ಅನಾಥ ಶವಗಳ ಸಂಸ್ಕಾರ ಮಾಡುವ ಸಂಸ್ಕಾರವಂತ ತಂದೆ ಮಗಳಿಗೆ ಖಾಕಿ ಗೌರವ*

*ಅನಾಥ ಶವಗಳ ಸಂಸ್ಕಾರ ಮಾಡುವ ಸಂಸ್ಕಾರವಂತ ತಂದೆ ಮಗಳಿಗೆ ಖಾಕಿ ಗೌರವ*

ಶಿವಮೊಗ್ಗ ಟೌನ್ ಗಾಡಿಕೊಪ್ಪದ ವಾಸಿಗಳಾದ ರವಿ ಎಸ್ ಮತ್ತು ಇವರ ಮಗಳಾದ ಕು. ಧನುಶ್ರೀ ರವರಿಗೆ ವಿಶೇಷ ಕೆಲಸಕ್ಕಾಗಿ ಗುರುತಿಸಿ ಜಿಲ್ಲಾ ಎಸ್ ಪಿ ಮಿಥುನ್ ಕುಮಾರ್ ವಿಶೇಷ ರೀತಿಯಲ್ಲಿ ಸನ್ಮಾನಿಸಿದ್ದಾರೆ,
2005ರಿಂದಲೂ ಶಿವಮೊಗ್ಗ ಜಿಲ್ಲೆಯಾದ್ಯಂತ ಅನಾಥ ಶವಗಳು ಕಂಡು ಬಂದತಂಹ ಸಂದರ್ಭದಲ್ಲಿ ಪೊಲೀಸ್ ಇಲಾಖೆಯು ಮಾಹಿತಿ ನೀಡಿದ ತಕ್ಷಣ ಅನಾಥ ಶವಗಳನ್ನು ಸಾಗಿಸಿ, ಸಂಸ್ಕಾರ ನೆರವೇರಿಸುವಲ್ಲಿ ಪೊಲೀಸ್ ಇಲಾಖೆಗೆ ಸಹಕರಿಸಿ ನಿಸ್ವಾರ್ಥ ಸೇವೆಯನ್ನು ಮಾಡುತ್ತಾ ಈ ಇಬ್ಬರು ಗಮನಸೆಳೆಯುತ್ತಲೇ ಬಂದಿದ್ದರು. ಆದರೂ ಎಲೆಮರೆ ಕಾಯಿಯಾಗಿಯೇ ಉಳಿದುಕೊಂಡಿದ್ದರು.

ಇವರ ಈ ನಿಸ್ವಾರ್ಥ ಸೇವೆಗೆ ಗುರುವಾರದಂದು ಬೆಳಗ್ಗೆ ಶಿವಮೊಗ್ಗ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ, ಮಿಥುನ್ ಕುಮಾರ್ ಜಿ. ಕೆ. ರವರು ಪ್ರಶಂಸನಾ ಪತ್ರವನ್ನು ನೀಡಿ ಅಭಿನಂದಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಹೆಚ್ಚುವರಿ ಎಸ್ ಪಿ ಅನಿಲ್ ಕುಮಾರ್ ಭೂಮರೆಡ್ಡಿ, ಡಿವೈಎಸ್ ಪಿಗಳಾದ ಬಾಬು ಆಂಜನಪ್ಪ, ಸುರೇಶ್ ಎಂ. ರವರು ಉಪ ಸ್ಥಿತರಿದ್ದರು.