ಸಚಿವ ಭೈರತಿ ಸುರೇಶ್ ಗಮನ ಸೆಳೆದ ಹೆಚ್.ಸಿ.ಯೋಗೇಶ್ ತಂಡ…ಶಿವಮೊಗ್ಗ ನಗರಸಭಾ ಚುನಾವಣೆಗಿಂತ ಮುನ್ನ ವಾರ್ಡ್ ವಿಂಗಡಣೆ ಮಾಡಿ…ಸ್ಪಂದಿಸಿದ ಸಚಿವ ಭೈರತಿ…ಯೋಗೇಶ್ ಮನವರಿಕೆಯಿಂದ ಮುಂದೂಡಲ್ಪಡಲಿದೆ ಶಿವಮೊಗ್ಗ ಪಾಲಿಕೆ ಚುನಾವಣೆ…

ಸಚಿವ ಭೈರತಿ ಸುರೇಶ್ ಗಮನ ಸೆಳೆದ ಹೆಚ್.ಸಿ.ಯೋಗೇಶ್ ತಂಡ…

ಶಿವಮೊಗ್ಗ ನಗರಸಭಾ ಚುನಾವಣೆಗಿಂತ ಮುನ್ನ ವಾರ್ಡ್ ವಿಂಗಡಣೆ ಮಾಡಿ…

ಸ್ಪಂದಿಸಿದ ಸಚಿವ ಭೈರತಿ…

ಯೋಗೇಶ್ ಮನವರಿಕೆಯಿಂದ ಮುಂದೂಡಲ್ಪಡಲಿದೆ ಶಿವಮೊಗ್ಗ ಪಾಲಿಕೆ ಚುನಾವಣೆ…

ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದಂತಹ ಹೆಚ್ ಸಿ ಯೋಗೇಶ್ ರವರು ಶಿವಮೊಗ್ಗ ಮಹಾನಗರ ಪಾಲಿಕೆ ಚುನಾವಣೆಯ ಕುರಿತು ಪುನರ್ ವಿಂಗಡಣೆ ಮಾಡಿದ ನಂತರ ಚುನಾವಣೆಯನ್ನು ನಡೆಸಬೇಕೆಂದು ರಾಜ್ಯ ನಗರಾಭಿವೃದ್ಧಿ ಸಚಿವರಾದ ಭೈರತಿ ಸುರೇಶ್ ರವರಿಗೆ ಮನವಿ ಸಲ್ಲಿಸಿ, ಇಲ್ಲಿನ ಗ್ರೌಂಡ್ ರಿಪೋರ್ಟ್ ನೀಡಿದರು.

ಇಂದು ಬೆಂಗಳೂರಿನಲ್ಲಿ ಶಿವಮೊಗ್ಗ ನಗರದ ಕುರಿತು ವಿವರಿಸಿ ಮನವಿ ನೀಡಿದರು.
ಇದನ್ನು ಆಲಿಸಿದ ಸಚಿವರು
ಕೂಡಲೇ ಶಿವಮೊಗ್ಗ ನಗರಕ್ಕೆ ಭೇಟಿ ನೀಡಿ ಪರಿಶೀಲಿಸುವುದಲ್ಲದೇ ಅನುಕೂಲವಾಗುವಂತೆ ಕ್ರಮಕೈಗೊಳ್ಳುವುದಾಗಿ ಭರವಸೆಯನ್ನು ನೀಡಿದರು.

