ ಕ್ಷೇತ್ರದ ತಲ್ಲಣಗಳ ಬಗ್ಗೆ ಮಾತನಾಡುತ್ತಿದ್ದರು.
ಶಿವಮೊಗ್ಗದಲ್ಲಿ ಸಕ್ಕರೆ ಕಾರ್ಖಾನೆ ಧೋರಣೆಯ ವಿರುದ್ಧ ಹೋರಾಟ ಮಾಡುವ ಸಲುವಾಗಿ ಕಬ್ಬು ಬೆಳೆಗಾರರ ಸಂಘ ಕಟ್ಟಿ ಹೋರಾಟ ಮಾಡಿ ನಂತರ ರುದ್ರಪ್ಪನವರ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತಸಂಘ ವನ್ನು ಕಟ್ಟಿ ಮುಂದೆ ಸುಂದರೇಶ್ ಹಾಗೂ ನಂಜುಂಡಸ್ವಾಮಿ ಹಾಗೂ ಕಡಿದಾಳ್ ಶಾಮಣ್ಣ ಮುಂತಾದವರ ನಾಯಕತ್ವದಲ್ಲಿ ರೈತರು 1980 ಅಕ್ಟೋಬರ್ 2ರಂದು ಶಿವಮೊಗ್ಗದಲ್ಲಿ 25000 ಜನ ಸೇರಿ ಜೈಲುಬರೋ ಚಳುವಳಿ ಕೈಗೊಂಡು ದೊಡ್ಡ ಹೋರಾಟವನ್ನು ಕೈ ಗೊಳ್ಳಲಾಯಿತು.
ಮುಂದೆ ಸರ್ಕಾರ ರೈತರ ಜಮೀನುಗಳ ಪಂಪ್ ಸೆಟ್ ಗಳಿಗೆ ವಿದ್ಯುತ್ ಬಿಲ್ ತೆಗೆಯಲಾಯಿತು.ಆಗ ನಡೆದ ದಲಿತ ರೈತ ಮತ್ತು ಭಾಷಾ ಚಳುವಳಿಗಳಿಂದಾಗಿ 33ವರ್ಷಗಳಿಂದ ಇದ್ದ ಕಾಂಗ್ರೆಸ್ ಸರ್ಕಾರ ಬದಲಾಗಿ ಬೇರೆ ಪಕ್ಷ ಅಧಿಕಾರಕ್ಕೆ ಬಂತು.
ಇಂದು ರೈತರು ವರ್ಷವೊಂದಕ್ಕೆ 30 ಲಕ್ಷ ಕೋಟಿ ರೂಪಾಯಿ ಭೂಮಿಗೆ ಬಂಡವಾಳ ಹಾಕುತ್ತಾರೆ.ಪಂಪ್ ಸೆಟ್ ಗೆ 10ಲಕ್ಷ ಕೋಟಿ ಬಂಡವಾಳ ಹಾಕುತ್ತಾರೆ.
ಇಂದು ಅತ್ಯಧಿಕ ಹಾಲಿನ ಉತ್ಪಾದನೆ ಇದ್ದು ಹೆಚ್ಚಾದ ಹಾಲನ್ನು ಜನರಿಗೆ 50ಮಿಲಿಕೊಟ್ಟು 2ರೂಪಾಯಿ ಹೆಚ್ಚು ಪಡೆಯಲಾಗುತ್ತದೆ.ಇದನ್ನೆ ವಿರೋಧ ಪಕ್ಷಗಳು ಬೆಲೆ ಏರಿಕೆ ಎಂದು ಬೊಬ್ಬೆ ಹೊಡೆಯುತ್ತವೆ.ಆ ಹಾಲನ್ನು ಚೆಲ್ಲಬೇಕಾಗಿತ್ತೇ ಎಂದು ಪ್ರಶ್ನಿಸಿದ ಅವರು ಮೊಬೈಲ್ ಚಾರ್ಜ್ ಮಾಡುವುದಕ್ಕೆ ಏಕಾಏಕಿ 150ಜಾಸ್ತಿ ಮಾಡಿದ್ದಾರೆ ಎಲ್ಲಾ ಕೈಗಾರಿಕಾ ವಸ್ತುಗಳ ಬೆಲೆ ಏರಿದೆ ಆದರೆ ಅದರ ಬಗ್ಗೆ ಯಾರೂ ಮಾತನಾಡುತ್ತಿಲ್ಲ ಈ ರೀತಿಯ ವರ್ತನೆ ಸರಿ ಅಲ್ಲ.
