ಸೂಡಾ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ರಿಗೆ  ಅದ್ಧೂರಿ ಸನ್ಮಾನ

ಸೂಡಾ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ರಿಗೆ  ಅದ್ಧೂರಿ ಸನ್ಮಾನ

ಶಿವಮೊಗ್ಗ ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್ ಎಸ್ ಸುಂದರೇಶ್ ರವರ ಜನ್ಮ ದಿನಾಚರಣೆಯನ್ನು ಗೋಪಾಲಗೌಡ ಬಡಾವಣೆಯ ಶ್ರೀ ದ್ರೌಪದಮ್ಮ ದೇವಿಯ ದೇವಸ್ಥಾನದಲ್ಲಿ ಪೂಜೆ ಮಾಡುವುದರ ಮುಖಾಂತರ ಗೋಪಾಲ್ ಗೌಡ ಬಡಾವಣೆ ಕಾಂಗ್ರೆಸ್ ಪಕ್ಷದ ಮುಖಂಡರು ಕಾರ್ಯಕರ್ತರು ಅಭಿಮಾನಿಗಳು ಕೇಕ್ ಕಟ್ ಮಾಡಿ ಸನ್ಮಾನಿಸುವುದರ ಮೂಲಕ ಆಚರಿಸಲಾಯಿತು. ಈ ಸಂದರ್ಭದಲ್ಲಿ ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯ ಸಂಯೋಜಕರಾದ ಜಿ.ಡಿ. ಮಂಜುನಾಥ ಕೆಪಿಸಿಸಿ ಸಂಯೋಜಕ ಮಾರ್ಟಿಸ್ ಜಿಲ್ಲಾ ಕಾರ್ಯದರ್ಶಿ ಟಿ.ಡಿ ಜಿತೇಂದ್ರ ಗೌಡ ವಾರ್ಡಿನ ಅಧ್ಯಕ್ಷರಾದ ನಾಜಿಮ ಸೌತ್ ಬ್ಲಾಕ್ ಕಾರ್ಯದರ್ಶಿಯಾದ ಆರ್, ರಾಜಶೇಖರ್ ಸೇವಾದಳದ ಜಿಲ್ಲಾಧ್ಯಕ್ಷರಾದ ಮಂಜುನಾಥ್ ಮುಖಂಡರುಗಳಾದ ಜಿ.ಎಸ್ ಶಿವಕುಮಾರ್, ರವಿ, ಗುರುರಾಜ್, ಡಾಕ್ಟರ್ ತಾನಾಜಿ, ಜೈಕುಮಾರ್, ವಕೀಲರಾದ ಪ್ರಕಾಶ್, ಬಿ.ಆರ್ ಶಂಕರಪ್ಪ ನಾಗೇಶ್, ರುದ್ರಪ್ಪ, ಪ್ರೇಮ, ತಿಮ್ಮಣ್ಣ ಸುಧಾಕರ್ ಪವರ್ಸ್ಕರ್,ಮುರುಳಿ ಇನ್ನಿತರರು ಹಾಜರಿದ್ದರು.

*ಸೂಡಾ ಕಚೇರಿ ಬಳಿ ಸನ್ಮಾನದ ಮಹಾಪುರ*

ಶಿವಮೊಗ್ಗ- ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಬಳಿಯಲ್ಲಿ ಸಿದ್ಧಪಡಿಸಲಾಗಿದ್ದ ವೇದಿಕೆಗೆ ಅಧ್ಯಕ್ಷರಾದ ಹೆಚ್.ಎಸ್.ಸುಂದರೇಶ್ ಬರುತ್ತಿದ್ದಂತೆಯೇ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಸಂಘಟನೆಗಳು ನಿರಂತರವಾಗಿ ಜನ್ಮದಿನದ ಶುಭಾಶಯಗಳನ್ನು ತಿಳಿಸಿ ಅಭಿನಂದಿಸಿ, ಕೇಕುಗಳನ್ನು ಕೂಡ ಕತ್ತರಿಸಿ ಹಂಚಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶಿ.ಜು.ಪಾಶ, ಹಿರಣ್ಣಯ್ಯ, ಪತ್ರಕರ್ತರಾದ ಸುಧೀರ್, ಗಜೇಂದ್ರಸ್ವಾಮಿ, ರಘುರಾಜ್, ಕನ್ನಡ ಸಂಘಟನೆಯ ಜಾವಳ್ಳಿ ಚಂದ್ರು ಸೇರಿದಂತೆ ಹಲವರಿದ್ದರು.