ಶಿ.ಜು.ಪಾಶ/Shi.ju.pasha MalenaduExpress

ನಾನು ನಿಮ್ಮ ಶಿ.ಜು.ಪಾಶ. ವಿಶೇಷವೂ ವಿಭಿನ್ನವೂ ಆದ ಸುದ್ದಿಗಳನ್ನು, ವಿಷಯಗಳನ್ನು ಹಂಚಿಕೊಳ್ಳಲೆಂದೇ ಆರಂಭಿಸಿದ ಸಾಮಾಜಿಕ ಜಾಲತಾಣವಿದು...

ಸೇವಾನಿರತ ನೌಕರರ ಮೇಲಿನ ಹಲ್ಲೆಗೆ ನಿರ್ದಾಕ್ಷಿಣ್ಯ ಕ್ರಮ : ಗುರುದತ್ತ ಹೆಗಡೆ

ಸೇವಾನಿರತ ನೌಕರರ ಮೇಲಿನ ಹಲ್ಲೆಗೆ ನಿರ್ದಾಕ್ಷಿಣ್ಯ ಕ್ರಮ : ಗುರುದತ್ತ ಹೆಗಡೆ ಶಿವಮೊಗ್ಗ : ಸೇವಾನಿರತ ಸರ್ಕಾರಿ ಇಲಾಖೆಗಳ ಅಧಿಕಾರಿ, ಸಿಬ್ಬಂಧಿಗಳ ಮೇಲೆ ಹಲ್ಲೆ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಸರ್ಕಾರಿ ನೌಕರರು ಯಾವುದೇ ಆತಂಕಗಳಿಲ್ಲದೇ ನಿರ್ಭೀತಿಯಿಂದ ಪ್ರಮಾಣಿಕವಾಗಿ ಜನಸಾಮಾನ್ಯರ ಸೇವೆಗೆ ಸಮರ್ಪಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಗುರುದತ್ತಹೆಗಡೆ ಅವರು ಹೇಳಿದರು. ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಸರ್ಕಾರಿ ನೌಕರರ ಕುಂದು-ಕೊರತೆ, ಸಮಸ್ಯೆ, ಸೇವಾಸೌಲಭ್ಯಗಳ ತ್ವರಿತ ಸ್ಪಂದನೆಗಾಗಿ ರಚಿಸಲಾಗಿರುವ ಜಿಲ್ಲಾ ಮಟ್ಟದ ಜಂಟಿ ಸಮಾಲೋಚನಾ…

Read More

ದಿ ಆಶ್ರಮ ಶಾಲೆ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ*

*ದಿ ಆಶ್ರಮ ಶಾಲೆ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ* ಇಂದು ವಿಧಾನಸೌಧದಲ್ಲಿ ದಿ ಆಶ್ರಮ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿಗಳೊಂದಿಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಾದ ಎಸ್. ಮಧು ಬಂಗಾರಪ್ಪ ಅವರು ಸಂವಾದ ನಡೆಸಿದರು. ಶಿಕ್ಷಣ ಕ್ಷೇತ್ರದ ಸುಧಾರಣೆಗಳ ಕುರಿತು, ವಿಶೇಷವಾಗಿ ಮೂರು ಪರೀಕ್ಷೆಗಳ ನೀತಿಯ ಬಗ್ಗೆ, ಹಲವು ಶೈಕ್ಷಣಿಕ ವಿಚಾರಗಳನ್ನು ಹಂಚಿಕೊಂಡರು. ವಿದ್ಯಾರ್ಥಿಗಳ ಕುತೂಹಲ, ಜ್ಞಾನಾಸಕ್ತಿ ಮತ್ತು ಶಿಕ್ಷಣದ ಭವಿಷ್ಯದ ಕುರಿತ ಅವರ ಚಿಂತನೆಗಳನ್ನು ನೋಡಿ ಸಚಿವರು ಅಪಾರ ಸಂತೋಷ ವ್ಯಕ್ತಪಡಿಸಿದರು….

