ಡಿ. ಮಲ್ಕಪ್ಪ ಅಂಡ್ ಸನ್ಸ್ ನಿಂದ ಶಿವಮೊಗ್ಗದ ಎಪಿಎಂಸಿ ಯಾರ್ಡ್ ನಲ್ಲಿ ಜೂ.12 ರಿಂದ 14 ರ ವರೆಗೆ ಮೂರುದಿನಗಳ ಹೊಂಬಾಳೆ ಉತ್ಸವ*
*ಡಿ. ಮಲ್ಕಪ್ಪ ಅಂಡ್ ಸನ್ಸ್ ನಿಂದ ಶಿವಮೊಗ್ಗದ ಎಪಿಎಂಸಿ ಯಾರ್ಡ್ ನಲ್ಲಿ ಜೂ.12 ರಿಂದ 14 ರ ವರೆಗೆ ಮೂರುದಿನಗಳ ಹೊಂಬಾಳೆ ಉತ್ಸವ*
ಶಿವಮೊಗ್ಗ ನಗರದಲ್ಲಿ ಇದೇ ಮೊದಲ ಬಾರಿಗೆ ಜೂನ್ 12, 13,14ರಂದು ವೈವಿಧ್ಯಮಯ ಹಣ್ಣುಗಳ ಪ್ರದರ್ಶನ ಹಾಗೂ ಮಾರಾಟದ ‘ಹೊಂಬಾಳೆ ಉತ್ಸವ’ ಆಯೋಜಿಸಲಾಗಿದೆ. ಎಪಿಎಂಸಿ ಯಾರ್ಡ್ ನಲ್ಲಿರುವ ಡಿ.ಮಲ್ಕಪ್ಪ ಅಂಡ್ ಸನ್ಸ್ ಸಂಸ್ಥೆ ಆವರಣದಲ್ಲಿ ಈ ಉತ್ಸವ ಆಯೋಜಿಸಲಾಗಿದ್ದು, ಬೆಳಿಗ್ಗೆ ಗಂಟೆಯಿಂದ ರಾತ್ರಿ ಗಂಟೆಯವರೆಗೆ ನಡೆಯಲಿದೆ.
ಮುಖ್ಯವಾಗಿ ಮಾವು, ಹಲಸು, ಬಾಳೆಯ ವೈವಿಧ್ಯಮಯ ತಳಿಗಳು ಇಲ್ಲಿ ಪ್ರದರ್ಶನ ಮತ್ತು ಮಾರಾಟಕ್ಕೆ ಇರಲಿದೆ. ರತ್ನಗಿರಿ, ಅಯ್ಯೋನ್ಸ್, ಮಲಗೊಬ ಜೊತೆಗೆ ಶಕ್ಷರಗುಟ್ಟಿ, ರಸಪುರಿ, ಮಲ್ಲಿಕಾ, ಕಾಲಪ್ಪಾಡು, ಬೈಗನ್ಪಲ್ಲಿ, ಇಮಾಮ್ ಪಸಂದ್, ದಶೇರಿ ಮುಂತಾದ ವಿಶೇಷ, ರುಚಿಕರವಾದ ಹದಿನೈದಕ್ಕೂ ಹೆಚ್ಚು ತಳಿಯ ಮಾವಿನ ಹಣ್ಣುಗಳು ಪ್ರದರ್ಶನ ಹಾಗೂ ಮಾರಾಟ ಇರಲಿದೆ.
ಒಂದು ಲಕ್ಷ ರೂಪಾಯಿಗೆ ಒಂದು ಕೆಜಿ ಬೆಲೆ ಇರುವ ಮೀಯಾಜಾತಿ ತಳಿಯ ಮಾವಿನ ಹಣ್ಣು ಈ ಪ್ರದರ್ಶನದಲ್ಲಿ ಇರಲಿರುವುದು ವಿಶೇಷ. ಇದೂ ಕೂಡಾ ಶಿವಮೊಗ್ಗದಲ್ಲಿ ಪ್ರದರ್ಶನಕ್ಕೆ ಇಡುತ್ತಿರುವುದು ಮೊದಲ ພ.
