ಡಿಎಸ್ ಎಸ್ ಗುರುಮೂರ್ತಿ ಪತ್ರಿಕಾಗೋಷ್ಠಿ* *ಸಮಾನತೆಯ ಸೂರ್ಯ* *ಪ್ರೊ.ಬಿ.ಕೃಷ್ಣಪ್ಪರ 87ರ ಜನ್ಮದಿನಾಚರಣೆಗೆ ಡಿಎಸ್ ಎಸ್ ಸಿದ್ಧತೆ* *ಜೂ.9 ರಂದು ಶಿವಮೊಗ್ಗದಲ್ಲೇ ನಡೆಯಲಿದೆ ಕಾರ್ಯಕ್ರಮ*

*ಡಿಎಸ್ ಎಸ್ ಗುರುಮೂರ್ತಿ ಪತ್ರಿಕಾಗೋಷ್ಠಿ*

*ಸಮಾನತೆಯ ಸೂರ್ಯ*
*ಪ್ರೊ.ಬಿ.ಕೃಷ್ಣಪ್ಪರ 87ರ ಜನ್ಮದಿನಾಚರಣೆಗೆ ಡಿಎಸ್ ಎಸ್ ಸಿದ್ಧತೆ*

*ಜೂ.9 ರಂದು ಶಿವಮೊಗ್ಗದಲ್ಲೇ ನಡೆಯಲಿದೆ ಕಾರ್ಯಕ್ರಮ*

ಪ್ರೊ. ಬಿ. ಕೃಷ್ಣಪ್ಪನವರು ಸ್ಥಾಪಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ,
ಕರ್ನಾಟಕ ದಲಿತ ನೌಕರರ ಒಕ್ಕೂಟದ ಸಂಯುಕ್ತಾಶ್ರದಲ್ಲಿ
ಸಮಾನತೆಯ ಸೂರ್ಯ ಪ್ರೊ. ಬಿ.ಕೃಷ್ಣಪ್ಪನವರ 87ನೇ ಜನ್ಮದಿನ ಹಾಗೂ ರಾಜ್ಯಮಟ್ಟದ ದಸಂಸ ಪದಾಧಿಕಾರಿಗಳ ಸಮಾವೇಶವನ್ನು ಹಮ್ಮಿಕೊಂಡಿದ್ದೇವೆ ಎಂದು ಡಿಎಸ್ ಎಸ್ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
ಜೂನ್ 9ರ ಸೋಮವಾರ ಬೆಳಗ್ಗೆ 11ಗಂಟೆಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಭವನದಲ್ಲಿ ಉದ್ಘಾಟನೆ ನಡೆಯಲಿದೆ.

ಪ್ರಗತಿಪರ ಚಿಂತಕ ದಿನೇಶ್ ಅಮೀನ್ ಮಟ್ಟು ಕಾರ್ಯಕ್ರಮ ಉದ್ಘಾಟಿಸುವರು.

ಅಧ್ಯಕ್ಷತೆಯನ್ನು
ಎಂ. ಗುರುಮೂರ್ತಿ (ದ.ಸಂ.ಸ. ರಾಜ್ಯ ಸಂಚಾಲಕರು) ವಹಿಸುವರು.

ಮುಖ್ಯ ಅತಿಥಿಗಳಾಗಿ
ಬಲ್ಕೀಶ್ ಬಾನು (ವಿಧಾನ ಪರಿಷತ್‌ ಸದಸ್ಯರು),ಆಯನೂರು ಮಂಜುನಾಥ್ (ಮಾಜಿ ಶಾಸಕರು), ಸಿ.ಎಸ್ ಷಡಕ್ಷರಿ (ರಾಜ್ಯಾಧ್ಯಕ್ಷರು, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಬೆಂಗಳೂರು),
ಡಾ.ಸಣ್ಣರಾಮ
(ವಿಶ್ರಾಂತ ಪ್ರಾಧ್ಯಾಪಕರು, ಶಿವಮೊಗ್ಗ), ಪ್ರೊ. ಬಿ.ಎಲ್. ರಾಜು
(ಅಧ್ಯಕ್ಷರು, ಕರ್ನಾಟಕ ದಲಿತ ನೌಕರರ ಒಕ್ಕೂಟ, ಶಿವಮೊಗ್ಗ),
ಹನುಮಂತಪ್ಪ ಕಾಕರಗಲ್ (ದ.ಸಂ.ಸ. ರಾಜ್ಯ ಸಂಘಟನಾ ಸಂಚಾಲಕರು), ಎನ್. ಮಂಜುನಾಥ್ (ಪ್ರಧಾನ ಕಾರ್ಯದರ್ಶಿಗಳು, ಕರ್ನಾಟಕ ದಲಿತ ನೌಕರರ ಒಕ್ಕೂಟ, ಶಿವಮೊಗ್ಗ), ಎಂ. ಏಳುಕೋಟಿ (ಜಿಲ್ಲಾ ಸಂಚಾಲಕರು ಕರ್ನಾಟಕ ದಲಿತ ಸಂಘರ್ಷ ಸಮಿತಿ ಶಿವಮೊಗ್ಗ) ಆಗಮಿಸುವರು.