Editor MalenaduExpress

ನಾನು ನಿಮ್ಮ ಶಿ.ಜು.ಪಾಶ. ವಿಶೇಷವೂ ವಿಭಿನ್ನವೂ ಆದ ಸುದ್ದಿಗಳನ್ನು, ವಿಷಯಗಳನ್ನು ಹಂಚಿಕೊಳ್ಳಲೆಂದೇ ಆರಂಭಿಸಿದ ಸಾಮಾಜಿಕ ಜಾಲತಾಣವಿದು...

ಪವಿತ್ರಾ ಗೌಡಗೆ ಅಶ್ಲೀಲವಾಗಿ ಮೆಸೇಜ್ ಮಾಡಿದ್ದಕ್ಕೆ ರೇಣುಕಾ ಸ್ವಾಮಿ ಕೊಲೆ?ನಟ ದರ್ಶನ್ ಅರೆಸ್ಟ್

ಪವಿತ್ರಾ ಗೌಡಗೆ ಅಶ್ಲೀಲವಾಗಿ ಮೆಸೇಜ್ ಮಾಡಿದ್ದಕ್ಕೆ ರೇಣುಕಾ ಸ್ವಾಮಿ ಕೊಲೆ? ನಟ ದರ್ಶನ್ ಅರೆಸ್ಟ್ Darshan Pavithra Gowda Case: ದರ್ಶನ್ ಜೊತೆ ಪವಿತ್ರಾ ಗೌಡ ಆಪ್ತವಾಗಿದ್ದಾರೆ. ದರ್ಶನ್ ಜೊತೆ ಇರೋ ಫೋಟೋಗಳನ್ನು ಪವಿತ್ರಾ ಗೌಡ ಹಂಚಿಕೊಂಡಿದ್ದರು. ಪವಿತ್ರಾ ಗೌಡಗೆ ಚಿತ್ರದುರ್ಗದ ರೇಣುಕಾ ಸ್ವಾಮಿ ಎಂಬುವವರು ಅಶ್ಲೀಲ ಮೇಸೆಜ್ ಮಾಡಿದ್ದರು. ಕಾಮಾಕ್ಷಿಪಾಳ್ಯದಲ್ಲಿ ರೇಣುಕಾಸ್ವಾಮಿಯ ಕೊಲೆ ಆಗಿತ್ತು. ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಅರೆಸ್ಟ್ ಆಗಿದ್ದಾರೆ. ಪವಿತ್ರಾ ಗೌಡಗೆ ಅಶ್ಲೀಲವಾಗಿ ಮೆಸೇಜ್ ಮಾಡಿದ್ದಕ್ಕೆ ರೇಣುಕಾ ಸ್ವಾಮಿ ಎಂಬುವವರು ಕೊಲೆ ಆಗಿದ್ದರು….

Read More

ಶಿವಮೊಗ್ಗ ಮಹಾನಗರ ಪಾಲಿಕೆಯ ನೂತನ ಆಯುಕ್ತೆ ಶ್ರೀಮತಿ ಕವಿತಾ ಯೋಗಪ್ಪನವರ್ ಹಿಸ್ಟರಿ ಏನು?ಮಾನವೀಯ ಕಳಕಳಿಯ ಆಯುಕ್ತ ಮಾಯಣ್ಣ ಗೌಡರಿಗೆ ಗೌರವದ ಬೀಳ್ಕೊಡುಗೆ ನೀಡೋಣ…

ಶಿವಮೊಗ್ಗ ಮಹಾನಗರ ಪಾಲಿಕೆಯ ನೂತನ ಆಯುಕ್ತೆ ಶ್ರೀಮತಿ ಕವಿತಾ ಯೋಗಪ್ಪನವರ್ ಹಿಸ್ಟರಿ ಏನು? ಮಾನವೀಯ ಕಳಕಳಿಯ ಆಯುಕ್ತ ಮಾಯಣ್ಣ ಗೌಡರಿಗೆ ಗೌರವದ ಬೀಳ್ಕೊಡುಗೆ ನೀಡೋಣ… ಶಿವಮೊಗ್ಗ ಮಹಾನಗರ ಪಾಲಿಕೆಯ ನೂತನ ಆಯುಕ್ತರಾಗಿ ಶ್ರೀಮತಿ ಕವಿತಾ ಯೋಗಪ್ಪನವರ್ ರವರನ್ನು ಸರ್ಕಾರ ವರ್ಗ ಮಾಡಿ ಆದೇಶಿಸಿದೆ. ಇವರು ಈ ಹಿಂದೆ ಶಿವಮೊಗ್ಗ ಪಾಲಿಕೆಯಲ್ಲಿ ಆಡಳಿತ ವಿಭಾಗದಲ್ಲಿ ಅಡ್ಮಿನ್ ಆಗಿ ಕಾರ್ಯನಿರ್ವಹಿಸಿದ್ದರು. ಹಾಲಿ ಇರುವ ಆಯುಕ್ತರಾದ ಮಾಯಣ್ಣ ಗೌಡರು ತಮ್ಮ ಮಾನವೀಯ ನಡವಳಿಕೆಗಳಿಂದ ಹಾಗೂ ಸಹಾಯದ ಗುಣಗಳಿಂದಷ್ಟೇ ಅಲ್ಲ, ನಗರದ ಅಭಿವೃದ್ಧಿ…

