ಡಾ.ರಹಮತ್ ತರಿಕೆರೆ, ಶಿವಕುಮಾರ ಮಾವಲಿ ಸೇರಿದಂತೆ 12 ಜನ ಲೇಖಕರಿಗೆ ಕರ್ನಾಟಕ ಸಂಘದ ಪುಸ್ತಕ ಬಹುಮಾನ*

*ಡಾ.ರಹಮತ್ ತರಿಕೆರೆ, ಶಿವಕುಮಾರ ಮಾವಲಿ ಸೇರಿದಂತೆ 12 ಜನ ಲೇಖಕರಿಗೆ ಕರ್ನಾಟಕ ಸಂಘದ ಪುಸ್ತಕ ಬಹುಮಾನ*

ಶಿವಮೊಗ್ಗದ ಕರ್ನಾಟಕ ಸಂಘದ ಪ್ರತಿಷ್ಠಿತ ಪುಸ್ತಕ ಬಹುಮಾನಗಳ ವಿವರವನ್ನು ಸಂಘದ ಅಧ್ಯಕ್ಷರಾದ ಎಂ.ಎನ್.ಸುಂದರರಾಜ್ ಘೋಷಿಸಿದ್ದು, ಡಾ.ರಹಮತ್ ತರಿಕೆರೆಯವರ ಜೆರುಸಲೆಂ ಪುಸ್ತಕಕ್ಕೆ ಶ್ರೀ ಕುಕ್ಕೆ ಸುಬ್ರಹ್ಮಣ್ಯ ಶಾಸ್ತ್ರಿ ಪ್ರವಾಸ ಸಾಹಿತ್ಯ ಪ್ರಶಸ್ತಿ, ಶಿವಕುಮಾರ ಮಾವಲಿಯವರ ಒಂದು ಕಾನೂನಾತ್ಮಕ ಕೊಲೆ ನಾಟಕ ಕೃತಿಗೆ ಡಾ.ಕೆ.ವಿ.ಸುಬ್ಬಣ್ಣ ಪ್ರಶಸ್ತಿ ಬಂದಿದೆ.

ಒಟ್ಟು 12 ಜನ ಲೇಖಕರಿಗೆ ವಿವಿಧ ಪ್ರಶಸ್ತಿಗಳನ್ನು 2023 ನೇ ಸಾಲಿಗೆ ಕರ್ನಾಟಕ ಸಂಘ ಘೋಷಿಸಿದ್ದು, ಪ್ರಶಸ್ತಿಯ ಮೊತ್ತ 10,000₹ ಹಾಗೂ ಪ್ರಶಸ್ತಿ ಫಲಕ ಇದೆ. ಪ್ರಶಸ್ತಿ ವಿತರಣಾ ಸಮಾರಂಭ ಸೆ.22 ರ ಭಾನುವಾರ ಕರ್ನಾಟಕ ಸಂಘದಲ್ಲಿಯೇ ನಡೆಯಲಿದೆ.