ಬಿಜೆಪಿ ಟಿಕೇಟ್ ಧೋಖಾ ವಿರುದ್ಧ ಆಯನೂರು ಮಂಜುನಾಥ್ ಪತ್ರಿಕಾಗೋಷ್ಠಿ*ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ರಾಜಿನಾಮೆ ತಕ್ಷಣ ಕೊಡಲಿ*

ಬಿಜೆಪಿ ಟಿಕೇಟ್ ಧೋಖಾ ವಿರುದ್ಧ ಆಯನೂರು ಮಂಜುನಾಥ್ ಪತ್ರಿಕಾಗೋಷ್ಠಿ

*ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ರಾಜಿನಾಮೆ ತಕ್ಷಣ ಕೊಡಲಿ*

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಕೊಡಿಸುವುದಾಗಿ ಹೇಳಿ ವಂಚಿಸಿದ ಪ್ರಕರಣದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರ ಹೆಸರು ಪ್ರಸ್ತಾಪವಾಗಿದ್ದು ಮಾತ್ರವಲ್ಲ, ಹಣ ವಹಿವಾಟಿನ ಚಟುವಟಿಕೆಗಳು ಅವರ ಕಚೇರಿಯಲ್ಲಿಯೇ ನಡೆದಿವೆ ಎಂದು ದೂರಲಾಗಿದೆ. ಈ ಹಿನ್ನೆಲೆಯಲ್ಲಿ ಅವರು ತಕ್ಷಣವೇ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಮಾಜಿ ಸಂಸದ ಹಾಗೂ ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಒತ್ತಾಯಿಸಿದ್ದಾರೆ.
ಅವರು ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಬಿಜೆಪಿಯಿಂದ ಟಿಕೆಟ್ ಕೊಡಿಸುವುದಾಗಿ ಹೇಳಿ ವಂಚಿಸಿದ ಪ್ರಕರಣಕ್ಕೆ ಸಂಬAಧಿಸಿದAತೆ ಬೆಂಗಳೂರಿನ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಸುನೀತಾ ಚೌವ್ಹಣ್ ಎಂಬುವವರು ಕೊಟ್ಟ ದೂರಿನ ಮೇಲೆ ಎಪ್‌ಐಆರ್ ದಾಖಲಾಗಿದೆ. ಇದರಲ್ಲಿ ಜೋಷಿಯವರ ಸಹೋದರ ಗೋಪಾಲ ಜೋಷಿ, ಅವರು ಟಿಕೆಟ್ ಕೊಡಿಸಲು 5 ಕೋಟಿ ಡಿಮ್ಯಾಂಡ್ ಮಾಡಿದ್ದರು. ಅದರಂತೆ 25 ಲಕ್ಷ ಮುಖಂಡ ಹಣ ನೀಡಿದ್ದೇವು. ಇದೆಲ್ಲವುದರ ಮಾತುಕತೆ ಜೋಷಿ ಅವರ ಕಚೇರಿಯಲ್ಲಿಯೇ ನಡೆದಿದೆ. ಈಗ ನಮಗೆ ಟಿಕೆಟ್ ಸಿಗಲಿಲ್ಲ, ಮುಂಗಡ ಕೊಟ್ಟ ಹಣವೂ ಬಂದಿಲ್ಲ. ನ್ಯಾಯ ಕೊಡಿಸಿಕೊಡಿ ಎಂದು ಸುನೀತಾ ಚೌವ್ಹಣ್ ಪೊಲೀಸರ ಮುಂದೆ ಮನವಿ ಮಾಡಿದ್ದಾರೆ ಎಂದು ಆಯನೂರು ವಿವರಿಸಿದರು.
