ಗೆದ್ದು ಮೋದಿ ಬಳಿಯೇ ಹೋಗ್ತೇನೆ;’ ಮನೆ ಬಳಿಯೇ ಚುನಾವಣಾ ಕಚೇರಿ ಆರಂಭಿಸಿದ ಕೆ.ಎಸ್.ಈಶ್ವರಪ್ಪ

‘ಗೆದ್ದು ಮೋದಿ ಬಳಿಯೇ ಹೋಗ್ತೇನೆ;’ ಮನೆ ಬಳಿಯೇ ಚುನಾವಣಾ ಕಚೇರಿ ಆರಂಭಿಸಿದ ಕೆ.ಎಸ್.ಈಶ್ವರಪ್ಪ ನಾನು ಯಾವುದೇ ಕಾರಣಕ್ಕೂ ಸ್ಪರ್ಧೆಯಿಂದ ಹಿಂದೆ ಸರಿಯಲ್ಲ. ನಾನು ಗೆದ್ದ ನಂತರ ಪ್ರಧಾನಿ ಮೋದಿ ಬಳಿ ಹೋಗಿಯೇ ಹೋಗುತ್ತೇನೆ ಎಂದು ಬಂಡಾಯ ಅಭ್ಯರ್ಥಿ ಕೆಎಸ್ ಈಶ್ವರಪ್ಪ (KS Eshwarappa) ಹೇಳಿದ್ದಾರೆ. ನಗರದಲ್ಲಿ ಈಶ್ವರಪ್ಪ ನಿವಾಸದಲ್ಲಿ ನೂತನ ಚುನಾವಣಾ ಕಚೇರಿ ಉದ್ಘಾಟನೆ ಮಾಡಿ ಬಳಿಕ ಮಾತನಾಡಿದ ಅವರು, ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ತೀರ್ಮಾನ ಮಾಡಲಾಗಿದೆ. ಹಾಗಾಗಿ ನನ್ನ ನಿವಾಸದಲ್ಲೇ ಕಚೇರಿ ಉದ್ಘಾಟನೆ ಮಾಡಿದ್ದೇವೆ. ನನ್ನ ಮಗನನ್ನು…

Read More

ನನ್ನನ್ನು ಎನ್ ಕೌಂಟರ್ ಮಾಡುವುದಾಗಿ ಬೆದರಿಕೆ ಪತ್ರ, ನನ್ನ ಹೆಣ ಬೀಳಿಸಿಯಾದ್ರೂ ಬಿಜೆಪಿಯವ್ರು ಚುನಾವಣೆ ಗೆಲ್ಲಬೇಕು ಎಂಬ ಪ್ಲಾನ್ ನಲ್ಲಿದ್ದಾರೆ’: ಪ್ರಿಯಾಂಕ್ ಖರ್ಗೆ

ನನ್ನನ್ನು ಎನ್ ಕೌಂಟರ್ ಮಾಡುವುದಾಗಿ ಬೆದರಿಕೆ ಪತ್ರ, ನನ್ನ ಹೆಣ ಬೀಳಿಸಿಯಾದ್ರೂ ಬಿಜೆಪಿಯವ್ರು ಚುನಾವಣೆ ಗೆಲ್ಲಬೇಕು ಎಂಬ ಪ್ಲಾನ್ ನಲ್ಲಿದ್ದಾರೆ’: ಪ್ರಿಯಾಂಕ್ ಖರ್ಗೆ ಭಾರತೀಯ ಜನತಾ ಪಾರ್ಟಿಯವರು ಗಲಭೆ ಸೃಷ್ಟಿ ಮಾಡಿ ಚುನಾವಣೆ ಮಾಡಬೇಕು ಅಂತಿದ್ದಾರೆ. ನನ್ನ ಹೆಣ ಬೀಳಿಸಿಯಾದರೂ ಚುನಾವಣೆ ಗೆಲ್ಲುವ ಯೋಜನೆಯಲ್ಲಿದ್ದಾರೆ. ಅಲ್ಲದೆ, ತನಗೆ ಮತ್ತೊಂದು ಜೀವ ಬೆದರಿಕೆ ಪತ್ರ ಬಂದಿರುವುದಾಗಿ ಮತ್ತು ಅದರಲ್ಲಿ ತನ್ನನ್ನು ಎನ್ಕೌಂಟರ್ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ ಮಾಡಿದ್ದಾರೆ. ಕಲಬುರಗಿ: ಭಾರತೀಯ…

