ರಾಷ್ಟ್ರಭಕ್ತರ ಬಳಗದಿಂದ* *ಧರ್ಮಸ್ಥಳ ರಕ್ಷಾ ಜಾಥಾ ನಾಳೆ* *ಬೆಣ್ಣೆದೋಸೆ ತಿಂದು ಈಶ್ವರಪ್ಪರ ಮನೆಯಿಂದ ಆರಂಭವಾಗಲಿದೆ ಜಾಥಾ* *ಕೆ.ಎಸ್. ಈಶ್ವರಪ್ಪ ನೇತೃತ್ವ* *ಕೆ.ಈ. ಕಾಂತೇಶ್ ಮುಂದಾಳತ್ವ*
*ರಾಷ್ಟ್ರಭಕ್ತರ ಬಳಗದಿಂದ*
*ಧರ್ಮಸ್ಥಳ ರಕ್ಷಾ ಜಾಥಾ ನಾಳೆ*
*ಬೆಣ್ಣೆದೋಸೆ ತಿಂದು ಈಶ್ವರಪ್ಪರ ಮನೆಯಿಂದ ಆರಂಭವಾಗಲಿದೆ ಜಾಥಾ*
*ಕೆ.ಎಸ್. ಈಶ್ವರಪ್ಪ ನೇತೃತ್ವ*
*ಕೆ.ಈ. ಕಾಂತೇಶ್ ಮುಂದಾಳತ್ವ*
ಶಿವಮೊಗ್ಗದಿಂದ ಧರ್ಮಸ್ಥಳಕ್ಕೆ ಮಾಜಿ ಉಪಮುಖ್ಯಮಂತ್ರಿ, ಹಾಗೂ ರಾಷ್ಟ್ರಭಕ್ತ ಬಳಗದ ನಾಯಕರಾದ ಕೆ.ಎಸ್. ಈಶ್ವರಪ್ಪ ಅವರ ನೇತೃತ್ವದಲ್ಲಿ ನಾಳೆ ಆಯೋಜಿಸಿರುವ ಧರ್ಮ ರಕ್ಷಾ ಜಾಥಕ್ಕೆ ಈಗಾಗಲೇ 150ಕ್ಕೂ ಹೆಚ್ಚು ವಾಹನಗಳು ಸಿದ್ಧಗೊಂಡಿದ್ದು, ಸುಮಾರು 700 ರಿಂದ 800 ರಾಷ್ಟ್ರ ಭಕ್ತರ ತಂಡ ಧರ್ಮಸ್ಥಳಕ್ಕೆ ಭೇಟಿ ನೀಡಲಿದೆ.
ಅಧರ್ಮೀಯರ ವಿರುದ್ಧದ ಈ ಧರ್ಮ ರಕ್ಷಾ ಜಾಥಾಕ್ಕೆ ಸಕಲ ಸಿದ್ಧತೆಗಳು ನಡೆದಿದ್ದು, ಬೆಳಿಗ್ಗೆ 8ಕ್ಕೆ ಕೆ.ಎಸ್.ಈಶ್ವರಪ್ಪ ಅವರ ಮನೆಯಲ್ಲಿ ಬೆಣ್ಣೆದೋಸೆ ತಿಂಡಿ ಸೇವಿಸಿದ ನಂತರ ಧರ್ಮ ರಕ್ಷಿಸುವ ಹಿನ್ನೆಲೆಯಲ್ಲಿ ಆಯೋಜಿಸಿರುವ ಜಾಥಾ ಹೊರಡಲಿದೆ ಎಂದು ರಾಷ್ಟ್ರಭಕ್ತರ ಬಳಗದ ಪ್ರಕಟಣೆ ತಿಳಿಸಿದೆ.
ಶಿವಮೊಗ್ಗದಿಂದ ಕಡೂರು, ಬೀರೂರು, ಚಿಕ್ಕಮಗಳೂರು ಮಾರ್ಗವಾಗಿ ಮೂಡಿಗೆರೆ ಬಳಿ ಒಂದು ಪುಟ್ಟ ವಿರಾಮ ಪಡೆದು ಲಘು ಉಪಹಾರದೊಂದಿಗೆ ಮುಂದೆ ಸಾಗಿ ಮಧ್ಯಾಹ್ನ 1:30ಕ್ಕೆ ಧರ್ಮಸ್ಥಳಕ್ಕೆ ಈ ಜಾಥಾ ತಲುಪಲಿದೆ ಎಂದು ಜಾಥಾದ ಮುಂದಾಳತ್ವ ವಹಿಸಿಕೊಂಡಿರುವ ರಾಷ್ಟ್ರಭಕ್ತ ಬಳಗದ ಯುವ ನಾಯಕ ಕೆ. ಇ. ಕಾಂತೇಶ್ ತಿಳಿಸಿದ್ದಾರೆ.
ಮಧ್ಯಾಹ್ನ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ತುಂಗಾ, ಗಂಗಾ,ನೇತ್ರಾವತಿ ನದಿಯ ತೀರ್ಥವನ್ನು ಹಾಕುವ ಮೂಲಕ ಧರ್ಮವನ್ನು ರಕ್ಷಿಸುವ ಕಾರ್ಯ ಮಾಡಲಿದೆ ಎಂದು ಅವರು ತಿಳಿಸಿದ್ದಾರೆ.
ತದನಂತರ, ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗಡೆ ಅವರ ಜೊತೆ ಮಾತನಾಡಿ, ಅವರಿಗೆ ಧರ್ಮಕ್ಕೆ ಕಳಂಕ ತರುತ್ತಿರುವವರ ವಿರುದ್ಧದ ಹೋರಾಟಕ್ಕೆ ನಮ್ಮ ಬೆಂಬಲವಿದೆ ಎಂದು ರಾಷ್ಟ್ರ ಭಕ್ತರು ಘೋಷಿಸಿ, ಬೆಂಬಲ ನೀಡಲಿದ್ದಾರೆ.
ನಂತರ ಶಿವಮೊಗ್ಗಕ್ಕೆ ಜಾಥಾ ವಾಪಾಸ್ ಆಗಲಿದೆ ಎಂದು ಪ್ರಮುಖರಾದ ವಿಶ್ವಾಸ್ ತಿಳಿಸಿದ್ದಾರೆ.