ಎರಡನೇ ಬಾರಿಗೆ ಶಿವಮೊಗ್ಗ ಮಹಾನಗರ ಅಲಿಕೆ ಆಯುಕ್ತರಾಗಿ ಅಧಿಕಾರವಹಿಸಿಕೊಂಡ ಮಾಯಣ್ಣ ಗೌಡರು…* *ಪಾಲಿಕೆಯಲ್ಲಿ ಸಂಭ್ರಮವೋ ಸಂಭ್ರಮ…*

*ಎರಡನೇ ಬಾರಿಗೆ ಶಿವಮೊಗ್ಗ ಮಹಾನಗರ ಅಲಿಕೆ ಆಯುಕ್ತರಾಗಿ ಅಧಿಕಾರವಹಿಸಿಕೊಂಡ ಮಾಯಣ್ಣ ಗೌಡರು…*

*ಪಾಲಿಕೆಯಲ್ಲಿ ಸಂಭ್ರಮವೋ ಸಂಭ್ರಮ…*

ಮಂಡ್ಯದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದ ಕೆ.ಮಾಯಣ್ಣ ಗೌಡರನ್ನು ರಾಜ್ಯ ಸರ್ಕಾರ ಮತ್ತೊಮ್ಮೆ ಶಿವಮೊಗ್ಗ ಮಹಾನಗರ ಪಾಲಿಕೆಗೆ ಆಯುಕ್ತರನ್ನಾಗಿ ನೇಮಿಸಿದ್ದು, ಇಂದು ಅಪರಾಹ್ನ ಅಧಿಕಾರ ಸ್ವೀಕರಿಸಿದರು.

ಪಾಲಿಕೆಯ ಬಹುತೇಕ ಸಿಬ್ಬಂದಿಗಳಿಗೂ ಪ್ರೀತಿಪಾತ್ರರಾಗಿರುವ ಮಾಯಣ್ಣ ಗೌಡರು ಮತ್ತೆ ಶಿವಮೊಗ್ಗಕ್ಕೆ ವರ್ಗವಾಗಿ ಬರುತ್ತಾರೆಂಬ ಚರ್ಚೆಗಳು ಆಗಾಗ್ಗೆ ಕೇಳಿಸುತ್ತಲೇ ಇದ್ದವು.

ಕೆ.ಮಾಯಣ್ಣ ಗೌಡರ ವರ್ಗಾವಣೆಯ ನಂತರ ಶ್ರೀಮತಿ ಕವಿತಾ ಯೋಗಪ್ಪನವರ್ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿದ್ದರು.

ಈಗ ಕವಿತಾ ಯೋಗಪ್ಪನವರ್ ರವರನ್ನು ಶಿವಮೊಗ್ಗ ಪಾಲಿಕೆಯ ಆಯುಕ್ತೆ ಸ್ಥಾನದಿಂದ ತೆರವುಗೊಳಿಸಿರುವ ಸರ್ಕಾರ ಅವರಿಗೆ ಬೇರೆ ಹುದ್ದೆ ನಿಗದಿಪಡಿಸದೇ ಆದೇಶಿಸಿದೆ.

ಎರಡನೇ ಬಾರಿಗೆ ಕೆ.ಮಾಯಣ್ಣ ಗೌಡರು ಪಾಲಿಕೆ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ್ದಾರೆ.