Headlines

ಕುವೆಂಪು ವಿವಿಯಲ್ಲಿ ಭಾಷಾಂತರ ಕುರಿತು ಒಂದು ವಾರದ ಕಾರ್ಯಾಗಾರ* *ಶ್ರೇಷ್ಠ ವಿಚಾರಗಳು ದೇಶ, ಭಾಷೆಗಳ‌ ಗಡಿ ದಾಟಲು ಭಾಷಾಂತರ ಅಗತ್ಯ: ಪ್ರೊ.‌ ರಾಜೇಂದ್ರ ಚೆನ್ನಿ*

  *ಕುವೆಂಪು ವಿವಿಯಲ್ಲಿ ಭಾಷಾಂತರ ಕುರಿತು ಒಂದು ವಾರದ ಕಾರ್ಯಾಗಾರ* *ಶ್ರೇಷ್ಠ ವಿಚಾರಗಳು ದೇಶ, ಭಾಷೆಗಳ‌ ಗಡಿ ದಾಟಲು ಭಾಷಾಂತರ ಅಗತ್ಯ: ಪ್ರೊ.‌ ರಾಜೇಂದ್ರ ಚೆನ್ನಿ* ಶಂಕರಘಟ್ಟ, ಫೆ. 28: ಪ್ರಸ್ತುತ ಮಾಹಿತಿ ಯುಗದಲ್ಲಿ ವಿವಿಧ ವಿಚಾರಗಳನ್ನು ದೇಶ, ಭಾಷೆ, ಗಡಿಗಳಿಂದಾಚೆಗೆ ಜಗತ್ತಿನಾದ್ಯಂತ ಪ್ರಸರಣೆ ಮಾಡಲು ಭಾಷಾಂತರ ಪ್ರಕ್ರಿಯೆ ಅತ್ಯಗತ್ಯ. ಜ್ಞಾನದ ಸೃಷ್ಟಿ ಹಾಗೂ ಅಭಿವೃದ್ಧಿಗೂ ಅನುವಾದ ಅವಶ್ಯಕ ಎಂದು ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ರಾಜೇಂದ್ರ ಚೆನ್ನಿ ಹೇಳಿದರು. ಕುವೆಂಪು ವಿಶ್ವವಿದ್ಯಾಲಯದ ಪ್ರೊ. ವೆಂಕಟರಾಮಯ್ಯ…

Read More

ಮಲೆನಾಡಿನ ಫೀನಿಕ್ಸ್ ಆರ್.ಎಂ.ಮಂಜುನಾಥ ಗೌಡರು ಈಗ MADB ಅಧ್ಯಕ್ಷರು

ಮಲೆನಾಡಿನ ಫೀನಿಕ್ಸ್ ಆರ್.ಎಂ.ಮಂಜುನಾಥ ಗೌಡರು ಫಿನಿಕ್ಸ್‌ ನಂತೆ ಎದ್ದು ಬಂದ ನಾಯಕ ಚತುರತೆವುಳ್ಳವನಿಗೆ ರಾಜಕೀಯದ ಚದುರಂಗದಾಟ ತುಂಬಾ ಸುಲಭ ……………….. ಇನ್ನೇನು ಮಗಿತು ಬಿಡಿ ಕಥೆ? ಕೇವಲ ಒಂದು ವರ್ಷದ ಹಿಂದಿನ ಮಾತು. ಹಿರಿಯ ಸಹಕಾರಿ ಹಾಗೂ ಕಾಂಗ್ರೆಸ್‌ ಮುಖಂಡ ಆರ್.‌ ಎಂ. ಮಂಜುನಾಥ ಗೌಡ ಅವರ ರಾಜಕೀಯ ಭವಿಷ್ಯದ ಬಗ್ಗೆ ಬಹಳಷ್ಟು ಜನ ಹೀಗೆ ಭವಿಷ್ಯ ನುಡಿದಿದ್ದರು. ಅವರ ವಿರೋಧಿಗಳು ಕೂಡ ಸಂಭ್ರಮಿಸಿದ್ದರು. ದುರಂತ ಅಂದ್ರೆ, ಮುಂದಿನ ಪರಿಸ್ಥಿತಿ ಹೇಗೋ ಏನೋ ಅಂತ ಅವರ ಆಪ್ತರು…

