ಗೌರಿ ಗಣೇಶ- ಈದ್ ಮಿಲಾದ್ ಹಿನ್ನೆಲೆ;* *110 ಶಿವಮೊಗ್ಗದ ರೌಡಿಗಳಿಗೆ ನಾಲ್ಕೇ ನಾಲ್ಕು ಎಚ್ಚರಿಕೆ ನೀಡಿದ ಎಸ್ ಪಿ ಮಿಥುನ್ ಕುಮಾರ್…*

*ಗೌರಿ ಗಣೇಶ- ಈದ್ ಮಿಲಾದ್ ಹಿನ್ನೆಲೆ;*
*110 ಶಿವಮೊಗ್ಗದ ರೌಡಿಗಳಿಗೆ ನಾಲ್ಕೇ ನಾಲ್ಕು ಎಚ್ಚರಿಕೆ ನೀಡಿದ ಎಸ್ ಪಿ ಮಿಥುನ್ ಕುಮಾರ್…*

ಗೌರಿ ಗಣೇಶ ಮತ್ತು ಈದ್ ಮಿಲಾದ್ ಹಬ್ಬಗಳ ಆಗಮನವಾಗುತ್ತಿದೆ. ಕಾನೂನು ಭಂಗ ಮಾಡುವವರ ವಿರುದ್ಧ ಹದ್ದಿನ ಕಣ್ಣಿಟ್ಟಿರುವ ಎಸ್ ಪಿ ಮಿಥುನ್ ಕುಮಾರ್, ಒಟ್ಟು 110 ಜನ ರೌಡಿಗಳನ್ನು ಕರೆಸಿಕೊಂಡು ಖಡಕ್ ಎಚ್ಚರಿಕೆ ಕೊಟ್ಟು ಕಳಿಸಿದ್ದಾರೆ.

ಶುಕ್ರವಾರ ಸಂಜೆ ಶಿವಮೊಗ್ಗದ ಅಷ್ಟೂ ಪ್ರಮುಖ ರೌಡಿಗಳು ಡಿಎಆರ್ ಸಭಾಂಗಣದಲ್ಲಿ ಪೊಲೀಸ್ ಇಲಾಖೆಯ ಬುಲಾವ್ ಮೇಲೆ ಬಂದು ಸೇರಿದ್ದರು. ಅವರದೊಂದು ಪೆರೇಡ್ ಮಾಡಿದ ಪೊಲೀಸ್ ಇಲಾಖೆ ಎಲ್ಲರಿಗೂ ಗಂಭೀರವಾಗಿ ಪರಿಗಣಿಸಿದೆ.

ಎಸ್ ಪಿ ಮಿಥುನ್ ಕುಮಾರ್, ಎಎಸ್ ಪಿ ಅನಿಲ್ ಕುಮಾರ್ ಭೂಮರೆಡ್ಡಿ, ಡಿವೈಎಸ್ ಪಿಗಳಾದ ಎಂ.ಸುರೇಶ್, ಬಾಬು ಆಂಜನಪ್ಪರವರ ಉಪಸ್ಥಿತಿಯಲ್ಲಿ ರೌಡಿ ಪೆರೇಡ್ ಮಾಡಲಾಯಿತು.

*ರೌಡಿ ಪರೇಡ್ ನಲ್ಲಿ ಎಸ್ ಪಿ ನೀಡಿದ ವಿಶೇಷ ಎಚ್ಚರಿಕೆಗಳೇನು?*

1) *ವಾರದಲ್ಲಿ 02 ಬಾರಿ* ಕಡ್ಡಾಯವಾಗಿ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಹೋಗಿ *ಹಾಜರಾತಿ* ನೀಡುವುದು.

2) ನಿಮ್ಮ *ಚಟುವಟಿಕೆ ಮತ್ತು ಚಲನ ವಲನಗಳ ಮೇಲೆ ನಿಗಾ* ಇಡಲಾಗಿದ್ದು, ಒಂದು ವೇಳೆ ಯಾವುದಾದರೂ ಕಾನೂನು ಬಾಹೀರ ಚಟುವಟಿಕೆ ಮತ್ತು ಅಪರಾಧಿಕ ಕೃತ್ಯಗಳಲ್ಲಿ ಭಾಗಿಯಾಗುವುದು ಕಂಡು ಬಂದಲ್ಲಿ, *ಗಡಿಪಾರು ಮತ್ತು ಗೂಂಡಾ ಕಾಯ್ದೆಯಡಿಯಲ್ಲಿ ಕಠಿಣ* ಕ್ರಮ ಜರುಗಿಸಲಾಗುವುದು.

3) ನಿಮ್ಮ *ಆದಾಯದ ಮೂಲ ಮತ್ತು ಸ್ನೇಹಿತರ ಕುರಿತು* ಪೊಲೀಸ್ ಇಲಾಖೆಯಿಂದ ನಿರಂತರವಾಗಿ ನಿಗಾ ಇಡಲಾಗುವುದು, ಒಂದು ವೇಳೆ ನೀವು ಸ್ನೇಹಿತರನ್ನು ಸೇರಿಸಿಕೊಂಡು *ಗುಂಪು ಕಟ್ಟಿಕೊಂಡು ಅಡ್ಡಗಳನ್ನು* ಮಾಡಿಕೊಳ್ಳುವುದು, ರಾತ್ರಿ ವೇಳೆ ಮನೆಯಲ್ಲಿರದೇ ಅನಾವಶ್ಯಕವಾಗಿ ಹೊರಗಡೆ ಸುತ್ತಾಡುವುದು ಕಂಡು ಬಂದಲ್ಲಿ *ಕಾನೂನು ರೀತ್ಯಾ ಕಠಿಣ* ಕ್ರಮ ಜರುಗಿಸಲಾಗುವುದು.

4) *ಹೇರ್ ಕಟಿಂಗ್ ಮತ್ತು ಶೇವಿಂಗ್ ಮಾಡಿಸಿಕೊಂಡು,* ಶಿಸ್ತಾಗಿ ಕಾಣುವಂತಹ ಉಡುಪುಗಳನ್ನು ಧರಿಸಿ ಮತ್ತು ಕಾನೂನನ್ನು ಗೌರವಿಸಿ ಹಾಗೂ ಕಾನೂನನ್ನು ಪಾಲನೆ ಮಾಡುವ ಮೂಲಕ ಸಮಾಜದಲ್ಲಿ *ಉತ್ತಮ ಪ್ರಜೆಯಾಗಿ ಜೀವಿಸಿ* ಇದು ನಿಮಗೆ ಒಳ್ಳೆಯದು. ಇಲ್ಲದೇ ಹೋದಲ್ಲಿ ಪೊಲೀಸ್ ಇಲಾಖೆಯು ನಿಮ್ಮ ವಿರುದ್ಧ *ಕಠಿಣ ಕಾನೂನು ಕ್ರಮ ಜರುಗಿಸುತ್ತದೆ* ಎಂದು ಎಚ್ಚರಿಕೆ ನೀಡಿದರು ಎಸ್ ಪಿ.