ಹೆಚ್ ಡಿ ಕೆ ಆರೋಗ್ಯ ಬಯಸಿ ಶಾಸಕಿ ಶಾರದಮ್ಮರಿಂದ ನಡೆಯಿತು ಮಹಾ ಮೃತ್ಯುಂಜಯ ಹೋಮ

ಹೆಚ್ ಡಿ ಕೆ ಆರೋಗ್ಯ ಬಯಸಿ ಶಾಸಕಿ ಶಾರದಮ್ಮರಿಂದ ನಡೆಯಿತು ಮಹಾ ಮೃತ್ಯುಂಜಯ ಹೋಮ

ಜೆಡಿಎಸ್ ಪಕ್ಷದ ಹಿರಿಯರು ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿಯವರ ಅನಾರೋಗ್ಯದ ಹಿನ್ನೆಲೆ ಇಂದು  ಶಸ್ತ್ರ ಚಿಕಿತ್ಸೆ ನಡೆಯಲಿದ್ದು, ಅವರು ಶೀಘ್ರ ಗುಣಮುಖರಾಗಲೆಂದು ಹಾಗೂ ಚಿಕಿತ್ಸೆ ಫಲಕಾರಿಯಾಗಲೆಂದು ಈ ದಿನ‌ ಪಿಳ್ಳಂಗಿರಿಯ ಲಕ್ಷ್ಮೀರಂಗನಾಥ ದೇವಾಲಯದಲ್ಲಿ ಹೆಚ್ ಡಿ ಕೆ  ಹೆಸರಿನಲ್ಲಿ ಮಹಾ ಮೃತ್ಯುಂಜಯ ಹೋಮ ಹಾಗೂ ರುದ್ರಜಪವನ್ನು ಶಿವಮೊಗ್ಗ ಗ್ರಾಮಾಂತರ ಶಾಸಕರಾದ ಶ್ರೀಮತಿ ಶಾರದಾ ಪೂರ್ಯಾನಾಯ್ಕ್ ರವರು ಹಮ್ಮಿಕೊಂಡಿದ್ದರು. ಬೆಳಗ್ಗೆ 9.30 ರಿಂದ ಹೋಮ ಹಾಗೂ ಜಪ ಆರಂಭವಾಗಿದ್ಪೂದು, ರ್ಣಾಹುತಿ ಕಾರ್ಯವೂ 12.30 ಕ್ಕೆ ಸಂಪನ್ನವಾಯಿತು.