Read More

ಬಿ.ವೈ.ರಾಘವೇಂದ್ರರವರು ಸುದ್ದಿಗೋಷ್ಠಿಯಲ್ಲಿ ಮಾತಾಡಿದ್ದೇನು?   ‘ಶರಾವತಿ ಸಂತ್ರಸ್ಥರ ಮತ್ತು ವಿ.ಐ.ಎಸ್.ಎಲ್. ಕಾರ್ಖಾನೆ ಕಾರ್ಮಿಕರ ಸಮಸ್ಯೆಯನ್ನು  ಖಂಡಿತ ಬಗೆಹರಿಸುತ್ತೇನೆ’   ಸಂಸ್ಕೃತಿ ಮರೆತ ಕಾಂಗ್ರೆಸ್- ಮಧುಗೆ ಹೇಗೆ ಮಾತಾಡಬೇಕೆಂಬುದೇ ಗೊತ್ತಿಲ್ಲ’

ಬಿ.ವೈ.ರಾಘವೇಂದ್ರರವರು ಸುದ್ದಿಗೋಷ್ಠಿಯಲ್ಲಿ ಮಾತಾಡಿದ್ದೇನು? ‘ಶರಾವತಿ ಸಂತ್ರಸ್ಥರ ಮತ್ತು ವಿ.ಐ.ಎಸ್.ಎಲ್. ಕಾರ್ಖಾನೆ ಕಾರ್ಮಿಕರ ಸಮಸ್ಯೆಯನ್ನು  ಖಂಡಿತ ಬಗೆಹರಿಸುತ್ತೇನೆ’ ಸಂಸ್ಕೃತಿ ಮರೆತ ಕಾಂಗ್ರೆಸ್- ಮಧುಗೆ ಹೇಗೆ ಮಾತಾಡಬೇಕೆಂಬುದೇ ಗೊತ್ತಿಲ್ಲ’ ಶಿವಮೊಗ್ಗ, ಶರಾವತಿ ಸಂತ್ರಸ್ಥರ ಮತ್ತು ವಿ.ಐ.ಎಸ್.ಎಲ್. ಕಾರ್ಖಾನೆ ಕಾರ್ಮಿಕರ ಸಮಸ್ಯೆಯನ್ನು ನಾನು ಖಂಡಿತ ಬಗೆಹರಿಸುತ್ತೇನೆ ಈಗಾಗಲೇ ಈ ಬಗ್ಗೆ ಪ್ರಯತ್ನದ ಹಾದಿ ಮುಂದುವರೆದಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು. ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶರಾವತಿ ಸಂತ್ರಸ್ಥರ ಮತ್ತು ವಿ.ಐ.ಎಸ್.ಎಲ್. ಕಾರ್ಖಾನೆ ಸಮಸ್ಯೆ ಬಿಜೆಪಿ ಸರ್ಕಾರದ್ದಲ್ಲ. ೧೯೮೦ರವರೆಗು ಮತ್ತು ಅದಾದ…

Read More

ಲೋಕಾ ಚುನಾವಣೆ;ದಾಖಲೆ ಇಲ್ಲದ ಹಣ ವಶ-ಅನುಮತಿ ಪಡೆಯದೆ ಊಟ ವ್ಯವಸ್ಥೆ – ಅಕ್ರಮ ಮದ್ಯ ವಶ: ಪ್ರಕರಣ ದಾಖಲು*

