Editor MalenaduExpress

ನಾನು ನಿಮ್ಮ ಶಿ.ಜು.ಪಾಶ. ವಿಶೇಷವೂ ವಿಭಿನ್ನವೂ ಆದ ಸುದ್ದಿಗಳನ್ನು, ವಿಷಯಗಳನ್ನು ಹಂಚಿಕೊಳ್ಳಲೆಂದೇ ಆರಂಭಿಸಿದ ಸಾಮಾಜಿಕ ಜಾಲತಾಣವಿದು...

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ : ಕೆ.ಎಸ್‌ ಈಶ್ವರಪ್ಪ ವಿರುದ್ದ ಎಫ್‌ಐಆರ್*

*ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ : ಕೆ.ಎಸ್‌ ಈಶ್ವರಪ್ಪ ವಿರುದ್ದ ಎಫ್‌ಐಆರ್* ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿದ್ದು, ಈ ವೇಳೆ ಚುನಾವಣಾಧಿಕಾರಿಗಳ ಕಚೇರಿಯಿಂದ ಯಾವುದೇ ರೀತಿಯ ಅನುಮತಿ ಪಡೆಯದೆ ರಾಜಕೀಯ ಸಭೆ ನಡೆಸಿ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವ ಕೆ.ಎಸ್.ಈಶ್ವರಪ್ಪನವರ ವಿರುದ್ದ ಎಫ್‌ಐಆರ್‌ ದಾಖಲಿಸಲಾಗಿದೆ. ಏ.೫ ರಂದು ತೀ‍ರ್ಥಹಳ್ಳಿ ತಾಲ್ಲೂಕು ನೊಣಬೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಅಂಬುತೀರ್ಥದ ದೇವಸ್ಥಾನ ಒಂದರಲ್ಲಿ ಪೂಜಾ ಕಾ‍ರ್ಯಕ್ರಮ ನೆರವೇರಿಸಿ, ಅಲ್ಲೇ ಹತ್ತಿರದಲ್ಲೇ ಅರ್ಚಕರ ಮನೆಗೆ ಹೋಗಿ, ಅಲ್ಲಿ ಅವರ ಮನೆಯ…

Read More

ಕುವೆಂಪು ವಿವಿ: ಪಿಜಿ (ಸ್ನಾತಕೋತ್ತರ) ಅಧ್ಯಾಪಕರಿಗೆ ನ್ಯಾಕ್ ಮೌಲ್ಯಮಾಪನ ಕುರಿತ ಕಾರ್ಯಾಗಾರ ಉನ್ನತ ಶಿಕ್ಷಣ ದೇಶದ ಅಭಿವೃದ್ಧಿ ನಿರ್ಧರಿಸುವ ಸಾಧನ ಎನ್.ಇ.ಪಿ.ಯಿಂದ ಉನ್ನತ ಶಿಕ್ಷಣದ ಗುಣಮಟ್ಟ ಹೆಚ್ಚಳ ಗುರಿ: ಡಾ. ಎಡ್ವರ್ಡ್

ಕುವೆಂಪು ವಿವಿ: ಪಿಜಿ (ಸ್ನಾತಕೋತ್ತರ) ಅಧ್ಯಾಪಕರಿಗೆ ನ್ಯಾಕ್ ಮೌಲ್ಯಮಾಪನ ಕುರಿತ ಕಾರ್ಯಾಗಾರ ಉನ್ನತ ಶಿಕ್ಷಣ ದೇಶದ ಅಭಿವೃದ್ಧಿ ನಿರ್ಧರಿಸುವ ಸಾಧನ ಎನ್.ಇ.ಪಿ.ಯಿಂದ ಉನ್ನತ ಶಿಕ್ಷಣದ ಗುಣಮಟ್ಟ ಹೆಚ್ಚಳ ಗುರಿ: ಡಾ. ಎಡ್ವರ್ಡ್ ಶಂಕರಘಟ್ಟ, ದೇಶವೊಂದರ ಯುವಸಮೂಹವನ್ನು ಉತ್ತಮ ಗುಣಮಟ್ಟದಿಂದ ಕೂಡಿದ ಮಾನವ ಸಂಪನ್ಮೂಲವಾಗಿ ರೂಪಿಸಬಲ್ಲ ಸಾಮರ್ಥ್ಯವಿರುವುದು ಉನ್ನತ ಶಿಕ್ಷಣಕ್ಕೆ ಮಾತ್ರ. ಅದನ್ನು ಸಾಧಿಸುವ ಸಶಕ್ತ ಸಾಧನವೇ ರಾಷ್ಟಿçÃಯ ಶಿಕ್ಷಣ ನೀತಿ (ಎನ್.ಇ.ಪಿ.) ಎಂದು ಬೆಂಗಳೂರಿನ ಕ್ರಿಸ್ತು ಜಯಂತಿ ಕಾಲೇಜಿನ ವಾಣಿಜ್ಯ ನಿಖಾಯದ ಡೀನ ಡಾ. ಅಲೋಶಿಯಸ್ ಜೆ…