Read More

ಸೂಡಾ ಅಧ್ಯಕ್ಷರಾಗಿ ನಾಳೆ ಅಧಿಕಾರ ಸ್ವೀಕರಿಸಲಿರುವ ಹೆಚ್.ಎಸ್.ಸುಂದರೇಶ್- ಬೈಕ್ rallyಯೂ ನಡೆಯಲಿದೆ

ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಹೆಚ್.ಎಸ್.ಸುಂದರೇಶ್ ರವರಿಗೆ ಸೂಡಾ ಅಧ್ಯಕ್ಷ ಸ್ಥಾನ ಒಲಿದಿದ್ದು, ಇದರ ಸಂಭ್ರಮಾಚರಣೆ ನಾಳೆ ನಡೆಯಲಿದೆ.ಸೂಡಾ ಅಧ್ಯಕ್ಷ ಸ್ಥಾನವನ್ನು ನಾಳೆ ಬೆಳಿಗ್ಗೆ ಸುಂದರೇಶ್ ರವರು ಸ್ವೀಕರಿಸಲಿದ್ದಾರೆ. ಇದೇ ಸಂದರ್ಭದಲ್ಲಿ ನಾಳೆ ಬೆಳಿಗ್ಗೆ 11 ಕ್ಕೆ ಶಿವಮೊಗ್ಗದ ಸಹ್ಯಾದ್ರಿ ಕಾಲೇಜು ಬಳಿಯಿಂದ ವಿನೋಬನಗರದಲ್ಲಿರುವ  ಶಿವಮೊಗ್ಗ- ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರ( ಸೂಡಾ) ದ ಕಚೇರಿವರೆಗೆ ಕಾಂಗ್ರೆಸ್ ಕಾರ್ಯಕರ್ತರ ಬೈಕ್ ರ್ ಯಾಲಿ(rally) ನಡೆಯಲಿದೆ…  

Read More

ವೈಚಾರಿಕತೆಯ ಹಚ್ಚಿಟ್ಟ ಹಣತೆ ಡಾ.ಕೂಡಿಗೆ’

‘ವೈಚಾರಿಕತೆಯ ಹಚ್ಚಿಟ್ಟ ಹಣತೆ ಡಾ.ಕೂಡಿಗೆ’ ಡಾ.ಶ್ರೀಕಂಠ ಕೂಡಿಗೆಯವರು ವೈಚಾರಿಕತೆಯ ಹಚ್ಚಿಟ್ಟ ಹಣತೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ. ಚನ್ನೇಶ್ ಹೊನ್ನಾಳ್ಳಿ ಹೇಳಿದರು. ಅವರು ರಾಷ್ಟçಕವಿ ಡಾ.ಜಿ.ಎಸ್. ಶಿವರುದ್ರಪ್ಪ ಪ್ರತಿಷ್ಠಾನದ ವತಿಯಿಂದ ಬುಧವಾರ ಸಂಜೆ ಕರ್ನಾಟಕ ಸಂಘದಲ್ಲಿ ಆಯೋಜಿಸಿದ್ದ ಡಾ.ಜಿ.ಎಸ್.ಎಸ್.ಜನ್ಮದಿನ ಹಾಗೂ ಪುರಸ್ಕಾರ ಸಮಾರಂಭದಲ್ಲಿ ಪಾಲ್ಗೊಂಡು ಜಿ.ಎಸ್.ಎಸ್. ಪುರಸ್ಕಾರ ಪಡೆದ ಶ್ರೀಕಂಠ ಕೂಡಿಗೆಯವರಿಗೆ ಅಭಿನಂದನ ನುಡಿಗಳನ್ನಾಡಿದರು. ಇಂದು ದಿಕ್ಕೆಟ್ಟ ಪರಿಸ್ಥಿತಿ ಇದೆ. ಪ್ರಬುದ್ಧವನ್ನು ವಿರೋಧಿಸುವ ಧ್ವನಿಗಳು ಕ್ಷೀಣಿಸುತ್ತಿವೆ. ವ್ಯಕ್ತಿ ಆರಾಧನೆಯೇ ಮುಖ್ಯವಾಗಿವೆ. ಪ್ರತಿಕ್ರಿಯೆಯನ್ನು ನೀಡದಂತಹ…