ಬಿಜೆಪಿಯಲ್ಲಿ ಒಂದು ಶಿಷ್ಟಾಚಾರ ಇದೆ. ಈ ತರಹದ ಹಣವನ್ನು ಬ್ಯಾಂಕ್ ಮೂಲಕವಲ್ಲದೆ, ಚೆಕ್ ಮೂಲಕ ಇಲ್ಲವೇ ನಗದಾಗಿ ಪಡೆಯುವ ಅಭ್ಯಾಸವಿದೆ. ಅದೇ ರೀತಿ ಇಲ್ಲೂ ನೇರವಾಗಿ ನಗದುಪಡೆಯಲಾಗಿದೆ.ಇದೆಲ್ಲವೂ ಇದ್ದರೂ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿಯವರು , ಪ್ರಕರಣಕ್ಕೂ ತಮಗೂ ಸಂಬAಧವೇ ಇಲ್ಲ ಎಂದಿದ್ದಾರೆ. ಇನ್ನು ವಿಚಿತ್ರಯೆಂದರೆ ಸಹೋದರ ಗೋಪಾಲ ಜೋಷಿಗೂ ತಮಗೂ ಸಂಬAಧವೇ ಇಲ್ಲ ಎಂದಿದ್ದಾರೆ. ಹಾಗೆಯೇ ಪ್ರಕರಣದಲ್ಲಿರುವ ವಿಜಯಲಕ್ಷ್ಮಿ ತಮ್ಮ ಸಹೋದರಿಯೇ ಅಲ್ಲ ಎಂದಿದ್ದಾರೆ. ಹಾಗಾದರೆ ಟಿಕೆಟ್ ಕೊಡಿಸುವುದಾಗಿ ಹೇಳಿ ನಡೆಸಿದ ಹಣದ ವಹಿವಾಟಿನ ಚಟುವಟಿಕೆಗಳು ಅವರದೇ ಕಚೇರಿಯಲ್ಲಿ ನಡೆದಿದ್ದು ಯಾಕೆ? ಅದಕ್ಕೆ ಜೋಷಿಯವರು ಉತ್ತರಿಸಲಿ ಎಂದರು.
ಬಿಜೆಪಿಯಲ್ಲಿ ಇದೆಲ್ಲ ನಡೆಯುತ್ತಾ ಬಂದಿದೆ. ಹಣಕ್ಕಾಗಿ ಟಿಕೆಟ್ ಮಾರಿಕೊಳ್ಳುವ ಸಂಸ್ಕೃತಿ ಅಲ್ಲಿ ಹೊಸದಲ್ಲ. ಈ ಹಿಂದೆ ಕುಂದಾಪುರದಲ್ಲೂ ಇಂತಹದೊAದು ಪ್ರಕರಣ ಸುದ್ದಿ ಆಗಿತ್ತು. ಇನ್ನಷ್ಟು ಪ್ರಕರಣಗಳು ಅವರದೇ ಪಕ್ಷದ ಮುಖಂಡರೇ ಬಹಿರಂಗ ಮಾಡಿದರು. ಮೊನ್ನೆಯಷ್ಟೇ ಅವರದೇ ಪಕ್ಷದ ಮುಖಂಡ ಯತ್ನಾಳ್, ತಮ್ಮಪಕ್ಷದ ನಾಯಕರೊಬ್ಬರು ಒಂದು ಸಾವಿರ ಕೋಟಿ ರೂ. ಇಟ್ಟುಕೊಂಡು ಮುಖ್ಯ ಮಂತ್ರಿಯಾಗಲು ಕಾಯುತ್ತಿದ್ದಾರೆಂದು ಹೇಳಿದ್ದರು. ಇದನ್ನು ಬಿಜೆಪಿಯ ಯಾರು ಕೂಡ ಅಲ್ಲಗಳೆದಿಲ್ಲ. ಅದರರ್ಥವೇನು? ಎಂದು ಆಯನೂರು ಪ್ರಶ್ನಿಸಿದರು.