Read More

ಆಯುಕ್ತ ಮಾಯಣ್ಣ ಗೌಡರ ಸಾಧನೆ ಏನು? ಹೇಗೆ ಇವರು ಭಿನ್ನ?*ಜನ ಸ್ನೇಹಿ ವಾತಾವರಣದತ್ತ ಶಿವಮೊಗ್ಗ ಮಹಾ ನಗರ ಪಾಲಿಕೆ*

ಆಯುಕ್ತ ಮಾಯಣ್ಣ ಗೌಡರ ಸಾಧನೆ ಏನು?  ಹೇಗೆ ಇವರು ಭಿನ್ನ? *ಜನ ಸ್ನೇಹಿ ವಾತಾವರಣದತ್ತ ಶಿವಮೊಗ್ಗ ಮಹಾ ನಗರ ಪಾಲಿಕೆ* ಸಾರ್ವಜನಿಕರು ತಮ್ಮ ಒಂದಲ್ಲ ಒಂದು ಕೆಲಸ ಕಾರ್ಯಗಳಿಗೆ ಮಹಾನಗರ ಪಾಲಿಕೆ ಕಛೇರಿಯತ್ತ ಹೋಗಲೇ ಬೇಕಾದದ್ದು ಸಾಮಾನ್ಯ ಸಂಗತಿ ಹಾಗೂ ಅನಿವಾರ್ಯವೂ ಹೌದು. ಅಲ್ಲಿ ಸಾರ್ವಜನಿಕರ ಸಣ್ಣ ಕೆಲಸ ಬಿಡಿ ಕಂದಾಯ ಪಾವತಿಯಂತಹ ಸಾಮಾನ್ಯ ಕಾರ್ಯ ಮಾಡಬೇಕಾಗಿದ್ದರೂ ದೊಡ್ಡ ಸಾಹಸ ಪಡಬೇಕಾಗಿತ್ತು! ನಮ್ಮ ಕೆಲಸಕ್ಕೆ ಯಾವ ವಿಭಾಗಕ್ಕೆ, ಯಾವ ಕಡೆ ಹೋಗಬೇಕು ಎಂದು ತಿಳಿಯದೆ ಒಂದಿಡೀ ದಿನ…

Read More

ಬಿಜೆಪಿ ಕಾರ್ಯಕರ್ತರ ಮೇಲಿನ ಹಲ್ಲೆಗೆ ಡಾ. ಸರ್ಜಿ ಖಂಡನೆ

ಬಿಜೆಪಿ ಕಾರ್ಯಕರ್ತರ ಮೇಲಿನ ಹಲ್ಲೆಗೆ ಡಾ. ಸರ್ಜಿ ಖಂಡನೆ ಶಿವಮೊಗ್ಗ : ಸತತ ಮೂರನೇ ಭಾರಿಗೆ ದೇಶದ ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿ ಜೀ ಅವರು ಅಧಿಕಾರ ಸ್ವೀಕರಿಸಿದ ನಂತರ ಮಂಗಳೂರು ಸಮೀಪದ ಬೋಳಿಯಾರ್ ನಲ್ಲಿ ಸಂಭ್ರಮಾಚರಣೆ ಮಾಡುತ್ತಿದ್ದ ಬಿಜೆಪಿ ಕಾರ್ಯಕರ್ತರ ಮೇಲೆ ದುಷ್ಕರ್ಮಿಗಳ ತಂಡವು ನಡೆಸಿದ ಹಲ್ಲೆಯನ್ನು ವಿಧಾನ ಪರಿಷತ್ ನೂತನ ಸದಸ್ಯ ಡಾ.ಧನಂಜಯ ಸರ್ಜಿ ತೀವ್ರವಾಗಿ ಖಂಡಿಸಿದ್ದಾರೆ. ರಾಜ್ಯದ ಗೌರವಾನ್ವಿತ ಸ್ಪೀಕರ್ ಅವರ ಕ್ಷೇತ್ರದಲ್ಲೇ ಇಂತಹ ರಾಜಕೀಯ ದ್ವೇಷದ ದುಷ್ಕೃತ್ಯಗಳು ನಡೆಯುತ್ತಿರುವುದು ಆತಂಕಕಾರಿಯಾಗಿದೆ. ಘಟನೆಯಲ್ಲಿ…