*ದಾಖಲೆ ಇಲ್ಲದ ಹಣ ವಶ-ಅನುಮತಿ ಪಡೆಯದೆ ಊಟ ವ್ಯವಸ್ಥೆ – ಅಕ್ರಮ ಮದ್ಯ ವಶ: ಪ್ರಕರಣ ದಾಖಲು* ಶಿವಮೊಗ್ಗ; ಲೋಕಸಭಾ ಚುನಾವಣೆ ಹಿನ್ನೆಲೆ ಮತಕ್ಷೇತ್ರವಾರು ಚೆಕ್‍ಪೋಸ್ಟ್‍ಗಳನ್ನು ಸ್ಥಾಪಿಸಿದ್ದು, ಮಾ.27 ರಂದು ಶಿಕಾರಿಪುರ-115 ಮತ ಕ್ಷೇತ್ರ ವ್ಯಾಪ್ತಿಯ ಕವಾಸ್‍ಪುರ ಚೆಕ್‍ಪೋಸ್ಟ್‍ನಲ್ಲಿ ಹನುಮಂತಪ್ಪ ಎಂಬುವವರು ದಾಖಲೆ ಇಲ್ಲದೆ ಹೊಂದಿದ್ದ ರೂ.73,736 ಗಳನ್ನು ಎಸ್‍ಎಸ್‍ಟಿ ತಂಡ ವಶಪಡಿಸಿಕೊಂಡಿದೆ. ಭದ್ರಾವತಿ-112 ಮತಕ್ಷೇತ್ರ ವ್ಯಾಪ್ತಿಯ ಹಳ್ಳಿಕೆರೆ ಚೆಕ್‍ಪೋಸ್ಟ್‍ನಲ್ಲಿ ರಾಮು ಮತ್ತು ಕೆ.ತೀರ್ಥಕುಮಾರ್ ಎಂಬುವವರು ಹೊಂದಿದ್ದ ರೂ.1,25,000 ಗಳನ್ನು ವಶಕ್ಕೆ ಪಡೆದು ಮುಂದಿನ ಕ್ರಮಕ್ಕಾಗಿ ಸಲ್ಲಿಸಲಾಗಿದೆ….

Read More

ಹಾರನಳ್ಳಿಯಲ್ಲಿ ಗೀತಾ ಶಿವರಾಜ್ ಕುಮಾರ್ ಪ್ರಚಾರ ಸಭೆ; ಗ್ರಾಮಾಂತರಕ್ಕೆ ಬಂಗಾರಪ್ಪ ಕೊಡುಗೆ ಅಪಾರ: ಮಧುಬಂಗಾರಪ್ಪ

ಹಾರನಳ್ಳಿಯಲ್ಲಿ ಗೀತಾ ಶಿವರಾಜ್ ಕುಮಾರ್ ಪ್ರಚಾರ ಸಭೆ; ಗ್ರಾಮಾಂತರಕ್ಕೆ ಬಂಗಾರಪ್ಪ ಕೊಡುಗೆ ಅಪಾರ: ಮಧುಬಂಗಾರಪ್ಪ ಶಿವಮೊಗ್ಗ:’ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಿಗೆ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರು ಅಪಾರ ಕೊಡುಗೆ ನೀಡಿದ್ದಾರೆ. ಅದೇ, ಧೈರ್ಯದಿಂದ ಗೀತಾಕ್ಕಗೆ ಮತ ನೀಡಿ, ಚುನಾವಣೆಯಲ್ಲಿ ಗೆಲುವು ಸಾಧಿಸಲು ಆಶೀರ್ವದಿಸಬೇಕು ಎಂದು ಕೇಳಿಕೊಳ್ಳುತ್ತಿದ್ದೇನೆ‌’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧುಬಂಗಾರಪ್ಪ ಹೇಳಿದರು. ತಾಲ್ಲೂಕಿನ ಹಾರನಹಳ್ಳಿ ಗ್ರಾಮದಲ್ಲಿ ಬುಧವಾರ ಆಯೋಜಿಸಿದ್ದ ಲೋಕಸಭಾ ಚುನಾವಣೆ ಶಿವಮೊಗ್ಗ ಕ್ಷೇತ್ರದ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದರು. ರಾಜ್ಯದಲ್ಲಿ…