ಜೋಷಿ ಅವರ ಸಹೋದರ ಗೋಪಾಲ ಜೋಷಿ ಟಿಕೆಟ್ ಕೊಡಿಸುವ ವಿಚಾರದಲ್ಲಿ ಗೃಹ ಸಚಿವರ ಹೆಸರು ಪ್ರಸ್ತಾಪ ವಾಗಿದೆ. ಹಾಗೆಯೇ ಸಚಿವರ ಆಪ್ತ ಕಾರ್ಯದರ್ಶಿ ಹೆಸರು ಪ್ರಸ್ತಾಪಕ್ಕೆ ಬಂದಿದೆ. ಹಾಗಾಗಿ ಜೋಷಿ ಅವರು ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದರಲ್ಲದೆ, ಹಣದ ಯಾವುದೇ ವಹಿವಾಟು ನಡೆಯದ ಮುಡಾ ಪ್ರಕರಣದಲ್ಲಿ ವಿನಾಕಾರಣ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಒತ್ತಾಯಿಸುವ ಜಿಲ್ಲೆಯ ಸಂಸದರು ಕೂಡ ಈಗ ಜೋಷಿಯವರ ರಾಜೀನಾಮೆ ಕೇಳಲಿ ಎಂದು ಕಾಲೆಳೆದರು.
ಅತ್ಯಾಚಾರ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದ ಮುನಿರತ್ನ ಪ್ರಕರಣದಲ್ಲಿ ಬಿಜೆಪಿಯವರ ಧ್ವನಿಯೇ ಇಲ್ಲ. ಹನಿಟ್ರ‍್ಯಾಪ್ ಮಾಡುವ ಒಬ್ಬ ರಾಜಕಾರಣಿಯ ಬಗ್ಗೆ ಇವರ ಮೌನವೇಕೆ ಎನ್ನುವುದನ್ನು ತಿಳಿಸಲಿ ಎಂದರಲ್ಲದೆ,ಮನಿಲಾಡ್ರಿAಗ್ ಅಲ್ಲದ ಜಾಗಕ್ಕೆ ಬರುವ ಇಡಿ , ಕೋವಿಡ್ ನಲ್ಲಿ 2000 ಕೋಟಿ ಹಗರಣ ನಡೆದಿದೆ ಎಂದು ಯತ್ನಾಳ್ ಹೇಳುವ ವಿಚಾರದಲ್ಲಿ ಯಾಕೆ ಇಡಿ ಬರೋದಿಲ್ಲ ಎಂದು ಪ್ರಶ್ನಿದರು.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಅವರು ಬೆಂಗಳೂರಿಗೆ ಬಂದರೆ, ದುಡ್ಡು ದೋಚುವುದಕ್ಕಾಗಿಯೇ ಬಂದಿದ್ದಾರೆAದು ಸಿ.ಟಿ.ರವಿ ಟೀಕಿಸುತ್ತಾರೆ. ಸಿ.ಟಿ.ರವಿ ಕೂಡ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಗಿದ್ದರು. ಆಗ ಅವರು ಕೂಡ ಬೇರೆಬೇರೆ ರಾಜ್ಯಕ್ಕೆ ಹೋಗುತ್ತಿದ್ದರು. ಹಾಗಾದರೆ ಅವರು ಕೂಡ ಇದೇ ರೀತಿ ಹಣ ದೋಚುವುದಕ್ಕೆ ಬೇರೆ ಬೇರೆ ರಾಜ್ಯಗಳಿಗೆ ಹೋಗುತ್ತಿದ್ದರೆ ಎಂದು ಪ್ರಶ್ನಿಸುವ ಮೂಲಕ ತಿರುಗೇಟು ನೀಡಿದರು.
ಪತ್ರಿಕಾಗೋಷ್ಟಿಯಲ್ಲಿ ಮುಖಂಡರಾದ ಶಿವಾನಂದ್, ಹಾಲಪ್ಪ, ಮಧು, ಶ್ಯಾಮಸುಂದರ್, ಧೀರ್‌ರಾಜ್ ಹೊನ್ನವಿಲೆ, ಅಡ್ಡು, ವೈ.ಎಚ್.ನಾಗರಾಜ್, ಮುಕ್ತಿಯಾರ್, ಹಿರಣ್ಣಯ್ಯ, ಶಿ.ಜು. ಪಾಶಾ ಇದ್ದರು.