ರಾಷ್ಟ್ರದ್ರೋಹಿ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯ ವರ್ತನೆ- ಕೆ.ಎಸ್. ಈಶ್ವರಪ್ಪ ಡಿಸಿ ಕಚೇರಿ ಎದುರು ಜಾಗದಲ್ಲಿ ಮುಸ್ಲೀಮರ ಪ್ರತಿಭಟನೆಗೆ ಅವಕಾಶ ಕೊಟ್ಟರೆ ತೀವ್ರ ಹೋರಾಟ- ಕೆ.ಇ.ಕಾಂತೇಶ್
ರಾಷ್ಟ್ರದ್ರೋಹಿ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯ ವರ್ತನೆ- ಕೆ.ಎಸ್. ಈಶ್ವರಪ್ಪ
ಡಿಸಿ ಕಚೇರಿ ಎದುರು ಜಾಗದಲ್ಲಿ ಮುಸ್ಲೀಮರ ಪ್ರತಿಭಟನೆಗೆ ಅವಕಾಶ ಕೊಟ್ಟರೆ ತೀವ್ರ ಹೋರಾಟ- ಕೆ.ಇ.ಕಾಂತೇಶ್

ಶಿವಮೊಗ್ಗ: ರಾಷ್ಟ್ರದ್ರೋಹಿಗಳ ಪಟ್ಟಿಯಲ್ಲಿ ಕರ್ನಾಟಕದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಸೇರಬೇಕಾಗುತ್ತದೆ ಎಂದು ರಾಷ್ಟ್ರಭಕ್ತರ ಬಳಗದ ಸಂಚಾಲಕ ಕೆ.ಎಸ್. ಈಶ್ವರಪ್ಪ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ಘಟನೆಯನ್ನು ಇಡೀ ದೇಶವೇ ಖಂಡಿಸುತ್ತಿದೆ. ಕಾಂಗ್ರೆಸ್ ಹೈಕಮಾಂಡ್ ಕೂಡ ಇದಕ್ಕೆ ಸ್ಪಂದಿಸಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಕೂಡ ರಾಷ್ಟ್ರದ ವಿಚಾರಕ್ಕೆ ಬಂದಾಗ ನಾವೆಲ್ಲಾ ಒಗ್ಗಟಾಗಿ ಇರಬೇಕು ಎಂದಿದ್ದಾರೆ. ಕಾಶ್ಮೀರದ ಮುಖ್ಯಮಂತ್ರಿ ಕೂಡ ಘಟನೆಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಆದರೆ, ಕರ್ನಾಟಕದ ಮುಖ್ಯಮಂತ್ರಿ ಸಿದ್ಧರಾಮಯ್ಯ ಮಾತ್ರ ಮುಸಲ್ಮಾನರ ಚೇಲಾಗಳಂತೆ ಮಾತನಾಡುತ್ತಿರುವುದನ್ನು ನೋಡಿದರೆ ವಿಷಾದವಾಗುತ್ತದೆ ಎಂದರು.
ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿ ಸಿದ್ಧರಾಮಯ್ಯ, ಸಚಿವ ಸಂತೋಷ್ ಲಾಡ್ ಮತ್ತಿತರ ಕಾಂಗ್ರೆಸ್ ನಾಯಕರ ಹೇಳಿಕೆಗೆ ಸಂಬಂಧಿಸಿದಂತೆ ಇದು ಪಕ್ಷದ ಅಭಿಪ್ರಾಯ ಅಲ್ಲ. ವ್ಯಕ್ತಿಗತ ಅಭಿಪ್ರಾಯ ಎನ್ನುತ್ತಿದ್ದಾರೆ. ಹಾಗಾದರೆ ಈ ಹೇಳಿಕೆ ಕೊಟ್ಟವರನ್ನು ಇನ್ನೂ ಏಕೆ ಪಕ್ಷದಲ್ಲಿ ಇಟ್ಟುಕೊಂಡಿದ್ದಾರೆ. ಕೂಡಲೇ ಇವರ ಮೇಲೆ ಕ್ರಮ ಕೈಗೊಳ್ಳಬೇಕು. ಮುಖ್ಯಮಂತ್ರಿ ಹಾಗೂ ವಿರೋಧಾಭಾಸದ ಹೇಳಿಕೆ ನೀಡಿದ ಸಚಿವರು ದೇಶದ ಕ್ಷಮೆಕೇಳಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಹೈಕಮಾಂಡ್ ಸೂಚನೆಯನ್ನು ಮೀರಿ ಮಾತನಾಡುತ್ತಿರುವವರಿಗೆ ಅಭ್ಯಾಸವರ್ಗ ನಡೆಸಿ ಬುದ್ಧಿ ಹೇಳಬೇಕು. ಇದು ದೇಶ ಒಂದಾಗುವ ಹೊತ್ತು. ಸಿಎಂ ಸಿದ್ಧರಾಮಯ್ಯನವರು ಇಷ್ಟೇ ಅಲ್ಲದೇ ಅವರ ವರ್ತನೆಯೇ ಬೇರೆ ಆಗುತ್ತಿದೆ. ನಿನ್ನೆ ಕಾರ್ಯಕ್ರಮವೊಂದರಲ್ಲಿ ಪೊಲೀಸ್ ಅಧಿಕಾರಿಯ ಮೇಲೆ ಹಲ್ಲೆ ಮಾಡಲು ಹೋಗುತ್ತಾರೆ. ಕಪ್ಪು ಬಾವುಟ ಪ್ರದರ್ಶನ ಸಹಜವಾಗಿ ಆಗುತ್ತದೆ. ಹಾಗಾದರೆ, ಈ ಸರ್ಕಾರಕ್ಕೆ ಗೊತ್ತಿರಲಿಲ್ಲವೇ? ಇಷ್ಟು ಸಣ್ಣ ವಿಷಯವನ್ನು ತಿಳಿದುಕೊಳ್ಳದ ಇವರು ಭಾರತದ ಭದ್ರತಾ ವೈಫಲ್ಯದ ಬಗ್ಗೆ ಮಾತನಾಡುತ್ತಾರೆ. ಇನ್ನಾದರೂ ಅವರು ತಮ್ಮ ಬುದ್ಧಿ ತಿದ್ದಿಕೊಳ್ಳಲಿ ಎಂದರು.