Read More

ರಾಷ್ಟ್ರೀಯ ಬಿಜೆಪಿ ನೂತನ ಅಧ್ಯಕ್ಷ ಯಾರಾಗಲಿದ್ದಾರೆ?; ಕರ್ನಾಟಕದ ಬಿ.ಎಲ್.ಸಂತೋಷ್?*

*ರಾಷ್ಟ್ರೀಯ ಬಿಜೆಪಿ ನೂತನ ಅಧ್ಯಕ್ಷ ಯಾರಾಗಲಿದ್ದಾರೆ?; ಕರ್ನಾಟಕದ ಬಿ.ಎಲ್.ಸಂತೋಷ್?* ಮೋದಿ 3.0 ಕ್ಯಾಬಿನೆಟ್ ರಚನೆಯಾಗಿದ್ದು, ಪ್ರಧಾನಿ ನರೇಂದ್ರ ಮೋದಿಯವರ ಸಂಪುಟದಲ್ಲಿ 71 ಸಚಿವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಬಿಜೆಪಿ ರಾಷ್ಟ್ರಾಧ್ಯಕ್ಷರಾಗಿದ್ದ ಜೆಪಿ ನಡ್ಡಾ ಕೂಡ ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಹಾಗಾದರೆ, ಮುಂದಿನ ಬಿಜೆಪಿ ಅಧ್ಯಕ್ಷ ಯಾರಾಗಲಿದ್ದಾರೆ? ಸಂಭಾವ್ಯ ಹೆಸರುಗಳ ಪಟ್ಟಿ ಇಲ್ಲಿದೆ. ಬಿಜೆಪಿ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ (ಜೆಪಿ ನಡ್ಡಾ) ನರೇಂದ್ರ ಮೋದಿ ಸಂಪುಟದಲ್ಲಿ (Narendra Modi Cabinet) ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ….

Read More

ಡಾ.ಸರ್ಜಿ, ಭೋಜೇಗೌಡರ ಹೆಗಲೇರಿದ ಒಪಿಎಸ್ ಜಾರಿ/ವಿಶ್ಲೇಷಣೆ: ಡಾ.ಬಾಲಕೃಷ್ಣ ಹೆಗಡೆ, ಶಿವಮೊಗ್ಗ  

ಡಾ.ಸರ್ಜಿ, ಭೋಜೇಗೌಡರ ಹೆಗಲೇರಿದ ಒಪಿಎಸ್ ಜಾರಿ ವಿಶ್ಲೇಷಣೆ: ಡಾ.ಬಾಲಕೃಷ್ಣ ಹೆಗಡೆ, ಶಿವಮೊಗ್ಗ   ಅತ್ಯಂತ ಕುತೂಹಲ ಕೆರಳಿಸಿದ್ದ ಕರ್ನಾಟಕ ವಿಧಾನ ಪರಿಷತ್ತಿನ ನೈಋತ್ಯ ಪದವೀಧರ-ಶಿಕ್ಷಕರ ಕ್ಷೇತ್ರದ ಚುನಾವಣೆ-೨೦೨೪ ಮುಗಿದಿದೆ. ಫಲಿತಾಂಶವೂ ಬಂದಾಗಿದೆ. ಚುನಾವಣಾ ಕಣದಲ್ಲಿದ್ದ ರಾಷ್ಟ್ರೀಯ ಪಕ್ಷಗಳು, ತಮಗೆ ಟಿಕೆಟ್ ಸಿಗಲಿಲ್ಲ ಎಂಬ ಕಾರಣಕ್ಕೆ ಆ ಪಕ್ಷಗಳಿಂದ ಬಂಡಾಯದ ಬಾವುಟ ಹಾರಿಸಿ ಸ್ವತಂತ್ರವಾಗಿ ಸ್ಪರ್ಧಿಸಿದವರು ಹಾಗೂ ಕೆಲ ಪಕ್ಷೇತರವಾಗಿ ಸ್ಪರ್ಧಿಸಿ ತಮ್ಮದೇ ಆದ ರೀತಿಯಲ್ಲಿ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡಿದ್ದು ಈಗ ಮುಗಿದ ಅಧ್ಯಾಯ. ನೈಋತ್ಯ ಪದವೀಧರ…