Read More

ರಂಗಾಯಣದಲ್ಲಿ ವಿಶ್ವರಂಗಭೂಮಿ ದಿನಾಚರಣೆ ಪ್ರಯುಕ್ತ ರಂಗಚಿಂತನೆ ಒಟ್ಟುಗೂಡಿ ನಡೆಯುವುದನ್ನು ರಂಗಭೂಮಿ ಕಲಿಸುತ್ತದೆ- ಪುರುಷೋತ್ತಮ ತಲವಾಟ

ರಂಗಾಯಣದಲ್ಲಿ ವಿಶ್ವರಂಗಭೂಮಿ ದಿನಾಚರಣೆ ಪ್ರಯುಕ್ತ ರಂಗಚಿಂತನೆ ಒಟ್ಟುಗೂಡಿ ನಡೆಯುವುದನ್ನು ರಂಗಭೂಮಿ ಕಲಿಸುತ್ತದೆ- ಪುರುಷೋತ್ತಮ ತಲವಾಟ ಶಿವಮೊಗ್ಗ; ನಮ್ಮ ನಡುವೆ ಇರುವ ಕಲೆಗಳಲ್ಲಿ ರಂಗಭೂಮಿ ಅತೀ ಹೆಚ್ಚು ಜೀವಂತಿಕೆ ಇರುವ ಕಲೆಯಾಗಿದ್ದು, ಒಟ್ಟುಗೂಡಿ ನಡೆಯುವುದನ್ನು ರಂಗಭೂಮಿ ಕಲಿಸುತ್ತದೆ ಎಂದು ಹಿರಿಯ ರಂಗಕರ್ಮಿ ಪುರುಷೋತ್ತಮ ತಲವಾಟ ಹೇಳಿದರು. ಅವರು ಇಂದು ಶಿವಮೊಗ್ಗ ರಂಗಾಯಣದಲ್ಲಿ ವಿಶ್ವರಂಗಭೂಮಿ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ರಂಗಚಿಂತನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಹಲವಾರು ಕಲೆಗಳು ಸಮೂಹದಿಂದ ರೂಪುಗೊಳ್ಳುವ ರಂಗಕಲೆ ವ್ಯಕ್ತಿಯನ್ನು ಸೃಜನಶೀಲನನ್ನಾಗಿಸುತ್ತದೆ. ರಂಗದ ಮೇಲೆ ಒಂದು ಎರಡು…