ಮಾವಿನ ಜೊತೆ ಚಂದ್ರ ಹಲಸು, ಚಂದ್ರಬಕ್ಕೆ, ಬಾಳೆಹಣ್ಣುಗಳಲ್ಲಿ ರಸಬಾಳೆ, ಪಚ್ಚಬಾಳೆ, ನೇಂದ್ರಬಾಳೆ, ಪುಟ್ಟಬಾಳೆ, ಕರಿಬಾಳ, ಚಂದ್ರಬಾಳೆ ಮುಂತಾದ ತಳಿಗಳು ಇರಲಿವೆ.
ಈ ಪ್ರದರ್ಶನದಲ್ಲಿ ದಾಳಿಂಬೆ, ಸೇಬು, ನೇರಳೆ, ಸೀತಾಫಲ, ರಾಮಫಲ, ಮೊಸಂಬಿ, ಪಪ್ಪಾಯ, ಕಲ್ಲಂಗಡಿ, ಕಿತ್ತಲೆ, ದ್ರಾಕ್ಷಿಯಂತ ದೇಶಿ ಹಣ್ಣುಗಳ ಜೊತೆಗೆ ವಿದೇಶಿ ಹಣ್ಣಗಳು ಲಭ್ಯವಿದೆ. ಇವುಗಳಲ್ಲಿ ರಾಂಬುಟಾನ್, ಬಟರ್ಪ್ರೊಟ್, ಬ್ಲೂಬೇರಿ, ಲೀಚಿ, ಸಿಹಿ ಹುಣಸೆ, ಗೋಲ್ಡನ್ ಕಿವಿ, ಹಿಮಾಚಲ್ ಚದ್ರಿ, ಪೀಚ್, ಪ್ಯೂಸಿ ಅಪಲ್, ಚೈನಾ ಪ್ಲಮ್, ಸೌತ್ ಆಫ್ರೀಕ್ ಮ್ಯಾಡ್ರಿನ್, ರೆಡ್ ಪಿಯರ್ಸ್, ಗ್ರೀನ್ ಪಿಯರ್ಸ್, ಡ್ರಾಗನ್ ಫೂಟ್ಸ್ ಇನ್ನೂ ಮುಂತಾದ ಹಣ್ಣುಗಳು ಪ್ರದರ್ಶನ ಹಾಗೂ ಮಾರಾಟಕ್ಕೆ ಇಡಲಾಗುವುದು.
ಎರಡು ಸಾವಿರ ರೂಪಾಯಿಗೆ ಒಂದು ಕೆಜಿ ಸಿಗುವ ಬ್ಲೂಬೆರ್ರಿ ಈ ಪ್ರದರ್ಶನದ ಇನ್ನೊಂದು ವಿಶೇಷ.
ಸಮೃದ್ಧ ಪೋಷಕಾಂಶಯುಕ್ತ 50ಕ್ಕೂ ಹೆಚ್ಚು ವೈವಿಧ್ಯಯರು ಕಳೆಯ ಹಣ್ಣುಗಳು ಒಂದೇ ಸೂರಿ ಮಾರಾಟಕ್ಕೆ ಹಾಗೂ ನೋಡಲು ಸಿಗುತ್ತಿರುವುದು ಅಪರೂಪ. ಇಂಥ ಪ್ರದರ್ಶನ ಹಾಗೂ ಮಾರಾಟ ಶಿವಮೊಗ್ಗ ನಗರದಲ್ಲಿ ಇದೇ ಮೊದಲು.