Read More

ಕೆ.ಇ.ಕಾಂತೇಶ್ ರಿಗೆ “ವಿಜಯರತ್ನ” ಪ್ರಶಸ್ತಿ*

*ಕೆ.ಇ.ಕಾಂತೇಶ್ ರಿಗೆ “ವಿಜಯರತ್ನ” ಪ್ರಶಸ್ತಿ* ಮಲೇಶಿಯಾದಲ್ಲಿ ಭಾರತದ ಹೈಕಮೀಷನರಾಗಿ ಕಾರ್ಯ ನಿರ್ವಹಿಸುತ್ತಿರುವ ಬಿ.ಎನ್. ರೆಡ್ಡಿ ಹಾಗೂ ವಿಜಯವಾಣಿ ದಿನಪತ್ರಿಕೆಯ ಮುಖ್ಯಸ್ಥರಾದ ಆನಂದ್ ಸಂಕೇಶ್ವರ್ ಅವರು ಶಿವಮೊಗ್ಗ ಜಿ.ಪಂ. ಮಾಜಿ ಸದಸ್ಯರೂ ರಾಷ್ಟ್ರಭಕ್ತರ ಬಳಗದ ಪ್ರಮುಖರೂ ಆದ ಕೆ.ಇ.ಕಾಂತೇಶ್ ರವರಿಗೆ ವಿಜಯ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿದರು. ಸಾಮಾಜಿಕ ಸೇವಾಕ್ಷೇತ್ರದ ಸಾಧನೆಗಾಗಿ ನೀಡಲಾಗಿರುವ ಈ ಗೌರವ ಪ್ರಶಸ್ತಿಯನ್ನು ಕೆ.ಈ. ಕಾಂತೇಶ್ ಸ್ವೀಕರಿಸಿದರು. ಈ ಪ್ರಶಸ್ತಿಯನ್ನು ಮಾರಿಕಾಂಬ ಮೈಕ್ರೋ ಫೈನಾನ್ಸಿನ ಶೈಕ್ಷಣಿಕ, ಮಹಿಳಾ ಸಬಲೀಕರಣ, ಸಾಂಸ್ಕೃತಿಕ ಸಾಧನೆಗಾಗಿ ನೀಡಲಾಗಿದೆ.

Read More

ಪಿಒಪಿ ಗಣೇಶ ತಯಾರಿ, ಮಾರಾಟ ಮಾಡಿದ್ರೆ ಕ್ರಿಮಿನಲ್ ಕೇಸ್*

*ಪಿಒಪಿ ಗಣೇಶ ತಯಾರಿ, ಮಾರಾಟ ಮಾಡಿದ್ರೆ ಕ್ರಿಮಿನಲ್ ಕೇಸ್* ಗಣೇಶ ಚತುರ್ಥಿಗೆ (Ganesh Chaturthi 2025) ಇನ್ನೇನು ಕೆಲವೇ ದಿನಗಳಿದ್ದು, ಬೆಂಗಳೂರಿನಲ್ಲಿ ಹಬ್ಬದ ಆಚರಣೆ ಸಂಬಂಧ ಬಿಬಿಎಂಪಿ (BBMP) ಮಾರ್ಗಸೂಚಿ ಬಿಡುಗಡೆ ಮಾಡಿದೆ. ಪಿಒಪಿಯಂತಹ ನಿಷೇಧಿತ ವಸ್ತುಗಳಿಂದ ಗಣೇಶ ಮೂರ್ತಿಗಳನ್ನು ತಯಾರಿಸುವುದು ಹಾಗೂ ಮಾರಾಟ ಮಾಡುವುದು ಕಂಡುಬಂದರೆ ಅಂತಹ ವ್ಯಕ್ತಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸುವುದಾಗಿ ಬಿಬಿಎಂಪಿ ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ. ಆಯಾ ಬಿಬಿಎಂಪಿ ಉಪವಿಭಾಗಗಳ ನೋಡಲ್ ಅಧಿಕಾರಿಗಳು, ಪೊಲೀಸ್, ಅಗ್ನಿಶಾಮಕ ಮತ್ತು ಬೆಸ್ಕಾಂ ಇಲಾಖೆಗಳ ಅಧಿಕಾರಿಗಳಿಗೆ ಗಣೇಶ…