Read More

ಕೋಟೆಗಂಗೂರು ಗ್ರಾ.ಪಂ. ಅಧ್ಯಕ್ಷ ಡಾ. ಡಿ.ಬಿ. ವಿಜಯಕುಮಾರ್ ಇನ್ನಿಲ್ಲ

ಕೋಟೆಗಂಗೂರು ಗ್ರಾ.ಪಂ. ಅಧ್ಯಕ್ಷ ಡಾ. ಡಿ.ಬಿ. ವಿಜಯಕುಮಾರ್ ಇನ್ನಿಲ್ಲ ಶಿವಮೊಗ್ಗ, ಶಿವಮೊಗ್ಗ ತಾಲ್ಲೂಕು ಕೋಟೆಗಂಗೂರು ಗ್ರಾಮ ಪಂಚಾಯತಿ ಅಧ್ಯಕ್ಷ, ದೇವಕಾತಿಕೊಪ್ಪ (ಜಕಾತಿಕೊಪ್ಪ) ದ ಮುಖಂಡರು, ಶಿವಮೊಗ್ಗ ಗ್ರಾಮಾಂತರ ವೀರಶೈವ ಸಮಾಜದ ಅಧ್ಯಕ್ಷರೂ ಆದ ಡಾ. ಡಿ.ಬಿ. ವಿಜಯ ಕುಮಾರ್ ನಿನ್ನೆ (ಮಾ. 26) ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 64 ವರ್ಷ ವಯಸ್ಸಾಗಿತ್ತು. ಸರಳ ಸಜ್ಜನಿಕೆ ಹಾಗೂ ಎಲ್ಲರ ಜೀವನಾಡಿಯಾಗಿ ಸ್ಪಂದಿಸುತ್ತಿದ್ದ ವಿಜಯಕುಮಾರ್ (ಎಲ್ಲರ ಅಚ್ಚುಮೆಚ್ಚಿನ ವಿಜಯಣ್ಣ) ಅವರು ಪ್ರಸಕ್ತ ಕೋಟೆಗಂಗೂರು ಗ್ರಾಮಪಂಚಾಯಿತಿ ಅಧ್ಯಕ್ಷರಾಗಿ ಇತ್ತೀಚೆಗಷ್ಟೆ ಗ್ರಾಪಂ…

Read More

ನೈರುತ್ಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬದಲಾಯಿಸಿ; ಆಯನೂರು ಪರ ಕೆಲಸ ಮಾಡೋಲ್ಲ ಎಂದ ಎಸ್.ಪಿ.ದಿನೇಶ್- ರಂಗಸ್ವಾಮಿ ಗೌಡ

ನೈರುತ್ಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬದಲಾಯಿಸಿ; ಆಯನೂರು ಪರ ಕೆಲಸ ಮಾಡೋಲ್ಲ ಎಂದ ಎಸ್.ಪಿ.ದಿನೇಶ್- ರಂಗಸ್ವಾಮಿ ಗೌಡ ನೈರುತ್ಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಕಾಂಕ್ಷಿಗಳ ಪತ್ರಿಕಾಗೋಷ್ಠಿ *ಎಸ್.ಪಿ.ದಿನೇಶ್, ಉಪಾಧ್ಯಕ್ಷರು, ಜಿಲ್ಲಾ ಕಾಂಗ್ರೆಸ್ ಸಮಿತಿ, ನೈರುತ್ಯ ಪದವೀಧರರ ಕ್ಷೇತ್ರದ ಕಾಂಗ್ರೆಸ್ ಆಕಾಂಕ್ಷಿ* ನೈರುತ್ಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಟಿಕೇಟ್ ಘೋಷಣೆಯಾಗಿದೆ. ಕೆಪಿಸಿಸಿ ಅಧ್ಯಕ್ಷರಿಗೆ ಮನವಿ ಮಾಡಿದ್ದೇನೆ. ಪಕ್ಷದ ಅಭ್ಯರ್ಥಿ ಬದಲಾಯಿಸಬೇಕು. ಹೆಸರನ್ನು ಮರು ಪರಿಶೀಲಿಸಬೇಕು ನನ್ನ ಓಟು ಈಶ್ವರಪ್ಪರಿಗೆ ಅಂತ ಘೋಷಿಸಿರೋ ವ್ಯಕ್ತಿಗೆ ಕಾಂಗ್ರಸ್ ಟಿಕೇಟ್….

Read More

ಕವಿಸಾಲು

Gm ಶುಭೋದಯ💐 *ಕವಿಸಾಲು* ಜಗತ್ತಿನ ಜನರೆಲ್ಲ ನಿನ್ನ ಹಾದಿ ತಪ್ಪಿಸಲೆಂದೇ ಕಾಯುತ್ತಿದ್ದಾರೆ; ನೀ ನನ್ನೊಳಗಿದ್ದು ಬಿಡು… ಇಲ್ಯಾರೂ ಬಂದು ಹೋಗುವವರಿಲ್ಲ! – *ಶಿ.ಜು.ಪಾಶ* 8050112067 (27/3/24)

Read More