ಬೆಳ್ಳಂ ಬೆಳಿಗ್ಗೆ ಆರೋಪಿ ರಜಾಕ್ ಕಾಲಿಗೆ ಗುಂಡು ಹೊಡೆದ ಪೊಲೀಸರು…ಏನಿದು ಪ್ರಕರಣ?

ಬೆಳ್ಳಂ ಬೆಳಿಗ್ಗೆ ಆರೋಪಿ ರಜಾಕ್ ಕಾಲಿಗೆ ಗುಂಡು ಹೊಡೆದ ಪೊಲೀಸರು…

ಏನಿದು ಪ್ರಕರಣ?

ಶಿವಮೊಗ್ಗ ಬಿ ಉಪ ವಿಭಾಗದ ಕುಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆತ್ಮರಕ್ಷಣೆಗಾಗಿ ಪೊಲೀಸರು ಗುಂಡಿನ ದಾಳಿ ನಡೆಸಿದ ಪ್ರಕರಣ ವರದಿತಾಗಿದೆ.

ಆರೋಪಿ ರಜಾಕ್ ವಿರುದ್ಧ ಕೊಲೆ ಯತ್ನ ಮತ್ತು ಎನ್‌ಡಿಪಿಎಸ್ ಸೇರಿದಂತೆ 5 ಪ್ರಕರಣಗಳಿದ್ದು, 109 ಬಿಎನ್‌ಎಸ್ (ಕೊಲೆ ಯತ್ನ) ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ. ವಿನೋಬನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿತ್ತು.

ಇಂದು ಹೊಳೆಹೊನ್ನೂರು ಇನ್ಸ್‌ಪೆಕ್ಟರ್ ಬಂಧಿಸಲು ಯತ್ನಿಸಿದಾಗ ಆರೋಪಿ ರಜಾಕ್ ಪೊಲೀಸ್ ಸಿಬ್ಬಂದಿ ಅರ್ಜುನ್ ಮೇಲೆ ಚಾಕುವಿನಿಂದ ಹಲ್ಲೆಗೆ ಯತ್ನಿಸಿದ್ದಾನೆ. ಸಿಬ್ಬಂದಿಗೆ ಗಾಯಗಳಾಗಿವೆ.

ಕೂಡಲೇ ರಕ್ಷಣೆಗಾಗಿ ಆರೋಪಿ ರಜಾಕ್ ಕಾಲಿಗೆ ಗುಂಡು ಹಾರಿಸಲಾಗಿದ್ದು, ಗಾಯಗೊಂಡ ಆರೋಪಿ ರಜಾಕ್ ಮತ್ತು ಪೊಲೀಸ್ ಸಿಬ್ಬಂದಿ ಅರ್ಜುನ್ ರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೊಳಪಡಿಸಲಾಗಿದೆ.