Read More

🔥🔥🔥*ಗಮನಿಸಿ*🔥🔥🔥 *ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಅಧಿಕಾರಿಗಳ ಗಮನಕ್ಕಿಲ್ಲದೇ ಸೃಷ್ಟಿಯಾಗುತ್ತಿವೆಯೇ ಅಕ್ರಮ ಖಾತೆಗಳು?* *ಹಣ ಚೆಲ್ಲಿದರೆ ಸೂಡಾ, ತಾಲ್ಲೂಕು ಕಚೇರಿ ಎನ್ ಓ ಸಿ, ಲೇ ಔಟ್ ಮ್ಯಾಪಿಲ್ಲದೇ ಪಾಲಿಕೆಯಲ್ಲಿ ಏರುತ್ತಿವೆಯೇ ಖಾತೆ?* *ಜಿಲ್ಲಾಧಿಕಾರಿಗಳ ಅಲಿನೇಷನ್ ಆದೇಶವಿಲ್ಲದೇ, ಬೆಟ್ಟರ್ ಮೆಂಟ್ ಶುಲ್ಕ ಕಟ್ಟಿಸಿಕೊಳ್ಳದೇ, ದಾಖಲೆಗಳೇ ಇಲ್ಲದೇ ಕಂಡ ಕಂಡ ಕಡೆ ಅಕ್ರಮ ಖಾತೆ ಏರಿಸಿಕೊಡುತ್ತಿರುವ ಮಹಾನುಭಾವನ ಕುರಿತ ವಿಶೇಷ ವರದಿಗಾಗಿ ನಿರೀಕ್ಷಿಸಿ…* *ನಿಮ್ಮ ಮಲೆನಾಡು ಎಕ್ಸ್ ಪ್ರೆಸ್ ವಾರಪತ್ರಿಕೆಯ ಪ್ರತಿಯನ್ನು ಈಗಲೇ ಕಾಯ್ದಿರಿಸಿ…*

🔥🔥🔥*ಗಮನಿಸಿ*🔥🔥🔥 *ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಅಧಿಕಾರಿಗಳ ಗಮನಕ್ಕಿಲ್ಲದೇ ಸೃಷ್ಟಿಯಾಗುತ್ತಿವೆಯೇ ಅಕ್ರಮ ಖಾತೆಗಳು?* *ಹಣ ಚೆಲ್ಲಿದರೆ ಸೂಡಾ, ತಾಲ್ಲೂಕು ಕಚೇರಿ ಎನ್ ಓ ಸಿ, ಲೇ ಔಟ್ ಮ್ಯಾಪಿಲ್ಲದೇ ಪಾಲಿಕೆಯಲ್ಲಿ ಏರುತ್ತಿವೆಯೇ ಖಾತೆ?* *ಜಿಲ್ಲಾಧಿಕಾರಿಗಳ ಅಲಿನೇಷನ್ ಆದೇಶವಿಲ್ಲದೇ, ಬೆಟ್ಟರ್ ಮೆಂಟ್ ಶುಲ್ಕ ಕಟ್ಟಿಸಿಕೊಳ್ಳದೇ, ದಾಖಲೆಗಳೇ ಇಲ್ಲದೇ ಕಂಡ ಕಂಡ ಕಡೆ ಅಕ್ರಮ ಖಾತೆ ಏರಿಸಿಕೊಡುತ್ತಿರುವ ಮಹಾನುಭಾವನ ಕುರಿತ ವಿಶೇಷ ವರದಿಗಾಗಿ ನಿರೀಕ್ಷಿಸಿ…* *ನಿಮ್ಮ ಮಲೆನಾಡು ಎಕ್ಸ್ ಪ್ರೆಸ್ ವಾರಪತ್ರಿಕೆಯ ಪ್ರತಿಯನ್ನು ಈಗಲೇ ಕಾಯ್ದಿರಿಸಿ…*

Read More

ಡಿ.ದೇವರಾಜ ಅರಸು-ಇತಿಹಾಸದಲ್ಲಿ ಎಂದಿಗೂ ಅಳಿಸಲಾಗದ ಹೆಸರು : ಚಂದ್ರಭೂಪಾಲ*

*ಡಿ.ದೇವರಾಜ ಅರಸು-ಇತಿಹಾಸದಲ್ಲಿ ಎಂದಿಗೂ ಅಳಿಸಲಾಗದ ಹೆಸರು : ಚಂದ್ರಭೂಪಾಲ* ಮಹಾ ಮಾನವತಾವಾದಿ ಹಾಗೂ ಹಿಂದುಳಿದವರ, ನೊಂದವರ ಏಳ್ಗೆಗಾಗಿ ಶ್ರಮಿಸಿದ ಮೌನಕ್ರಾಂತಿಯ ಹರಿಕಾರ ಡಿ.ದೇವರಾಜ ಅರಸುರವರ ಹೆಸರು ಇತಿಹಾಸದಲ್ಲಿ ಎಂದಿಗೂ ಅಳಿಸಲಾಗದು ಎಂದು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷರಾದ ಸಿ.ಎಸ್.ಚಂದ್ರಭೂಪಾಲ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಬುಧವಾರ ಕುವೆಂಪು ರಂಗಮAದಿರದಲ್ಲಿ ಏರ್ಪಡಿಸಲಾಗಿದ್ದ ಪ್ರಗತಿಪರ ಸಾಧನೆಗಳ ಸರದಾರ, ಸಾಮಾಜಿಕ ಪರಿವರ್ತನೆಯ ಹರಿಕಾರ ಕರ್ನಾಟಕ ರಾಜ್ಯದ ಮಾಜಿ…