Read More

ಡಾ.ಪ್ರೀತಂರ ಡಯಾಬಿಟಿಸ್ ರಿವರ್ಸಲ್- ಸತ್ಯ ಮತ್ತು ಮಿಥ್ಯ ಪುಸ್ತಕ ಬಿಡುಗಡೆ* *ಸರಳ ಸತ್ಯ ಅರ್ಥ ಮಾಡಿಕೊಂಡರೆ ಸಕ್ಕರೆ ರೋಗ ಗೆಲ್ಲಬಹುದು; ಡಾ.ಎಚ್.ಎಸ್.ಶಿವಪ್ರಕಾಶ್*

ಡಾ.ಪ್ರೀತಂರ ಡಯಾಬಿಟಿಸ್ ರಿವರ್ಸಲ್- ಸತ್ಯ ಮತ್ತು ಮಿಥ್ಯ ಪುಸ್ತಕ ಬಿಡುಗಡೆ* *ಸರಳ ಸತ್ಯ ಅರ್ಥ ಮಾಡಿಕೊಂಡರೆ ಸಕ್ಕರೆ ರೋಗ ಗೆಲ್ಲಬಹುದು; ಡಾ.ಎಚ್.ಎಸ್.ಶಿವಪ್ರಕಾಶ್* ಇಡೀ ಜಗತ್ತಲ್ಲಿ ಸಕ್ಕರೆ ಖಾಯಿಲೆಯ ಎರಡನೇ ರಾಜಧಾನಿ ಭಾರತ. ಮೊದಲ ಸ್ಥಾನದಲ್ಲಿ ಚೈನಾ ಮತ್ತು ಮೂರನೇ ಸ್ಥಾನದಲ್ಲಿ ಪಾಕಿಸ್ತಾನವಿದೆ. ಈ ಸಕ್ಕರೆ ಖಾಯಿಲೆ ಯಥೇಚ್ಛವಾಗಲು ನಮ್ಮ ಆಹಾರದಲ್ಲಿರುವ ಕಾರ್ಬೋಹೈಡ್ರೇಡ್ ಕಾರಣ. ನಮ್ಮ ದಿನನಿತ್ಯದ ಅನ್ನದಲ್ಲಿರುವ ಈ ಕಾರ್ಬೋಹೈಡ್ರೇಡ್ ಕಡಿಮೆ ಮಾಡಿಕೊಂಡರೆ ಸಕ್ಕರೆ ಖಾಯಿಲೆ ಇನ್ನಿಲ್ಲವಾಗಿಸಬಹುದೆಂಬ ಸರಳ ಸತ್ಯ ಈ ಪುಸ್ತಕದಲ್ಲಿದೆ ಎಂದು ಖ್ಯಾತ ಸಾಹಿತಿ…

Read More

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಮಹಿಳಾ ಕ್ರೀಡಾಕೂಟ*

*ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಮಹಿಳಾ ಕ್ರೀಡಾಕೂಟ* ಶಿವಮೊಗ್ಗ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಮಾರ್ಚ್-08 ರಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸುತ್ತಿದ್ದು, ಪ್ರಯುಕ್ತ ಪೂರ್ವಭಾವಿಯಾಗಿ ನಗರದ ನೆಹರೂ ಕ್ರೀಡಾಂಗಣದಲ್ಲಿ ಮಾ. 06 ಮತ್ತು 07 ರಂದು ಜಿಲ್ಲೆಯ ಮಹಿಳೆಯರಿಗಾಗಿ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಏರ್ಪಡಿಸಿದೆ. ಮಾ. 06 ಮತ್ತು 07 ರಂದು ಬೆಳಗ್ಗೆ 10.00 ರಿಂದ ವಾಲಿಬಾಲ್, ಥ್ರೋಬಾಲ್, ಅಥ್ಲೇಟಿಕ್ (100 ಮೀ, 800ಮೀ ಓಟ, ಉದ್ದ ಜಿಗಿತ ಮತ್ತು 200 ಮೀ,…