*ಡಿ.ಮಲ್ಕಪ್ಪ ಅಂಡ್ ಸನ್ಸ್:*
2018ರಲ್ಲಿ ಎಪಿಎಂಸಿ ಯಾರ್ಡ್ ಆವರಣದಲ್ಲಿ ಆರಂಭಗೊಂಡ ಡಿ. ಮಲ್ಕಪ್ಪ ಅಂಡ್ ನನ್ಸ್ ಸಂಸ್ಥೆಯು ಇಂದು ಮಲೆನಾಡಿನ ಅತೀದೊಡ್ಡ ಹಣ್ಣುಗಳ ಮಾರಾಟ ಸಂಸ್ಥೆಯಾಗಿ ರೂಪುಗೊಂಡಿದೆ. ಶಿವಮೊಗ್ಗದೆ ಎಪಿಎಂಸಿ ಆವರಣದಲ್ಲಿರುವ ಮಾವಿನ ಹಣ್ಣು ಹಾಗೂ ಬಾಳೆಹಣ್ಣು ಮಾಗಿಸುವ ಹೈಟೆಕ್ ಘಟಕ ಹಾಗೂ ಶೀಥಲೀಕರಣ ಘಟಕ ಹೊಂದಿರುವ ಏಕೈಕ ಹಣ್ಣು ಮಾರಾಟ ಸಂಸ್ಥೆ.
ಈ ಕಾರ್ಯಕ್ರಮವನ್ನು 12ರಂದು ಬೆಳಗ್ಗೆ 10.30ಕ್ಕೆ ಈ ಪ್ರದರ್ಶನದ ಮಾರಾಟ ಉದ್ಘಾಟನೆಗೊಳ್ಳಲಿದೆ. ಈಶ್ವರೀಯ ವಿದ್ಯಾಲಯದ ಶಿವಮೊಗ್ಗ ಸಂಚಾಲಕರಾದ ರಾಜಯೋಗಿನ ಬ್ರಹ್ಮಕುಮಾರಿ ಅನುಸೂಯ ಅಕ್ಕನವರು ಸಾನ್ನಿಧ್ಯವಹಿಸಲಿದ್ದು, ಶಿವಮೊಗ್ಗ ಶಾಸಕ ಎಸ್.ಎನ್. ಚನ್ನಬಸಪ್ಪ ಉದ್ಘಾಟನೆ ಮಾಡಲಿದ್ದು, ಉದ್ಯಮಿಗಳು ಹಾಗೂ ಮಾಜಿ ಶಾಸಕರಾದ ರುದ್ರೇಗೌಡರು ಅಧ್ಯಕ್ಷತೆವಹಿಸಲಿದ್ದಾರೆ. ಆರ್.ಎಸ್.ಎಸ್. ಪ್ರಮುಖರಾದ ಪಟ್ಟಾಭಿರಾಮ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಡಿ.ಮಲ್ಕಪ್ಪ ಅಂಡ್ ನನ್ಸ್ ಸಂಸ್ಥೆಯ ಡಿ.ಮಲ್ಕಪ್ಪ, ಎಪಿಎಂಸಿ ಕಾರ್ಯದರ್ಶಿ ಹೆಚ್.ವೈ.ಸತೀಶ್ ಉಪಸ್ಥಿತರಿರುತ್ತಾರೆ.
ಪತ್ರಿಕಾಗೋಷ್ಠಿಯಲ್ಲಿ ಇದ್ದವರು: ಡಿ.ಮಲ್ಕಪ್ಪ ಅಂಡ್ ಸನ್ಸ್ ಸಂಸ್ಥೆಯ ಮೋಹನ್ ಬಾ ಕಾಯಿ, ಮಂಜುನಾಥ್ ಎಂ, ಯುವ ಉದ್ಯಮಿ ಹರ್ಷ ಕಾಮತ್, ಅಡಕೆ ವರ್ತಕರ ಸಂಘದ ಮಾಜಿ ಅಧ್ಯಕ್ಷ ಡಿ.ಎಂ.ಶಂಕರಪ್ಪ, ಹೆಚ್.ಸಿ. ಗಣೇಶ್ ಇದ್ದರು.