ಎಸ್.ಬಂಗಾರಪ್ಪ; 92ನೇ ಜನ್ಮದಿನದ ಅಂಗವಾಗಿ ಬಂಗಾರಧಾಮದಲ್ಲಿ ಅ. 26ಕ್ಕೆ ವಿಶೇಷ ಕಾರ್ಯಕ್ರಮ…**ಬರಲಿದ್ದಾರೆ ಗೃಹಮಂತ್ರಿ ಜಿ.ಪರಮೇಶ್ವರ್ ಮತ್ತಿತರೆ ಗಣ್ಯರು…*

*ಎಸ್.ಬಂಗಾರಪ್ಪ; 92ನೇ ಜನ್ಮದಿನದ ಅಂಗವಾಗಿ ಬಂಗಾರಧಾಮದಲ್ಲಿ ಅ. 26ಕ್ಕೆ ವಿಶೇಷ ಕಾರ್ಯಕ್ರಮ…*

*ಬರಲಿದ್ದಾರೆ ಗೃಹಮಂತ್ರಿ ಜಿ.ಪರಮೇಶ್ವರ್ ಮತ್ತಿತರೆ ಗಣ್ಯರು…*

ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ನವರ 92 ನೇ ಹುಟ್ಟುಹಬ್ಬದ ಅಂಗವಾಗಿ “ಬಂಗಾರಪ್ಪ ವಿಚಾರ ವೇದಿಕೆ ಹಾಗೂ ಅಭಿಮಾನಿ ಬಳಗ”ದ ಸಂಯುಕ್ತಾಶ್ರಯದಲ್ಲಿ ಅಕ್ಟೋಬರ್ 26 ರಂದು ಸೊರಬದ ಬಂಗಾರಧಾಮದಲ್ಲಿ “ನಮನ, ಚಿಂತನ ಮತ್ತು ಸನ್ಮಾನ” ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

ಈ ಕಾರ್ಯಕ್ರಮಕ್ಕೆ ಕರ್ನಾಟಕ ರಾಜ್ಯದ ಗೃಹಮಂತ್ರಿಗಳಾದ ಜಿ. ಪರಮೇಶ್ವರ್ ಅವರನ್ನು ಬಂಗಾರಪ್ಪ ವಿಚಾರ ವೇದಿಕೆಯ ಅಧ್ಯಕ್ಷರಾದ ಎಸ್. ವೇಣುಗೋಪಾಲ್ ನಾಯ್ಕ್ ಅವರೊಂದಿಗೆ ಭೇಟಿಯಾಗಿ ಆಹ್ವಾನಿಸಲಾಯಿತು.

ರಾಜ್ಯದ ಗೃಹಮಂತ್ರಿಗಳಾದ ಜಿ. ಪರಮೇಶ್ವರ್ ಅವರು ಸೇರಿದಂತೆ ರಾಜ್ಯದ ಹಲವಾರು ಗಣ್ಯರು, ಮಹನೀಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಸೊರಬದ ಬಂಗಾರಧಾಮದಲ್ಲಿ “ಬಂಗಾರಪ್ಪನವರ ಹುಟ್ಟು ಹಬ್ಬದ” ಪ್ರಯುಕ್ತ ದಿನ ಪೂರ್ತಿ ಅದ್ಧೂರಿಯಾಗಿ ನಡೆಯಲಿರುವ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಅನೇಕ ಗಣ್ಯರಿಗೆ ಬಂಗಾರ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಬಂಗಾರಪ್ಪ ನವರ ಚಿಂತನೆಯ ಕುರಿತಂತೆ ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆ, ಪ್ರಬಂಧ ಸ್ಪರ್ಧೆ ಮತ್ತು ಬಂಗಾರಪ್ಪನವರ ಸಮಾಜವಾದಿ ಚಿಂತನೆಗಳ ಇಂದಿನ ಪ್ರಸ್ತುತತೆಯ ಬಗ್ಗೆ ವಿಚಾರಮಂಡನೆ ಹಾಗೂ ಜಾನಪದ ವೈಭವ ಕಾರ್ಯಕ್ರಮ ಸೇರಿದಂತೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ವಿವರಿಸಿದ್ದಾರೆ.