ಜೂ. 1 ರ ಭಾನುವಾರ ಸಂಜೆ 5.30ಕ್ಕೆ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ‘ಸ್ನೇಹದ ಕಡಲಲ್ಲಿ’ ಸಂಗೀತ ಸಂಜೆ ಕಾರ್ಯಕ್ರಮ* *ಅವತ್ತಿನ ದಿನ ಏನೆಲ್ಲ ವಿಶೇಷವಿರುತ್ತೆ? ಪ್ರಣಯರಾಜ ಶ್ರೀನಾಥ್ ಜೊತೆ ಮತ್ಯಾರು ಬರಲಿದ್ದಾರೆ? ನೀವೇಕೆ ಈ ವಿಶೇಷ ಕಾರ್ಯಕ್ರಮಕ್ಕೆ ಬರಲೇಬೇಕು?…* *ಗಾಯತ್ರಿ ಜ್ಯುವೆಲರ್್ಸ ಮಾಲೀಕರೂ ಕಾರ್ಯಕ್ರಮ ವ್ಯವಸ್ಥಾಪಕರೂ ಆದ ಶಶಿ ಎಸ್. ಮಂಗಳಗಾರ್ ಇಲ್ಲಿ ವಿವರಿಸಿದ್ದಾರೆ…*

*ಜೂ. 1 ರ ಭಾನುವಾರ ಸಂಜೆ 5.30ಕ್ಕೆ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ‘ಸ್ನೇಹದ ಕಡಲಲ್ಲಿ’ ಸಂಗೀತ ಸಂಜೆ ಕಾರ್ಯಕ್ರಮ*

*ಅವತ್ತಿನ ದಿನ ಏನೆಲ್ಲ ವಿಶೇಷವಿರುತ್ತೆ? ಪ್ರಣಯರಾಜ ಶ್ರೀನಾಥ್ ಜೊತೆ ಮತ್ಯಾರು ಬರಲಿದ್ದಾರೆ? ನೀವೇಕೆ ಈ ವಿಶೇಷ ಕಾರ್ಯಕ್ರಮಕ್ಕೆ ಬರಲೇಬೇಕು?…*

*ಗಾಯತ್ರಿ ಜ್ಯುವೆಲರ್್ಸ ಮಾಲೀಕರೂ ಕಾರ್ಯಕ್ರಮ ವ್ಯವಸ್ಥಾಪಕರೂ ಆದ ಶಶಿ ಎಸ್. ಮಂಗಳಗಾರ್ ಇಲ್ಲಿ ವಿವರಿಸಿದ್ದಾರೆ…*