ಶಿವಮೊಗ್ಗ ಮಹಾನಗರ ಪಾಲಿಕೆಯು ಕೇವಲ 35 ವಾರ್ಡ್ ಗಳಿಂದ ಸೇರಿದ್ದಾಗಿದೆ. ಪ್ರತಿ ವಾರ್ಡಿನಲ್ಲೂ ಸುಮಾರು ಹತ್ತರಿಂದ ಹನ್ನೆರಡು ಸಾವಿರ ಮತದಾರರು ಇದ್ದಾರೆ. ಶಿವಮೊಗ್ಗ ನಗರವು ಈಗ ಅಗಾಧವಾಗಿ ಉತ್ತಮ ರೀತಿಯಲ್ಲಿ ಬೆಳೆದಿದ್ದು, ಶಿವಮೊಗ್ಗದ ನೂತನ ವಿಮಾನ ನಿಲ್ದಾಣವು ಸಹ ನಗರ ಪ್ರದೇಶದಿಂದ ಹೊರಗಿದೆ. ಅನೇಕ ರೀತಿಯ ನೂತನ ಕೈಗಾರಿಕಾ ಉದ್ಯಮಗಳು ಕೂಡ ಹೊರವಲಯದಲ್ಲಿಯೇ ನಡೆಯುತ್ತಿದ್ದು, ಶಿವಮೊಗ್ಗ ನಗರದ ಹೊರವಲಯದಲ್ಲಿ ಸುಸಜ್ಜಿತವಾದ ಬಡಾವಣೆಗಳು ಕೂಡ ನಿರ್ಮಾಣವಾಗಿವೆ. ಇವುಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಮಹಾನಗರ ಪಾಲಿಕೆಯಿಂದ ಸಾಧ್ಯವಾಗುತ್ತಿಲ್ಲ. ಇದರ ಜೊತೆಗೆ ಶಿವಮೊಗ್ಗ ನಗರದ ಹೊರವಲಯದ ಬಡಾವಣೆಗಳ ನಿವಾಸಿಗಳು ಶಿವಮೊಗ್ಗ ನಗರದ ಮತದಾರರೇ ಆಗಿರುತ್ತಾರೆ ಎಂಬುದಿಲ್ಲಿ ವಿಶೇಷ. ಶಿವಮೊಗ್ಗ ನಗರದ ವ್ಯಾಪ್ತಿಯನ್ನು ಹೆಚ್ಚಿಸುವುದರಿಂದ ಮಹಾನಗರ ಪಾಲಿಕೆಯ ಆದಾಯವು ಕೂಡ ಹೆಚ್ಚಾಗುವುದರ ಜೊತೆಗೆ ಈಗಾಗಲೇ ಸ್ಮಾರ್ಟ್ ಸಿಟಿ ಅಡಿಯಲ್ಲಿ ಸುಮಾರು 11 ವಾರ್ಡ್ ಗಳು ಅಭಿವೃದ್ಧಿಯಾಗಿದ್ದು ಜನಸಂಖ್ಯೆಯು ಹೆಚ್ಚುತ್ತಿರುವುದರಿಂದ ಆರು ತಿಂಗಳ ಹಿಂದಿನಿಂದಲೇ ಪುನರ್ ವಿಂಗಡನೆ ಮಾಡಬೇಕೆಂದು ಸರ್ಕಾರಕ್ಕೆ ಮನವಿಯನ್ನು ಸಹ ಮಾಡಲಾಗಿತ್ತು ಎಂದು ಹೆಚ್.ಸಿ.ಯೋಗೇಶ್ ರವರು ನೀಡಿರುವ ಮನವಿಯಲ್ಲಿದೆ.

ಶಿವಮೊಗ್ಗ ನಗರದ ವ್ಯಾಪ್ತಿಯನ್ನು ಅಧಿಕಗೊಳಿಸಿದ ನಂತರ ಪುನರ್ ವಿಂಗಡನೆ ಅಡಿಯಲ್ಲಿ ನಗರದ ಹೊರವಲಯದ ಭಾಗಗಳನ್ನು ಮಹಾನಗರ ಪಾಲಿಕೆ ವ್ಯಾಪ್ತಿಗೆ ಸೇರಿಸಿಕೊಂಡರೆ ಮಹಾನಗರ ಪಾಲಿಕೆ ವತಿಯಿಂದ ಶಿವಮೊಗ್ಗದ ಬಹಭಾಗವನ್ನು ಅಭಿವೃದ್ಧಿಪಡಿಸಲು ಸಾಧ್ಯ. ಈ ಎಲ್ಲಾ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಪುನರ್ ವಿಂಗಡಣೆ ಆದ ನಂತರವೇ ಚುನಾವಣೆಯನ್ನು ಮಾಡಿದರೆ ಶಿವಮೊಗ್ಗ ನಗರಕ್ಕೆ ಅನುಕೂಲವಾಗುತ್ತದೆಂದು ಯೋಗೇಶ್ ಸಚಿವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.

ಸಾರ್ವಜನಿಕರು ಕೂಡ ಬಹಳಷ್ಟು ಅಹವಾಲುಗಳನ್ನು ನೀಡಿದ್ದಾರೆ. ಈಗಾಗಲೇ ಕಳೆದ ವರ್ಷ ನವೆಂಬರ್ ತಿಂಗಳಿನಲ್ಲೇ ಮಹಾನಗರ ಪಾಲಿಕೆಯ ಸದಸ್ಯರುಗಳ ಅವಧಿ ಮುಗಿದಿದೆ. ಸಚಿವರು ಶಿವಮೊಗ್ಗ ನಗರಕ್ಕೆ ಕೂಡಲೇ ಭೇಟಿ ನೀಡಿ ಪರಿಶೀಲನಾ ಸಭೆ ನಡೆಸಿ, ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಬೇಕೆಂದು ಕೇಳಿಕೊಂಡರು.

ಈ ಸಂದರ್ಭದಲ್ಲಿ ಶಿವಮೊಗ್ಗ ನಗರ ಉತ್ತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಎಸ್. ಶಿವಕುಮಾರ್ , ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ವಿಶ್ವನಾಥ್ ಕಾಶಿ ಉಪಸ್ಥಿತರಿದ್ದರು.