ಸೂಡಾಕ್ಕೆ ರವಿಕುಮಾರ್ ಸೇರಿದಂತೆ ನಾಲ್ವರು ಸದಸ್ಯರ ನೇಮಕ

ಸೂಡಾಕ್ಕೆ ರವಿಕುಮಾರ್ ಸೇರಿದಂತೆ ನಾಲ್ವರು ಸದಸ್ಯರ ನೇಮಕ

ಶಿವಮೊಗ್ಗ- ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರನ್ನಾಗಿ ಭದ್ರಾವತಿಯ ಹೆಚ್.ರವಿಕುಮಾರ್ ಸೇರಿದಂತೆ ನಾಲ್ವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ.
ಈಗಾಗಲೇ ಈ ಪ್ರಾಧಿಕಾರಕ್ಕೆ ಹೆಚ್.ಎಸ್.ಸುಂದರೇಶ್ ರವರನ್ನು ಅಧ್ಯಕ್ಷರನ್ನಾಗಿ ಸರ್ಕಾರ ನೇಮಕ ಮಾಡಿತ್ತು. ಇದೀಗ, ಭದ್ರಾವತಿಯ ಹೆಚ್.ರವಿಕುಮಾರ್, ಶ್ರೀಮತಿ ರೇಣುಕಮ್ಮ, ಶಿವಮೊಗ್ಗದ ಎಂ.ಎಸ್.ಸಿದ್ದಪ್ಪ, ಎಂ.ಪ್ರವೀಣ್ ಕುಮಾರ್ ರವರನ್ನು ನೇಮಕ ಮಾಡಿ ಆದೇಶಿಸಿದೆ.