Read More

ಮೋದಿ ಮೋದಿ ಎನ್ನುವ ಮಕ್ಕಳಿಗೆ ಬಂಗಾರಪ್ಪನವರು ಮಾಡಿರುವ ಸಹಾಯವನ್ನು ತಂದೆ-ತಾಯಿಗಳು ನೆನಪಿಸಬೇಕು – ಎಂ.ರಮೇಶ್ ಶೆಟ್ಟಿ ಶಂಕರಘಟ್ಟ  

ಮೋದಿ ಮೋದಿ ಎನ್ನುವ ಮಕ್ಕಳಿಗೆ ಬಂಗಾರಪ್ಪನವರು ಮಾಡಿರುವ ಸಹಾಯವನ್ನು ತಂದೆ-ತಾಯಿಗಳು ನೆನಪಿಸಬೇಕು – ಎಂ.ರಮೇಶ್ ಶೆಟ್ಟಿ ಶಂಕರಘಟ್ಟ ತೀರ್ಥಹಳ್ಳಿ ಮೋದಿ ಮೋದಿ ಎಂಬ ಭ್ರಮಲೋಕದಲ್ಲಿ ತೇಲುತ್ತಿರುವ ನಮ್ಮ ಮಕ್ಕಳಿಗೆ ಮಾಜಿ ಮುಖ್ಯಮಂತ್ರಿಗಳಾದ ಬಂಗಾರಪ್ಪನವರು ಮಾಡಿರುವ ಸಹಾಯದಿಂದ ನಮ್ಮ ಬದುಕು ಹಸನಾಗಿದೆ ಮತ್ತು ತೃಪ್ತಿಯಿಂದ ಬದುಕುತ್ತಿದ್ದೇವೆ ಎಂದು ಅವರ ತಂದೆ ತಾಯಿಗಳು ಅರಿವು ಮೂಡಿಸುವ ಕೆಲಸ ಮಾಡಬೇಕೆಂದು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿ ವಕ್ತಾರ ಹಾಗೂ ತೀರ್ಥಹಳ್ಳಿ ಕ್ಷೇತ್ರದ ಲೋಕಸಭಾ ಚುನಾವಣೆ ಉಸ್ತುವಾರಿ ಎಂ.ರಮೇಶ್ ಶೆಟ್ಟಿ ಶಂಕರಘಟ್ಟ ಇವರು…

Read More

ಲೋಕಸಭಾ ಚುನಾವಣೆ; ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ದೇಶದ ಅಭ್ಯುದಯಕ್ಕೆ ಕಾಂಗ್ರೆಸ್ ಪ್ರಣಾಳಿಕೆ ಸಹಕಾರಿ

ಲೋಕಸಭಾ ಚುನಾವಣೆ; ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ದೇಶದ ಅಭ್ಯುದಯಕ್ಕೆ ಕಾಂಗ್ರೆಸ್ ಪ್ರಣಾಳಿಕೆ ಸಹಕಾರಿ ಶಿವಮೊಗ್ಗ: ‘ದೇಶದಲ್ಲಿ ಸಾಮಾಜಿಕ ನ್ಯಾಯ, ಲಿಂಗ ಸಮಾನತೆ, ಅಲ್ಪಸಂಖ್ಯಾತರ ವೈಯಕ್ತಿಕ ಕಾನೂನುಗಳ ಸುಧಾರಣೆ, ಹಿರಿಯ ನಾಗರಿಕರು, ಅಂಗವಿಕಲರ ಅಭ್ಯುದಯಕ್ಕೆ ಒತ್ತು ನೀಡಲು ಕಾಂಗ್ರೆಸ್‌ ಪಕ್ಷ ದಿಂದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಾಗಿದೆ’ ಎಂದು ಲೋಕಸಭಾ ಚುನಾವಣೆ ಜಿಲ್ಲಾ ಉಸ್ತುವಾರಿ ಅನಿಲ್ ಕುಮಾರ್ ತಡಕಲ್ ಹೇಳಿದರು. ‘ಮುಖ್ಯವಾಗಿ ಪ್ರಣಾಳಿಕೆಯಲ್ಲಿ ದೇಶದ ಪ್ರತಿ ಬಡ ಕುಟುಂಬಕ್ಕೆ ವರ್ಷಕ್ಕೆ ₹1 ಲಕ್ಷ ನೀಡಲು ಮಹಾಲಕ್ಷಿ ಯೋಜನೆ ಜಾರಿಗೆ ಒತ್ತು ನೀಡಲಾಗಿದೆ ಎಂದು…

