ಕಮಲ್ ಹಾಸನ್ ಕನ್ನಡ ಅವಮಾನದ ಹೇಳಿಕೆ ವಿರುದ್ಧ ಜೂನ್ 2 ಕ್ಕೆ ಕರ್ನಾಟಕ ಬಂದ್?*

*ಕಮಲ್ ಹಾಸನ್ ಕನ್ನಡ ಅವಮಾನದ ಹೇಳಿಕೆ ವಿರುದ್ಧ ಜೂನ್ 2 ಕ್ಕೆ ಕರ್ನಾಟಕ ಬಂದ್?*

ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಆದರೆ ಕನ್ನಡ ಭಾಷೆ ಬಗ್ಗೆ ಯಾರೇ ಮಾತನಾಡಿ ಕಿರಿಕ್ ಮಾಡಿದರೂ ಕನ್ನಡಿಗರು ಸರಿಯಾದ ಉತ್ತರ ನೀಡುತ್ತಾರೆ.

ಆದರೆ ಇದೀಗ ಕನ್ನಡದ ಬಗ್ಗೆ ತಮಿಳು ನಟ ಕಮಲ್ ಹಾಸನ್ ನೀಡಿರುವ ಹೇಳಿಕೆ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ. ಇದೇ ವಿಚಾರವಾಗಿ ಕನ್ನಡಿಗರು ಕರ್ನಾಟಕ ಬಂದ್ ಮಾಡಲು ಇದೀಗ ನಿರ್ಧಾರ ಮಾಡಿ, ಕನ್ನಡ ಪರ ಸಂಘಟನೆಗಳು ಬೃಹತ್ ಪ್ರತಿಭಟನೆಗೆ ಸಜ್ಜಾಗಿವೆ ಎಂದು ವರದಿಯಾಗಿದೆ.

ಅದರಂತೆ ಜೂನ್‌ 2ರಂದು ಬೃಹತ್‌ ಪ್ರತಿಭಟನೆ ನಡೆಯುವ ಸಾಧ್ಯತೆ ಇದೆ. ಹೀಗಾಗಿ ಜೂನ್ 2ರಂದು ಸೋಮವಾರ ಶಾಲಾ ಕಾಲೇಜುಗಳಿಗೆ ರಜೆ ಸಿಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

*ಜೂನ್ 2ರಂದು ಬೃಹತ್‌ ಪ್ರತಿಭಟನೆ ಸಾಧ್ಯತೆ:*

ಹೌದು, ಜೂನ್ 2ರಂದು ಶಾಲಾ-ಕಾಲೇಜುಗಳಿಗೆ ರಜೆ ಸಿಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಕಮಲ್‌ ಹಾಸನ್‌ ಹೇಳಿಕೆ ಖಂಡಿಸಿ ಕರ್ನಾಟಕ ಬಂದ್ ಆಗುವ ಸಾಧ್ಯತೆಗಳು ಇವೆ ಎನ್ನಲಾಗುತ್ತಿದೆ. ಕನ್ನಡ ಪರ ಸಂಘಟನೆಗಳು ಬೃಹತ್ ಪ್ರತಿಭಟನೆಗೆ ಸಜ್ಜಾಗಿವೆ. ಇನ್ನು, ತಮಿಳು ನಟ ಕಮಲ್ ಹಾಸನ್ ಕನ್ನಡ ಭಾಷೆ ಬಗ್ಗೆ ಕೀಳಾಗಿ ಮಾತನಾಡಿದ ಬಳಿಕ ಕನ್ನಡ ಪರ ಸಂಘಟನೆಗಳ ನಾಯಕರು ಹೋರಾಟಕ್ಕೆ ಸಜ್ಜಾಗಿದ್ದಾರೆ. ಅಲ್ಲದೇ ಕರ್ನಾಟಕದಲ್ಲಿ ಇದೀಗ ತಮಿಳು ನಟ ಕಮಲ್ ಹಾಸನ್ ವಿರುದ್ಧ ದೊಡ್ಡ ಮಟ್ಟದಲ್ಲಿಯೇ ಹೋರಾಟ ನಡೆಸಲು ತಯಾರಿ ಕೈಗೊಳ್ಳಲಾಗಿದೆ.

ಅದರಂತೆ ಜೂನ್‌ 2ರಂದು ಕರ್ನಾಟಕದಾದ್ಯಂತ ಏನಾದರೂ ದೊಡ್ಡಮಟ್ದಲ್ಲಿ ಪ್ರತಿಭಟನೆ ನಡೆದಲ್ಲಿ ಅಂದು ಶಾಲಾ-ಕಾಲೇಜುಗಳಿಗೆ ರಜೆ ಸಿಗುವ ಸಾಧ್ಯತೆ ಇದೆ. ಆದರೆ ಈ ಬೃತಿಭಟನೆ ಅಥವಾ ಶಾಲಾ ಕಾಲೇಜುಗಳಿಗೆ ರಜೆ ಬಗ್ಗೆ ಈವರೆಗೂ ಯಾವುದೇ ಅಧಿಕೃತ ಮಾಹಿತಿ ಸರ್ಕಾರದಿಂದ ಹೊರಡಿಸಲಾಗಿಲ್ಲ. ತಮಿಳು ನಟ ಕಮಲ್ ಹಾಸನ್ ಈ ವಿಚಾರವಾ ಕ್ಷಮೆ ಕೇಳದಿದ್ದಲ್ಲಿ ಜೂನ್ 2 ಸೋಮವಾರ ಕರ್ನಾಟಕ ಬಂದ್ ಆಗುವ ಸಾಧ್ಯತೆ ಇದೆ ಎಂಬ ಮಾತುಗಳು ಹರಿದಾಡುತ್ತಿದೆ. ಹೀಗಾಗಿ ಬಂದ್‌ ಅಥವಾ ಪ್ರತಿಭಟನೆ ವಿಚಾರವಾಗಿ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.