ಶಾಲಾ ವಾಹನಗಳ ಮೇಲೆ ಸಂಚಾರಿ ಸಿಪಿಐ ಬಿ.ಕೆ.ಲತಾ ಹದ್ದಿನ ಕಣ್ಣು; ಚಾಲಕರೇ, ಮೈ ಮರೆತರೆ ಬೀಳುತ್ತೆ ಕೇಸು!

ಶಾಲಾ ವಾಹನಗಳ ಮೇಲೆ ಸಂಚಾರಿ ಸಿಪಿಐ ಬಿ.ಕೆ.ಲತಾ ಹದ್ದಿನ ಕಣ್ಣು; ಚಾಲಕರೇ, ಮೈ ಮರೆತರೆ ಬೀಳುತ್ತೆ ಕೇಸು!

ಇಂದು  ಬೆಳಗ್ಗೆ   ಶಿವಮೊಗ್ಗ ಸಂಚಾರಿ ವೃತ್ತದ ಸರ್ಕಲ್ ಇನ್ಸ್ ಪೆಕ್ಟರ್ ಶ್ರೀಮತಿ ಲತಾ ಬಿ. ಕೆ.  ಶಿವಮೊಗ್ಗ ನಗರದ ಸಾಗರ ರಸ್ತೆಯಲ್ಲಿ ಶಾಲಾ ವಾಹನಗಳ ತಪಾಸಣೆ ನಡೆಸಿ, ವಾಹನಗಳಲ್ಲಿ ಕಡ್ಡಾಯವಾಗಿ ಇಟ್ಟುಕೊಳ್ಳಬೇಕಿರುವ *ದಾಖಲಾತಿಗಳಾದ* ಆರ್.ಸಿ (ನೋಂದಣಿ ಪ್ರಮಾಣ ಪತ್ರ), ಇತ್ತೀಚಿನ ಎಮಿಷನ್ ಟೆಸ್ಟ್ ಪ್ರಮಾಣ ಪತ್ರ, ಚಾಲ್ತಿಯಲ್ಲಿರುವ ವಿಮಾ ಪತ್ರ, ಡಿ.ಎಲ್ (ಚಾಲನಾ ಪರವಾನಿಗೆ), ಬ್ಯಾಡ್ಜ್ ಹಾಗೂ ಇತರ ದಾಖಲಾತಿಗಳನ್ನು ಮತ್ತು ವಾಹನದಲ್ಲಿ *ಪ್ರಥಮಾ ಚಿಕಿತ್ಸಾ ಪೆಟ್ಟಿಗೆ* ಇಟ್ಟುಕೊಂಡಿರುವ ಬಗ್ಗೆ ಪರಿಶೀಲನೆ ನಡೆಸಿದರು.

ನಂತರ ಚಾಲಕರುಗಳಿಗೆ *ಸಂಚಾರ ನಿಯಮಗಳ ಪಾಲನೆಯ* ಮಹತ್ವದ ಬಗ್ಗೆ ಮಾಹಿತಿ ನೀಡಿ, ಅತಿವೇಗ ಹಾಗೂ ಅಜಾಗರೂಕತೆಯಿಂದ ವಾಹನ ಚಾಲನೆ ಮಾಡದೇ ಕಡ್ಡಾಯವಾಗಿ ವೇಗದ ಮಿತಿಯಲ್ಲಿಯೇ ವಾಹನಗಳನ್ನು ಚಾಲನೆ ಮಾಡುವಂತೆ, ಚಾಲನೆಯ ವೇಳೆ ಮದ್ಯಪಾನ   ಮಾಡದಂತೆ, ವಾಹನಗಳನ್ನು ಓಡಿಸುವಾಗ ಮೊಬೈಲ್ ಫೋನ್ ಬಳಕೆ ಮಾಡದಂತೆ ಮತ್ತು ಶಾಲಾ ವಾಹನದಲ್ಲಿ ಲಭ್ಯವಿರುವ ಆಸನಗಳಿಗಿಂತ ಹೆಚ್ಚಿನ ಸಂಖ್ಯೆಯ ಮಕ್ಕಳನ್ನು ಕೂರಿಸಿಕೊಂಡು ಹೋದಗಂತೆ ಸೂಚನೆಗಳನ್ನು ನೀಡಿದರು.