ಶಿವಮೊಗ್ಗ ಮಹಾನಗರ ಪಾಲಿಕೆಯ ವಲಯ 3 ರ ಕಚೇರಿ ಭ್ರಷ್ಟಾಚಾರದ ಮೂಲ ಕೇಂದ್ರ! ಭಿಕ್ಷುಕ ಅಧಿಕಾರಿಗಳೇ ಹುಷಾರು!; ಎನ್.ಕೆ.ಶ್ಯಾಮಸುಂದರ್ ಎಚ್ಚರಿಕೆ
*ಶಿವಮೊಗ್ಗ ಮಹಾನಗರ ಪಾಲಿಕೆಯ ವಲಯ 3 ರ ಕಚೇರಿ ಭ್ರಷ್ಟಾಚಾರದ ಮೂಲ ಕೇಂದ್ರ!
ಭಿಕ್ಷುಕ ಅಧಿಕಾರಿಗಳೇ ಹುಷಾರು!; ಎನ್.ಕೆ.ಶ್ಯಾಮಸುಂದರ್ ಎಚ್ಚರಿಕೆ
ಶಿವಮೊಗ್ಗ ಮಹಾನಗರ ಪಾಲಿಕೆಯ ವಲಯ 3ರ ಆರ್ ಓ ಸತೀಶ್ ಹೆಸರಿಗೆ ಮಾತ್ರ ಇವರಿಗೆ ಈ ಸ್ವತ್ತು. ಬಿ ಖಾತದ ಅರಿವೇ ಇಲ್ಲ. ಆರ್ ಐ ಗಳಿಂದ ಕಡತ ಮುಂದೆ ಹೋಗುವುದೇ ಇಲ್ಲ. ಲಂಚ ಕೊಟ್ಟ ಕಡತಗಳು ಮಾತ್ರ ಮುಂದಕ್ಕೆ ಹೋಗುತ್ತವೆ.
ಉದಾಹರಣೆಗೆ ಈ ಸ್ವತ್ತಿನ ಕಡತ ಸಂಖ್ಯೆ, 2073489291 ಒಬ್ಬ ಆರ್ ಐ ಒಂದು ತಿಂಗಳಿನಿಂದ ತನ್ನ ಲಾಗಿನ್ ನಲ್ಲಿ ಉಳಿಸಿಕೊಂಡಿದ್ದಾನೆ. ಲಂಚದ ಹಣ ಪಡೆಯದೆ ಮುಂದಕ್ಕೆ ಕಳಿಸುವುದಿಲ್ಲ ಎಂಬ ನಿಲುವಿನಲ್ಲಿ ಇದ್ದಾನೆ ಅಂತ ಕಾಣಿಸುತ್ತೆ ಈ ಬಗ್ಗೆ ಆರ್ ಓ ಸತೀಶ್ ಗಮನಕ್ಕೆ ತಂದರೆ ಬಿ ಖಾತಾ ಆಗಿದೆ ಎಂಬ ಸಂದೇಶ ಕಳಿಸುತ್ತಾರೆ.
ಇದು ಪಾಲಿಕೆಯ ದುರಂತ. ಆರ್ ಓ ಮಾತು ಆರ್ ಐ ಕೇಳುವುದಿಲ್ಲವೋ ಅಥವಾ ಆರ್ ಓ ಸಹ ಪಾಪದ ಹಣಕ್ಕೆ ಪಾಲುದಾರರು ಅವರೇ ಉತ್ತರಿಸಬೇಕು. ಮತ್ತೊಂದು ಈ ವಲಯದ ವಾರ್ಡಗಳಲ್ಲಿ ರೆವಿನ್ಯೂ ನಿವೇಶನಗಳಲ್ಲಿ ಮನೆ ಕಟ್ಟಿಕೊಂಡು ಬಿ ಖಾತ ಮಾಡಲು ಅರ್ಜಿ ಸಲ್ಲಿಸಿದವರಿಗೆ ಅಸೆಸ್ ಹಾಗೂ ಅನ್ನಸೇಸ್ ಎಂಬ ಕಾಲಂ ಹೆಸರಿನಲ್ಲಿ ಅನ್ಎಸ್ಎಸ್ ಕಾಲಂನಲ್ಲಿ ಮನೆ ತೆರಿಗೆ ಇಪ್ಪತ್ತು- ಮೂವತ್ತು ಸಾವಿರ ಬರುತ್ತದೆ ಎಂದು ಅರ್ಜಿದಾರರಿಗೆ ಹೆಚ್ಚು ಕಂದಾಯ ತೋರಿಸಿ ಭಯ ಹುಟ್ಟಿಸಿ ಅರ್ಜಿದಾರರಿಂದ ಲಂಚದ ಹಣ ಸುಲಿಗೆ ಮಾಡಿ ನಂತರ ಅಸೆಸ್ ಕಾಲಂನಲ್ಲಿ ಸರ್ಕಾರದ ನಿಯಮದಂತೆ ಆರು ಸಾವಿರ ರೂಗಳಂತೆ ಕಡಿಮೆ ಮಾಡಿದ್ದೇವೆ ಎಂದು ಹೇಳಿ ಕಂದಾಯ ಕಟ್ಟಲು ಸೂಚಿಸುತ್ತಿದ್ದಾರೆ ಎಂದು ಸಾರ್ವಜನಿಕರು ಹಲವು ಜನ ಪ್ರತಿನಿಧಿಗಳ ಗಮನಕ್ಕೆ ತರುತ್ತಿದ್ದಾರೆ.