Read More

ಸಾಸ್ವೆಹಳ್ಳಿ ರಂಗರಾಜ್ ರ ಹೊಸ ಕವಿತೆ ‘ಮಾಯಾವಿ’ ನಿಮಗಾಗಿ…

*ಮಾಯಾವಿ* “””””””””””””””” ಗೆಳತಿ ಮೊದಲ ನೋಟದಲೇ ದಿಟ್ಟಿಸಿ ನಂತರ ಮೋಹಿಸಿ ನಿರಂತರ ಪ್ರೀತಿಸಿ ಅರ್ಥೈಸಿ ಒಪ್ಪಿಸಿ ಸಹಿಸಿ ಸೈರೈಸಿ ಹಂಬಲಿಸಿ ಹುರಿದುಂಬಿಸಿ ಚೇತರಿಸಿ ಪರವಶವಾಗಿ‌ಸಿ ಕನವರಿಸಿ ಗರಿಗೆದರಿಸಿ ಹಾರಾಡಿಸಿ ಈಗ ರೆಕ್ಕೆ ಕತ್ತರಿಸಿ ನೋಯಿಸಿ ಗಹಗಹಿಸಿ ಸ್ನೇಹ ಪ್ರೀತಿ ಇಲ್ಲವಾಗಿಸಿ ಅದೆಲ್ಲಿಗೆ ಮಾಯವಾದೆ ಪಲಾಯನವಾದಿ ?   # ಸಾರಂಗರಾಜ್ 28/02/2024

Read More

ಇವತ್ತಿನ ಕವಿಸಾಲು

Gm ಶುಭೋದಯ💐 *ಕವಿಸಾಲು* ನಿನ್ನನ್ನು ಗೌರವಿಸಲೆಂದು ಬಾಗಿದ್ದೆ; ನೀ ಬೆನ್ನ ಹುರಿ ಮೇಲೆ ಕಾಲಿಟ್ಟು ತೆರಳಿದ್ದೆ! *ಕವಿಸಾಲು- 2* ಪ್ರೇಮ ಧ್ಯಾನ ನೆಮ್ಮದಿ ಬದುಕು ಏನೆಲ್ಲಾ ಅನ್ನುತ್ತಿರುತ್ತಾರೆ ಜನ ಮಾತಿನಲ್ಲಿ; ನಾನಂತೂ ನೀನು ಎಂದುಬಿಡುತ್ತೇನೆ ಮುಗುಳ್ನಕ್ಕು ಮೌನದಲ್ಲಿ… ಜನ ಮತ್ತು ನಾನು ಎಷ್ಟೊಂದು ವಿರುದ್ಧ ದಿಕ್ಕಿನಲ್ಲಿದ್ದೇವೆ ಈ ಜಗತ್ತಿನಲ್ಲಿ! – *ಶಿ.ಜು.ಪಾಶ* 8050112067 (28/2/24)

Read More

ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ

ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ ಬೆಂಗಳೂರಿನ ಇಸ್ರೋ ಸಂಸ್ಥೆಯ ಯು.ಆರ್.ರಾವ್ ಸ್ಯಾಟ್‍ಲೈಟ್ ಸೆಂಟರ್‍ನವರು ವಿವಿಧ ಹುದ್ದೆಗಳಿಗಾಗಿ ಆನ್‍ಲೈನ್ ಅರ್ಜಿ ಆಹ್ವಾನಿಸಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು www.isro.gov.in, www.ursc.gov.in, www.istrac.gov.in ಆನ್‍ಲೈನ್ ಮೂಲಕ ಮಾ.01 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Read More