ಕಾಂಗ್ರೆಸ್ ಹೈಕಮಾಂಡ್ ಸೂಚನೆಯನ್ನು ಮೀರಿ ಮಾತನಾಡುತ್ತಿರುವವರಿಗೆ ಅಭ್ಯಾಸವರ್ಗ ನಡೆಸಿ ಬುದ್ಧಿ ಹೇಳಬೇಕು. ಇದು ದೇಶ ಒಂದಾಗುವ ಹೊತ್ತು. ಸಿಎಂ ಸಿದ್ಧರಾಮಯ್ಯನವರು ಇಷ್ಟೇ ಅಲ್ಲದೇ ಅವರ ವರ್ತನೆಯೇ ಬೇರೆ ಆಗುತ್ತಿದೆ. ನಿನ್ನೆ ಕಾರ್ಯಕ್ರಮವೊಂದರಲ್ಲಿ ಪೊಲೀಸ್ ಅಧಿಕಾರಿಯ ಮೇಲೆ ಹಲ್ಲೆ ಮಾಡಲು ಹೋಗುತ್ತಾರೆ. ಕಪ್ಪು ಬಾವುಟ ಪ್ರದರ್ಶನ ಸಹಜವಾಗಿ ಆಗುತ್ತದೆ. ಹಾಗಾದರೆ, ಈ ಸರ್ಕಾರಕ್ಕೆ ಗೊತ್ತಿರಲಿಲ್ಲವೇ? ಇಷ್ಟು ಸಣ್ಣ ವಿಷಯವನ್ನು ತಿಳಿದುಕೊಳ್ಳದ ಇವರು ಭಾರತದ ಭದ್ರತಾ ವೈಫಲ್ಯದ ಬಗ್ಗೆ ಮಾತನಾಡುತ್ತಾರೆ. ಇನ್ನಾದರೂ ಅವರು ತಮ್ಮ ಬುದ್ಧಿ ತಿದ್ದಿಕೊಳ್ಳಲಿ ಎಂದರು.
ಜಿಪಂ ಮಾಜಿ ಸದಸ್ಯ ಕೆ.ಇ. ಕಾಂತೇಶ್ ಮಾತನಾಡಿ, ಶಿವಮೊಗ್ಗ ನಗರದ ಜಿಲ್ಲಾಧಿಕಾರಿ ಕಚೇರಿ ಎದುರುಗಡೆ ಇರುವ ಮಹಾನಗರ ಪಾಲಿಕೆಗೆ ಸೇರಿದ ಜಾಗದಲ್ಲಿ ಪ್ರತಿಭಟನೆ ಮಾಡಲು ಮುಸ್ಲಿಂ ಸಂಘಟನೆ ಜಿಲ್ಲಾಡಳಿತಕ್ಕೆ ಅನುಮತಿ ಕೇಳಿದೆ ಎಂದು ತಿಳಿದುಬಂದಿದೆ. ಯಾವುದೇ ಕಾರಣಕ್ಕೂ ಆ ಜಾಗದಲ್ಲಿ ಪ್ರತಿಭಟನೆ ಮಾಡಲು ಅವಕಾಶ ಕೊಡಬಾರದು. ಕೊಟ್ಟರೆ, ಇಡೀ ಶಿವಮೊಗ್ಗದ ಹಿಂದೂ ಮತ್ತು ರಾಷ್ಟ್ರ ಭಕ್ತರು ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಇ. ವಿಶ್ವಾಸ್, ಜಾಧವ್, ಬಾಲು, ನಟರಾಜ್ ಭಾಗವತ್, ಶಿವಾಜಿ, ಎಂ. ಶಂಕರ್ ಸೇರಿದಂತೆ ಹಲವರಿದ್ದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಇ. ವಿಶ್ವಾಸ್, ಜಾಧವ್, ಬಾಲು, ನಟರಾಜ್ ಭಾಗವತ್, ಶಿವಾಜಿ, ಎಂ. ಶಂಕರ್ ಸೇರಿದಂತೆ ಹಲವರಿದ್ದರು.