Read More

ಏ. 12 ರಿಂದ 22 ರವರೆಗೆ ಜಿಲ್ಲಾಧಿಕಾರಿಗಳ ಕಚೇರಿ ಸುತ್ತಮುತ್ತ ನಿಷೇದಾಜ್ಞೆ ಜಾರಿ*

*ಏ. 12 ರಿಂದ 22 ರವರೆಗೆ ಜಿಲ್ಲಾಧಿಕಾರಿಗಳ ಕಚೇರಿ ಸುತ್ತಮುತ್ತ ನಿಷೇದಾಜ್ಞೆ ಜಾರಿ* ಶಿವಮೊಗ್ಗ ಲೋಕಸಭೆ ಚುನಾವಣೆ-2024 ರ ಹಿನ್ನೆಲೆಯಲ್ಲಿ ಭಾರತ ಚುನಾವಣಾ ಆಯೋಗವು ನಾಮಪತ್ರ ವೇಳಾಪಟ್ಟಿಯನ್ನು ನೀಡಿದ್ದು, ಏ. 12 ರಂದು ಅಧಿಸೂಚನೆ ಹೊರಡಿಸುವುದು, ಏ.19 ನಾಮಪತ್ರ ಸಲ್ಲಿಸಲು ಕೊನೆಯ ದಿನ, ಏ.20 ನಾಮಪತ್ರಗಳ ಪರಿಶೀಲನೆ ಹಾಗೂ ಏ.22 ನಾಮಪತ್ರ ಹಿಂಪಡೆಯುವ ದಿನಾಂಕವಾಗಿದ್ದು, ಈ ಅವಧಿಯಲ್ಲಿ ನಾಮಪತ್ರ ಸಲ್ಲಿಸುವ ಪ್ರಕ್ರಿಯೆಯು ಸುಗಮ ಮತ್ತು ಶಾಂತಿಯುತವಾಗಿ ನಡೆಯಬೇಕಾಗಿರುವುದರಿಂದ ಹಾಗೂ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮವಾಗಿ…

Read More

ಕುಟುಂಬದಿಂದ ಬಿಜೆಪಿ ಅಪಹರಣ ಆಗಲು ಬಿಡುವುದಿಲ್ಲ : ಕೆ.ಎಸ್.ಈಶ್ವರಪ್ಪ

ಕುಟುಂಬದಿಂದ ಬಿಜೆಪಿ ಅಪಹರಣ ಆಗಲು ಬಿಡುವುದಿಲ್ಲ : ಕೆ.ಎಸ್.ಈಶ್ವರಪ್ಪ ಸಾಗರ: ಈಡಿಗರು, ಲಿಂಗಾಯತರು ಎಲ್ಲಾ ಸೇರಿ ಇಡೀ ಹಿಂದೂ ಸಮಾಜ ನನ್ನ ಕಡೆ ಇದೆ. ನಾನು ರಾಷ್ಟ್ರೀಯವಾದಿ ಎಂದು ಜನ ನನಗೆ ಬೆಂಬಲ ಕೊಡುತ್ತಿದ್ದಾರೆ ಎಂದು ಪಕ್ಷೇತರ ಅಭ್ಯರ್ಥಿ, ಕೆ.ಎಸ್‌.ಈಶ್ವರಪ್ಪ ಹೇಳಿದರು. ಸಾಗರ ವಿಧಾನ ಸಭಾ ಕ್ಷೇತ್ರದಲ್ಲಿ ರಾಷ್ಟ್ರ ಭಕ್ತರ ಬಳಗ ಸಾಗರ ವಿಭಾಗದ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಕಾರ್ಯರ್ತರ ಸಂಗಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಕಾಂಗ್ರೆಸ್ ನವರು ಎಲ್ಲಾ ಈಡಿಗರು ನಮ್ಮ ಜೊತೆ ಇದ್ದಾರೆ ಎನ್ನುತ್ತಾರೆ….

Read More

ಬಿಜೆಪಿ ಎಷ್ಟು ಗೆಲ್ಲುವುದು ಹೇಳಿ? ಜೆಡಿಎಸ್ ಮಾತ್ರವಲ್ಲ ಬಿಜೆಪಿಯ ಕತೆಯೂ ಭಿನ್ನವಾಗಿಲ್ಲ.

