ಕೊಲೆ ಮಾಡಿ ಕೊಲೆಯ ಸೇಡು ತೀರಿಸಿಕೊಂಡರಾ ಕೊಲೆಗಾರರು?!* *ಬೊಮ್ಮನಕಟ್ಟೆಯಲ್ಲಿ ಕೊಲೆಯಾದ ಅವಿನಾಶ್!* *ಯಾಕಾಯ್ತು ಮರ್ಡರ್?*

*ಕೊಲೆ ಮಾಡಿ ಕೊಲೆಯ ಸೇಡು ತೀರಿಸಿಕೊಂಡರಾ ಕೊಲೆಗಾರರು?!*

*ಬೊಮ್ಮನಕಟ್ಟೆಯಲ್ಲಿ ಕೊಲೆಯಾದ ಅವಿನಾಶ್!*

*ಯಾಕಾಯ್ತು ಮರ್ಡರ್?*

ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಐದು ವರ್ಷಗಳ ಕಾಲ ಜೈಲಲ್ಲಿದ್ದು, ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ ರೌಡಿಶೀಟರ್ ಅವಿ@ ಅವಿನಾಶ್(32) ಭೀಕರವಾಗಿ ಕೊಲೆಯಾಗಿರುವ ಘಟನೆ ಶಿವಮೊಗ್ಗದ ವಿನೋಬನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಎಣ್ಣೆಪಾರ್ಟಿಗೆಂದು ಬೊಮ್ಮನಕಟ್ಟೆಯ ಕೆರೆ ಬಳಿ ಅವಿಯನ್ನು ಕರೆದೊಯ್ದು ಕೊಲೆ ಮಾಡಿ ಆರೋಪಿಗಳು ಪರಾರಿಯಾಗಿದ್ದು, ಕೊಲೆಗಡುಗರ ಹುಡುಕಾಟದಲ್ಲಿ ಪೊಲೀಸರು ತೊಡಗಿದ್ದಾರೆ.