ಗಮನ ಸೆಳೆದ ಪೊಲೀಸ್ ಇಲಾಖೆಯ ವಾಕ್ and ರನ್ ಅಭಿಯಾನ*
*ಗಮನ ಸೆಳೆದ ಪೊಲೀಸ್ ಇಲಾಖೆಯ ವಾಕ್ and ರನ್ ಅಭಿಯಾನ*
ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆವತಿಯಿಂದ ಹಮ್ಮಿಕೊಂಡಿದ್ದ *ಮಾದಕ ವಸ್ತುಗಳ ಕುರಿತು ಜನಜಾಗೃತಿ* ಅಭಿಯಾನ ಗಮನ ಸೆಳೆಯಿತು.
ಭಾನುವಾರ ಬೆಳಿಗ್ಗೆ ಶಿವಮೊಗ್ಗ ನಗರದಲ್ಲಿ ನಡೆದ Walk and Run (ನಡಿಗೆ ಮತ್ತು ಓಟ)ಗೆ ಅಡಿಷನಲ್ ಎಸ್ ಪಿ ಅನಿಲ್ ಕುಮಾರ್ ಭೂಮರಡ್ಡಿ ಚಾಲನೆ ನೀಡಿದರು.
DAR ಕವಾಯತು ಮೈದಾನದಿಂದ ಪ್ರಾರಂಭವಾದ ನಡಿಗೆ ಅಶೋಕ ವೃತ್ತ, ಎ ಎ ವೃತ್ತ, ಗೋಪಿ ವೃತ್ತ, ಜೈಲ್ ವೃತ್ತ, ಐ ಬಿ ವೃತ್ತದ ಮುಖಾಂತರ ಪುನಃ ಶಿವಮೊಗ್ಗ DAR ಕವಾಯತು ಮೈದಾನಕ್ಕೆ ಬಂದು ಮುಕ್ತಾಯಗೊಂಡಿತು.
ಈ *Walk and Run (ನಡಿಗೆ ಮತ್ತು ಓಟ)* ನಲ್ಲಿ ಸಂಜೀವ್ ಕುಮಾರ್ (ಪೊಲೀಸ್ ಉಪಾಧೀಕ್ಷಕರು, ಶಿವಮೊಗ್ಗ ಬಿ ಉಪ ವಿಭಾಗ), ಕೃಷ್ಣ ಮೂರ್ತಿ (ಪೊಲೀಸ್ ಉಪಾಧೀಕ್ಷಕರು CEN ಪೊಲೀಸ್ ಠಾಣೆ) ಮತ್ತು ಶಿವಮೊಗ್ಗ ನಗರದ ಪೊಲೀಸ್ ನಿರೀಕ್ಷಕರು, ಪೊಲೀಸ್ ಉಪ ನಿರೀಕ್ಷಕರು, ಪೊಲೀಸ್ ಅಧಿಕಾರಿ ಸಿಬ್ಬಂದಿಗಳು ಭಾಗವಹಿಸಿದ್ದರು.