ಕಡ್ಡಿಮಧು ವಿರೋಧಿ ಗ್ಯಾಂಗ್ ಮಾರಿಹಬ್ಬ ಮಾಡಿದ್ದು ಹೇಗೆ? ಮಧು ಮನೆಗೂ ಮುನ್ನ ದಾಳಿ ಮಾಡಿದ ಮತ್ತೊಂದು ಮನೆ ಯಾವುದು? ಇಲ್ಲಿದೆ ಕುತೂಹಲಭರಿತ ಕಹಾನಿ!

ಕಡ್ಡಿಮಧು ವಿರೋಧಿ ಗ್ಯಾಂಗ್ ಮಾರಿಹಬ್ಬ ಮಾಡಿದ್ದು ಹೇಗೆ?

ಮಧು ಮನೆಗೂ ಮುನ್ನ ದಾಳಿ ಮಾಡಿದ ಮತ್ತೊಂದು ಮನೆ ಯಾವುದು?

ಇಲ್ಲಿದೆ ಕುತೂಹಲಭರಿತ ಕಹಾನಿ!

ಕಡ್ಡಿ ಮಧು ವಿರೋಧಿ ರೌಡಿಗ್ಯಾಂಗ್ ಶಿವಮೊಗ್ಗದ ಹೊಸಮನೆ ಬಡಾವಣೆಯಲ್ಲಿ ಮತ್ತೊಂದು ದಲಿತ ಮನೆಗೂ ನುಗ್ಗಿ ರಂಪಾಟ ಮಾಡಿದ್ದಲ್ಲದೇ ಮಾಂಗಲ್ಯ ಸರವನ್ನೂ ದೋಚಿ ಪರಾರಿಯಾಗಿದೆ ಎಂದು ದೊಡ್ಡಪೇಟೆ ಠಾಣೆಯಲ್ಲಿ 112/24 ರಂತೆ ಮಾ.23ರಂದು ಎಫ್ ಐ ಆರ್ ದಾಖಲಾಗಿದೆ.

ಮಾರಿಹಬ್ಬದ ದಿನ ಸಚಿನ್ @ ಶ್ಯಾಡೋ, ದರ್ಶನ್ @ ನಲ್ ಕುಮಾರಿ, ಪ್ರವೀಣ್ @ ಮೋಟು, ಸೂರಜ್ @ ಸೂರು, ವಿಶಾಲ್ @ ಡಾಲು, ನಿತಿನ್ ರಾಜ್ ರ ರೌಡಿ ತಂಡ ಹೊಸಮನೆಯಲ್ಲಿರುವ ಆರ್.ಸೇವಂತ್, ನಂದ ಕಿಶೋರ್ ಮತ್ತು ಶ್ರೀಮತಿ ಆರ್.ರೋಹಿಣಿಯವರಿದ್ದ ಮನೆಯ ಮೇಲೆ ದಾಳಿ ಮಾಡಿತು.

ಮಾ.22ರ ಮಧ್ಯರಾತ್ರಿ ಈ ದಾಳಿ ನಡೆದಿದ್ದು, ಅವಾಚ್ಯವಾಗಿ ಬೈಯುತ್ತಾ ಬಾಗಿಲು ಬಡಿದರು. ಲಾಂಗ್, ದೊಣ್ಣೆಗಳನ್ನು ಹೊಂದಿದ್ದ ತಂಡ ಕಿಟಕಿ ಗಾಜು, ಮನೆ ಮುಂದಿದ್ದ ಹೋಂಡಾ ಆ್ಯಕ್ಟಿವ ವಾಹನ ಪುಡಿಗೈದಿದೆ. ನಂತರ ಮನೆಯೊಳಕ್ಕೂ ನುಗ್ಗಿ ಸೇವಂತ್ ಮೇಲೂ ಮುಗಿಬಿದ್ದು ಹಲ್ಲೆ ನಡೆಸಿದೆ. ಮನೆಯೊಳಗಿದ್ದ ವಸ್ತುಗಳನ್ನೆಲ್ಲ ಹಾಳುಗೆಡವಿದೆ. ಟೇಬಲ್ ಮೇಲೆ ರಾತ್ರಿ ತೆಗೆದಿಟ್ಟಿದ್ದ 30 ಗ್ರಾಂ ತೂಕದ ಮಾಂಗಲ್ಯ ಸರ ತೆಗೆದೊಯ್ದಿದೆ.

ಕೊಲೆಬೆದರಿಕೆ ಕೂಡ ಹಾಕಿದ್ದು, ಬಂದಿದ್ದ ದ್ವಿಚಕ್ರ ವಾಹನಗಳಲ್ಲಿ ಗ್ಯಾಂಗ್ ಸಾಗಿದೆ. ಕಡ್ಡಿ ಮಧು ಮನೆಯ ಮೇಲೆ ಆನಂತರ ಮುಗಿಬಿದ್ದಿದೆ ಎಂದು ಎಫ್ ಐ ಆರ್ ನಲ್ಲಿದೆ.

ಶ್ರೀಮತಿ ರೋಹಿಣಿ ಮತ್ತು ಆರ್.ಸೇವಂತ್ ದೂರು ನೀಡಿದ್ದರ ಮೇರೆಗೆ ಪೊಲೀಸರು ಎಸ್ ಸಿ ಎಸ್ ಟಿ ಕಾಯ್ದೆಯ ಜೊತೆ ಜೊತೆಗೆ ಹಲವು ಸೆಕ್ಷನ್ ಗಳನ್ನು ಜಡಿದಿದೆ.