ಈ ಬಗ್ಗೆ ಭ್ರಷ್ಟಾಚಾರದ ಬಗ್ಗೆ ಪ್ರಶ್ನೆ ಮಾಡಿದರೆ ಅದಕ್ಕೆ ಉತ್ತರಿಸುವುದೇ ಇಲ್ಲ ಅಷ್ಟು ಮಂಡೂತನಕ್ಕೆ ಬಿದ್ದಿದ್ದಾರೆ ಪಾಲಿಕೆಯಲ್ಲಿ ಜನಪ್ರತಿನಿಧಿಗಳಿಲ್ಲ. ನಾವು ಆಡಿದ್ದೆ ಆಟ ನಮಗೆ ಹೇಳುವರು ಯಾರು ಇಲ್ಲ ಕೇಳುವವರು ಯಾರು ಇಲ್ಲ ಎಂದು ಅಹಂನಂತೆ ವರ್ತಿಸುತ್ತಿದ್ದಾರೆ.
ಮಹಾನಗರ ಪಾಲಿಕೆಯ ಆಯುಕ್ತರು ವಲಯದ ಆರ್ ಓ ಗಳಿಗೆ ಮುಕ್ತ ಅವಕಾಶ ಕೊಟ್ಟಿರುವುದು ಈ ರೀತಿ ಲಂಚದ ಹಣ ವಸೂಲಿ ಮಾಡಲಿಕ್ಕಾ ಅಥವಾ ಆಸ್ತಿದಾರರಿಗೆ ಸುಗಮ ಕೆಲಸ ಮಾಡಿಕೊಡಲು ನೇಮಕ ಮಾಡಿರುವುದ? ಅವರೇ ಉತ್ತರಿಸಬೇಕು.
ಈ ವಲಯದಲ್ಲಿ ಕೆಲವರು ಬಿಕ್ಷುಕ ಅಧಿಕಾರಿಗಳಂತೆ ವರ್ತಿಸುತ್ತಿದ್ದಾರೆ. ಅಲ್ಲಿ ಕೆಲವು ಒಳ್ಳೆಯ ಅಧಿಕಾರಿಗಳನ್ನು ಕೆಟ್ಟವರಾಗಿ ಮಾಡುತ್ತಿದ್ದಾರೆ. ಆಯುಕ್ತರು ಇದಕ್ಕೆಲ್ಲ ಕಡಿವಾಣ ಹಾಕಬೇಕು. ಯಾರ ಯಾರ ಲಾಗಿನ್ ನಲ್ಲಿ ಎಷ್ಟು ಕಡತಗಳು ಬಾಕಿ ಇದೆ ಎಂಬುದನ್ನು ಪರಿಶೀಲಿಸಬೇಕು. ಅವುಗಳಿಗೆ ತಾರ್ಕಿಕ ಅಂತ್ಯ ಹಾಡಬೇಕು. ನಾಗರೀಕರ ಕೆಲಸ ಸುಗಮವಾಗಿ ಮಾಡಿಕೊಡಬೇಕು. ಇಲ್ಲವಾದರೆ ಆಡಳಿತ ಸರ್ಕಾರದ ಕಾಂಗ್ರೆಸ್ ಪಕ್ಷ ಅನ್ನದೇ ಸಾರ್ವಜನಿಕರ ಒಳಗೊಂಡಂತೆ ಪಾಲಿಕೆ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸುತಿದ್ದೇವೆ.
ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಿಗೂ ಗಮನಕ್ಕೆ ತರಲಾಗುವುದು.
– *ಎನ್ ಕೆ. ಶ್ಯಾಮಸುಂದರ್*
*ಮಾಜಿ ನಗರಸಭಾ ಸದಸ್ಯರು ಹಾಗೂ ಪ್ರಧಾನ ಕಾರ್ಯದರ್ಶಿ ಜಿಲ್ಲಾ ಕಾಂಗ್ರೆಸ್ ಶಿವಮೊಗ್ಗ*