Read More

ಬಿ.ವೈ.ರಾಘವೇಂದ್ರ- ಹರತಾಳು ಮುಖ ನೋಡಿ ಜನ ಬಿಜೆಪಿಗೆ ಮತ ಹಾಕಿಲ್ಲ; ಶಾಸಕ ಬೇಳೂರು ಅಭಿಮತ

ಬಿ.ವೈ.ರಾಘವೇಂದ್ರ- ಹರತಾಳು ಮುಖ ನೋಡಿ ಜನ ಬಿಜೆಪಿಗೆ ಮತ ಹಾಕಿಲ್ಲ; ಶಾಸಕ ಬೇಳೂರು ಅಭಿಮತ ಸಾಗರ : ಲೋಕಸಭಾ ಚುನಾವಣೆಯಲ್ಲಿ 26ಸಾವಿರ ಮತ ಬಿಜೆಪಿಗೆ ಲೀಡ್ ಬಂದಿದೆ ಎಂದು ಕಾರ್ಯಕರ್ತರು ಹೆದರಬೇಡಿ. ಕೇಂದ್ರದಲ್ಲಿ ನರೇಂದ್ರ ಮೋದಿ ಪ್ರಧಾನಿಯಾಗಬೇಕು ಎಂದು ಜನರು ಬಿಜೆಪಿಗೆ ಮತ ನೀಡಿದ್ದಾರೆಯೆ ವಿನಃ ಬಿ.ವೈ.ರಾಘವೇಂದ್ರ, ಹರತಾಳು ಹಾಲಪ್ಪ ಮುಖ ನೋಡಿ ಮತ ಹಾಕಿಲ್ಲ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದ್ದಾರೆ. ಇಲ್ಲಿನ ಆರ್ಯ ಈಡಿಗರ ಸಮುದಾಯ ಭವನದಲ್ಲಿ ಸೋಮವಾರ ಬ್ಲಾಕ್ ಕಾಂಗ್ರೇಸ್ ವತಿಯಿಂದ ಲೋಕಸಭಾ…

Read More

ಕಾಂಗ್ರೆಸ್ ಜಿಲ್ಲಾ ಸಮಿತಿಯಿಂದ ಕೃತಜ್ಞತಾ ಸಭೆ’ಗೀತಕ್ಕ ಸೋಲಿನ ಹೊಣೆ ನನ್ನದು: ಮಧುಬಂಗಾರಪ್ಪ/ಗೀತಾ ರಾಜಕೀಯಕ್ಕೆ ಬಂದಿದ್ದು ತಪ್ಪ? ಶಿವಣ್ಣ ಪ್ರಶ್ನೆ/ಶಕ್ತಿ ಧಾಮ ನಿರ್ಮಿಸುವೆ: ಗೀತಾ ಶಿವರಾಜಕುಮಾರ್

‘ಕಾಂಗ್ರೆಸ್ ಜಿಲ್ಲಾ ಸಮಿತಿಯಿಂದ ಕೃತಜ್ಞತಾ ಸಭೆ’ ಗೀತಕ್ಕ ಸೋಲಿನ ಹೊಣೆ ನನ್ನದು: ಮಧುಬಂಗಾರಪ್ಪ ಶಿವಮೊಗ್ಗ: ‘ಗೀತಾ ಶಿವರಾಜಕುಮಾರ ಅವರ ಸೋಲಿನ ಹೊಣೆ ನನ್ನದು. ಆದರೆ, ಇಲ್ಲಿ ಗೀತಕ್ಕ ೫.೩೦ ಲಕ್ಷ ಮತ ಪಡೆದು ಕ್ಷೇತ್ರದ ಜನರ ಹೃದಯ ಗೆದ್ದಿದ್ದಾರೆ. ಇದು ಖಂಡಿತ ಸೋಲಲ್ಲ’ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಮಧುಬಂಗಾರಪ್ಪ ಹೇಳಿದರು. ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ನಗರದ ಆರ್ಯ ಈಡಿಗ ಭವನದಲ್ಲಿ ಸೋಮವಾರ ಆಯೋಜಿಸಿದ್ದ…