ಕೃಷಿಯವರು 66/ಉದ್ಯೋಗ ನೀಡಿದ್ದೇವೆ ಕೈಗಾರಿಕೆ ಯವರು ಕೇವಲ 26/ಉದ್ಯೋಗ ನೀಡಿದ್ದಾರೆ.ಕೃಷಿ ಉದ್ಯೋಗ ಲಾಭದಾಯಕವಾಗಿಲ್ಲ ರೈತ ಬೆಳೆದ ತರಕಾರಿ ಹಣ್ಣುಗಳನ್ನು ರಸ್ತೆಯಲ್ಲಿ ಹಾಕಿ ಮಾರಲಾಗುತ್ತದೆ.ಆದರೆ ಕಾರ್ಖಾನೆ ಉತ್ಪಾದಿಸಿದ ಚಪ್ಪಲಿಗಳನ್ನು ಎ..ಸಿ.ರೂಂನಲ್ಲಿ ಮಾರಲಾಗುತ್ತದೆ.ಕೃಷಿ ಕಾಯಿದೆಗಳು ರೈತರ ವಿರೋಧಿಯಾಗಿದ್ದು ಜಮೀನುಗಳನ್ನು ಕೈಗಾರಿಕೆಯವರು ಕೊಂಡುಕೊಳ್ಳಲು ಅವಕಾಶ ಕೊಟ್ಟರೆ ಭೂಮಿ ಬರಡಾಗುತ್ತದೆ.ಅನ್ನಕ್ಕಾಗಿ ದೇಶ ವಿದೇಶಗಳ ಕಡೆ ಕೈ ಚಾಚಬೇಕಾಗುತ್ತದೆ . ರೈತರು ಸಮಗ್ರ ಸಾವಯವ ಕೃಷಿ ಮಾಡಬೇಕು.ಸರ್ವ ಬೆಳೆ ಬೆಳೆಯಬೇಕು.ಹೈನುಗಾರಿಕೆ ಹಾಗೂ ಕೋಳಿ ಕುರಿಗಳನ್ನು ಸಾಕಿ ರೈತ ಸ್ವಂತ ಕಾಲಮೇಲೆ ನಿಲ್ಲುವಂತಾಗಬೇಕು.ಕುವೆಂಪು ಹೇಳಿದಂತೆ ರೈತ ದೇಶದ ಬೆನ್ನೆಲುಬು ಆದರೆ ಇಂದು ರಿಪೇರಿ ಆಗದ ಮಟ್ಟಿಗೆ ರೈತನ ಬೆನ್ನೆಲುಬು ಹಾಳಾಗಿದೆ.ರೈತ ಸರ್ಕಾರ ನಂಬದೆ ಸ್ವಂತ ಕಾಲ ಮೇಲೆ ನಿಲ್ಲಬೇಕು.ಈ ಸಬ್ಸಿಡಿ ಹೆಚ್ಚು ದಿನ ಮುಂದುವರೆಯುವುದು ಇಲ್ಲ.ಅದರ ಬದಲಿಗೆ ರೈತ ಸ್ವಾವಲಂಬಿ ಯಾಗಬೇಕು ಎಂದರು.
ಸ್ವಾಗತ ಮತ್ತು ನಿರ್ವಹಣೆ ಯನ್ನು ಹೆಚ್.ಕೆ.ರವಿಶಂಕರ್ ನಿರ್ವಹಿಸಿದರು.ಬಹುಮುಖಿಯ ಡಾ.ಕೆ.ಜಿ.ವೆಂಕಟೇಶ್ ವಂದನಾರ್ಪಣೆಯನ್ನು ಸಲ್ಲಿಸಿದರು.