Read More

*ಆ.27 ರಿಂದ ಸೆ.15ರವರೆಗೆ ಕಲರ್ ಪೇಪರ್ ಬ್ಲಾಸ್ಟಿಂಗ್ /ಸಿಡಿಮದ್ದು ನಿಷೇಧ*

*ಆ.27 ರಿಂದ ಸೆ.15ರವರೆಗೆ ಕಲರ್ ಪೇಪರ್ ಬ್ಲಾಸ್ಟಿಂಗ್ /ಸಿಡಿಮದ್ದು ನಿಷೇಧ* ಶಿವಮೊಗ್ಗ ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬಗಳ ಸಂದರ್ಭದಲ್ಲಿ ಮುಂಜಾಗ್ರತ ಕ್ರಮವಾಗಿ ಜಿಲ್ಲೆಯಲ್ಲಿ ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಶಿವಮೊಗ್ಗ ನಗರ ಹಾಗೂ ಜಿಲ್ಲಾ ವ್ಯಾಪ್ತಿಯಲ್ಲಿ ದಿನಾಂಕ:27-08-2025 ರಿಂದ 15-09-2025 ರವರೆಗೆ ಜಿಲ್ಲೆಯಾದ್ಯಂತ ಕಲರ್ ಪೇಪರ್ ಬ್ಲಾಸ್ಟಿಂಗ್. ಸಿಡಿಮದ್ದು ಸಿಡಿಸುವುದನ್ನು ನಿಷೇಧಗೊಳಿಸಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆಯವರು ಆದೇಶಿಸಿದ್ದಾರೆ.

Read More

ಪ್ರತಿಷ್ಢಿತ ಔಟ್ ಲುಕ್- ಐಕೇರ್ (ICARE): ಕುವೆಂಪು ವಿವಿಗೆ 30ನೇ ರ್ಯಾಂಕ್* *ನ್ಯಾಕ್ ‘ಎ’ ಶ್ರೇಣಿಯ ಜೊತೆಗೆ ಮತ್ತೊಂದು ಹೆಮ್ಮೆಯ ಗರಿ* *ಆ. 29 ಮತ್ತು 30ಕ್ಕೆ ಸ್ನಾತಕೋತ್ತರ ಪ್ರವೇಶಾತಿ ಕೌನ್ಸಿಲಿಂಗ್*

*ಪ್ರತಿಷ್ಢಿತ ಔಟ್ ಲುಕ್- ಐಕೇರ್ (ICARE): ಕುವೆಂಪು ವಿವಿಗೆ 30ನೇ ರ್ಯಾಂಕ್* *ನ್ಯಾಕ್ ‘ಎ’ ಶ್ರೇಣಿಯ ಜೊತೆಗೆ ಮತ್ತೊಂದು ಹೆಮ್ಮೆಯ ಗರಿ* *ಆ. 29 ಮತ್ತು 30ಕ್ಕೆ ಸ್ನಾತಕೋತ್ತರ ಪ್ರವೇಶಾತಿ ಕೌನ್ಸಿಲಿಂಗ್* ಶಂಕರಘಟ್ಟ, ಆ. 20: ಇತ್ತೀಚೆಗೆ ಪ್ರತಿಷ್ಠಿತ ಮ್ಯಾಗಜಿನ್ ಔಟ್ ಲುಕ್- ಐಕೇರ್ ಸಂಸ್ಥೆ ಬಿಡುಗಡೆ ಮಾಡಿರುವ ದೇಶದ ಸಾರ್ವಜನಿಕ ವಿಶ್ವವಿದ್ಯಾಲಯದ ರ್ಯಾಂಕಿಂಗ್ ನಲ್ಲಿ ಕುವೆಂಪು ವಿವಿ 30ನೇ ಶ್ರೇಣಿ ಪಡೆದು ಮಹತ್ವದ ಸಾಧನೆ ಮಾಡಿದೆ. ಕಳೆದ ತಿಂಗಳು ನ್ಯಾಕ್ ನಿಂದ ‘ಎ’ ಶ್ರೇಣಿ ಪಡೆದು…

Read More