ಶಿವಮೊಗ್ಗದ ಬಸ್ ನಿಲ್ದಾಣದಲ್ಲಿ ಚಿನ್ನಾಭರಣ ಕಳವು- ಶಿಕಾರಿಪುರ ಮಹಿಳೆ ದೂರು*

*ಶಿವಮೊಗ್ಗದ ಬಸ್ ನಿಲ್ದಾಣದಲ್ಲಿ ಚಿನ್ನಾಭರಣ ಕಳವು- ಶಿಕಾರಿಪುರ ಮಹಿಳೆ ದೂರು*

ಶಿವಮೊಗ್ಗದ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಮತ್ತೆ ಕಳ್ಳರ ಹಾವಳಿ ಹೆಚ್ಚಾಗಿದೆ. ಶಿಕಾರಿಪುರಕ್ಕೆ ಹೋಗಲೆಂದು ಬಸ್ ಹತ್ತಿದ್ದ ಮಹಿಳೆಯ ಪರ್ಸ್ ನಿಂದ ಬಂಗಾರದ ತಾಳಿ ಸರ, ಈಶ್ವರನ ಡಾಲರ್ ಎಗರಿಸಿದ್ದಾರೆ ಕಳ್ಳರು.

ಈ ಘಟನೆ ಅ.6 ರಂದು ನಡೆದಿದ್ದು, ಸುಮಾರು 35,000₹ ಮೌಲ್ಯದ ಚಿನ್ನಾಭರಣ ಕಳುವಾಗಿದೆ ಎಂದು ಶಿಕಾರಿಪುರ ತಾಲ್ಲೂಕಿನ ಹೊಸೂರು ಹೋಬಳಿಯ ನೆವಾಗಿಲು ಗ್ರಾಮದ ಎಂ. ಸುಪ್ರಿಯ ಎಂಬುವವರು ದೊಡ್ಡಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
—————————-