Read More

ಹೊಸಮನೆ ವಾಹನಗಳ ಧ್ವಂಸ ಪ್ರಕರಣ;ಬಿಕ್ಲಾ ಗ್ಯಾಂಗ್ ಬೇಟೆಯಾಡಿದ ಪೊಲೀಸರು!ಆರೂ ಜನರೂ ಸಣ್ಣ ವಯಸ್ಸಿನ ಯುವಕರಿಂದ ಕೃತ್ಯ…

ಹೊಸಮನೆ ವಾಹನಗಳ ಧ್ವಂಸ ಪ್ರಕರಣ; ಬಿಕ್ಲಾ ಗ್ಯಾಂಗ್ ಬೇಟೆಯಾಡಿದ ಪೊಲೀಸರು! ಆರೂ ಜನರೂ ಸಣ್ಣ ವಯಸ್ಸಿನ ಯುವಕರಿಂದ ಕೃತ್ಯ… ಶಿವಮೊಗ್ಗದ ಹೊಸಮನೆ ಬಡಾವಣೆಯ ಮೂರನೇ ತಿರುವಿನಲ್ಲಿ ವಾಹನಗಳ ಗಾಜುಗಳನ್ನು ಪುಡಿ ಪುಡಿ ಮಾಡಿ ಹಂಗಾಮ ಎಬ್ಬಿಸಿದ್ದ ಆರು ಜನ ಪುಂಡರ ಹೆಡೆಮುರಿಯನ್ನು ಪೊಲೀಸರು ಕಟ್ಟಿದ್ದು, ಸಾಕಷ್ಟು ಸದ್ದು ಮಾಡಿದ್ದ ಪ್ರಕರಣಕ್ಕೆ ಕೊನೆ ಮೊಳೆ ಹೊಡೆದಿದ್ದಾರೆ. ಸಾರ್ವಜನಿಕರು ಮನೆಗಳ ಮುಂದೆ ನಿಲ್ಲಿಸಿದ್ದ ವಾಹನಗಳನ್ನು ಸಾಲು ಸಾಲಾಗಿ ಜಖಂಗೊಳಿಸಿ ಭಯದ ವಾತಾವರಣ ಸೃಷ್ಟಿಸಿದ್ದರ ಬಗ್ಗೆ ದೊಡ್ಡಪೇಟೆ ಪೊಲೀಸ್ ಠಾಣೆಗೆ ಸಾರ್ವಜನಿಕರೇ…

Read More

ವಿನೋಬ ನಗರದ ಮನೆಯಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಮೇಲೆ ಪೊಲೀಸರ ದಾಳಿ; ಹೊಸಮನೆಯ ಶೇಖರ್ ಮೂರ್ತಿ ಬಂಧನ

ವಿನೋಬ ನಗರದ ಮನೆಯಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಮೇಲೆ ಪೊಲೀಸರ ದಾಳಿ; ಹೊಸಮನೆಯ ಶೇಖರ್ ಮೂರ್ತಿ ಬಂಧನ ಶಿವಮೊಗ್ಗದ ವಿನೋಬ ನಗರದ ವಾಸದ ಮನೆಯೊಂದರಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಮೇಲೆ ದಾಳಿ ಮಾಡಿದ ಪೊಲೀಸರು, ಓರ್ವ ದಂಧಕೋರನನ್ನು ಬಂಧಿಸಿದ್ದು, ಓರ್ವ ಸಂತ್ರಸ್ತ ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ. ವಿನೋಬ‌ನಗರ ಸಿಪಿಐ ಚಂದ್ರಕಲಾ ನೇತೃತ್ವದ ಪೊಲೀಸರ ತಂಡ ಈ ದಾಳಿ ಮಾಡಿದ್ದು, ಶಿವಮೊಗ್ಗದ ಹೊಸಮನೆ ವಾಸಿ ಶೇಖರ್ ಮೂರ್ತಿಯನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ಎಸ್ ಪಿ ಮಿಥುನ್ ಕುಮಾರ್ ರವರಿಗೆ ಬಂದ ಖಚಿತ…

Read More