ಶಿವಮೊಗ್ಗ  ನಗರದ  ವಿಶ್ವಕರ್ಮ ಯಕ್ಷಾಭಿಮಾನಿ ವೇದಿಕೆ ಮತ್ತು ಗುಡಿ ಎಂಪೋರಿಯಂ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಜೂ. 1 ರ ಭಾನುವಾರ ಸಂಜೆ 5.30ಕ್ಕೆ ನಗರದ ಕುವೆಂಪು ರಂಗಮಂದಿರದಲ್ಲಿ ‘ಸ್ನೇಹದ ಕಡಲಲ್ಲಿ’ ಸಂಗೀತ ಸಂಜೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಗಾಯತ್ರಿ ಜ್ಯುವೆಲರ್್ಸ ಮಾಲೀಕರೂ ಕಾರ್ಯಕ್ರಮ ವ್ಯವಸ್ಥಾಪಕರೂ ಆದ ಶಶಿ ಎಸ್. ಮಂಗಳಗಾರ್ ತಿಳಿಸಿದರು.
ನಾಗರೀಕರಿಗೆ ಸಂಗೀತದ ಮನರಂಜನೆ ನೀಡುವ  ಉದ್ದೇಶದೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್. ರುದ್ರೇಗೌಡ ಅವರು ಕಾರ್ಯಕ್ರಮ ಉದ್ಘಾಟಿಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕನ್ನಡ ಚಿತ್ರರಂಗದ ಹಿರಿಯ ನಟ ಪ್ರಣಯರಾಜ ಡಾ. ಶ್ರೀನಾಥ್, ಖ್ಯಾತ ಹಿಂದೂಸ್ಥಾನಿ ಗಾಯಕ ಉಸ್ತಾದ್ ಹುಮಾಯಾನ್ ಹರ್ಲಾಪುರ, ಶಿವಮೊಗ್ಗ ಟೈಮ್ಸ್ ಪತ್ರಿಕೆ ಸಂಪಾದಕ ಚಂದ್ರಕಾಂತ್, ಖ್ಯಾತ ಅಂಕಣಕಾರ ಎಂ. ಎನ್. ಸುಂದರಾಜ್,  ಬಂಟರ ಸಂಘದ ಅಧ್ಯಕ್ಷ ಡಾ. ಸತೀಶ್ ಕುಮಾರ್ ಶೆಟ್ಟಿ,  ಹಿರಿಯ ನ್ಯಾಯವಾದಿ ಮಧುಸೂಧನ್, ಗುಡಿ ಎಂಪೋರಿಯಂ ಪಾಲುದಾರರಾದ ಚಿತ್ರಾ ಗಿರೀಶ್ ಭಾಗವಹಿಸಲಿದ್ದಾರೆ.  ಎಚ್ಚರಿಕೆ ಪತ್ರಿಕೆ ಸಂಪಾದಕ  ವೈ.ಕೆ. ಸೂರ್ಯನಾರಾಯಣ್ ಅಧ್ಯಕ್ಷತೆ ವಹಿಸಲಿದ್ದಾರೆಂದು ತಿಳಿಸಿದರು.
ಕಲಾ ಪೋಷಕರಾಗಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ, ವಾಣಿಜ್ಯ ತೆರಿಗೆ ಆಯುಕ್ತರಾದ ವಿಜಯ್ ಕುಮಾರ್  ಎಂ. ಭರತ್ ಹಾಗೂ ಹೆಚ್ಚುವರಿಪೊಲೀಸ್ ಅಧೀಕ್ಷಕ ಅನಿಲ್ ಕುಮಾರವ ಭೂಮರೆಡ್ಡಿ ಅವರಿಗೆ ಗೌರವ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಸಂಗೀತ ಸಂಜೆ ಕಾರ್ಯಕ್ರಮವನ್ನು ಬೆಂಗಳೂರಿನ ಪರಮಪದ ತಂಡವು ನಡೆಸಿಕೊಡಲಿದೆ. ರಾಮಚಂದ್ರ ಹಡಪದ್, ಸ್ಪಶ ಆರ್.ಕೆ  ಮತ್ತು ದಿವ್ಯಾ ಅವರು ಈ ತಂಡದಲ್ಲಿದ್ದು, ಹೆಸರಾಂತ ವೇದಿಕೆ ನಿರೂಪಕ ರಾಘವೇಂದ್ರ ಎನ್. ಕಾಂಚನ್ ಅವರು ನಿರೂಪಣೆ ಮಾಡಲಿದ್ದಾರೆ, ವಾದ್ಯ ವೃಂದದಲ್ಲಿ ದೀಪಕ್ ಜಯುಶೀಲನ್ ಮತ್ತು ತಂಡದವರು ಇದ್ದಾರೆ ಎಂದು ಶಶಿ ಎಸ್. ಮಂಗಳಗಾರ್ ತಿಳಿಸಿದರು.
ಗೋಷ್ಠಿಯಲ್ಲಿ ಭರತ್ ಪ್ರಕಾಶ್,ಸಚಿನ್, ಮಂಜುನಾಥ್ ನವುಲೆ ಮತ್ತು ಅಮೋಘ್ ಇದ್ದರು.