ಬಿಜೆಪಿ ಎಷ್ಟು ಗೆಲ್ಲುವುದು ಹೇಳಿ? ಜೆಡಿಎಸ್ ಮಾತ್ರವಲ್ಲ ಬಿಜೆಪಿಯ ಕತೆಯೂ ಭಿನ್ನವಾಗಿಲ್ಲ. ಬೀದರ್ ನಲ್ಲಿ ಖೂಬಾಗೆ ಸ್ವಪಕ್ಷೀಯರೇ ಅಡ್ಡಗಾಲು, ಕಲಬುರ್ಗಿಯಲ್ಲಿ ಜಾಧವ್ ಹಟಾವೋ ಎಂದು ಸ್ವಜಾತಿಯರೇ ಸಿಡಿದಿದ್ದಾರೆ, ರಾಧಾಕೃಷ್ಣಗೆ ಅದೃಷ್ಟ ಕಡೆಗೂ ಒಲಿದಿದೆ, ರಾಯಚೂರಿನಲ್ಲಿ ಭಿನ್ನಮತ, ಬಿಜಾಪೂರದಲ್ಲಿ ಗೌಡರು ಬೇಡ ಎಂದರೂ ಹಠ ತೊಟ್ಟಿರುವ ಜಿಗಜಿನ್ನಿಗೆ ಈ ಬಾರಿ ಭಾರೀ ಅಂತರದ ಸೋಲು ಕಾದಿದೆ, ಬಂಜಾರ, ಒಡ್ಡರು ಸಂಪೂರ್ಣ ಕಾಂಗ್ರೆಸ್ ನತ್ತ ವಾಲಿದ್ದಾರೆ, ಚಿಕ್ಕೋಡಿಯಲ್ಲಿ ಜೊಲ್ಲೆ ಮುಗಿದ ಕತೆ, ಪಾಪ ಬೆಳಗಾವಿಯಲ್ಲಿ ಶೆಟ್ಟರ್ ಪಂಚಮಸಾಲಿ ಹೊಡ್ತಕ್ಕೆ ಅಪ್ಪಚ್ಚಿ,…

Read More

ಡಿವಿಎಸ್ ಎಂದರೆ Rankಗಳ ಕಾಲೇಜೆಂದು ಇಮೇಜ್ ರೂಪಿಸಿದ್ದ ವಿಡಿಆರ್ ಇನ್ನಿಲ್ಲ

* ವಿಡಿಆರ್ ಎಂದೇ ಹೆಸರಾಗಿದ್ದ ವಿ. ದೇವೇಂದ್ರರವರು ಶುಕ್ರವಾರ ರಾತ್ರಿ 09.30ರ ವೇಳೆಯಲ್ಲಿ ಕೋಟೆ ರಸ್ತೆಯ ಅವರ ನಿವಾಸದಲ್ಲಿ ನಿಧನರಾಗಿದ್ದಾರೆ. ವಿ. ದೇವೇಂದ್ರರವರು ಡಿವಿಎಸ್ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾಗಿದ್ದರು.. 1972 ರಲ್ಲಿ ವಿ. ದೇವೇಂದ್ರರವರು, ಶಿವಮೊಗ್ಗದ ಡಿ ವಿ ಎಸ್ ಪದವಿ ಪೂರ್ವ (ಸ್ವತಂತ್ರ) ಕಾಲೇಜಿನ ಪ್ರಥಮ ಪ್ರಾಚಾರ್ಯರಾಗಿ ಕಾಲೇಜಿನ ಭದ್ರ ಬುನಾದಿ ಹಾಕಿದವರು.. ಸುಧೀರ್ಘ 22 ವರ್ಷಗಳ ಕಾಲ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ, 30 ಏಪ್ರಿಲ್ 1994 ರಂದು ನಿವೃತ್ತರಾಗಿದ್ದರು. ಡಿವಿಎಸ್…

Read More

ಅಹಿಂದ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷರಾಗಿ ಜಿ.ಡಿ. ಮಂಜುನಾಥ್ ನೇಮಕ

ಅಹಿಂದ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷರಾಗಿ ಜಿ.ಡಿ. ಮಂಜುನಾಥ್ ನೇಮಕ ರಾಜ್ಯ ಅಹಿಂದ (ಅಲ್ಪಸಂಖ್ಯಾತ,ಹಿಂದುಳಿದ ದಲಿತ ಒಕ್ಕೂಟ)ದ ಶಿವಮೊಗ್ಗ   ಜಿಲ್ಲಾ ಘಟಕದ ಕಾರ್ಯಾಧ್ಯಕ್ಷರನ್ನಾಗಿ ಜಿ.ಡಿ.ಮಂಜುನಾಥ್ ರವರನ್ನು ನೇಮಕ ಮಾಡಲಾಗಿದೆ. ಅಹಿಂದ ಒಕ್ಕೂಟದ ಸಿದ್ಧಾಂತಗಳಿಗೆ ಬದ್ಧರಾಗಿ ಸಂಘಟನೆಗೆ ಹೆಚ್ಚು ಒತ್ತು ಕೊಡುವಂತೆ ಜಿಲ್ಲಾಧ್ಯಕ್ಷ ಸಿ.ಎಸ್.ಚಂದ್ರಭೂಪಾಲ್ ಆದೇಶ ಪತ್ರದಲ್ಲಿ ತಿಳಿಸಿದ್ದಾರೆ.

Read More

ಏಪ್ರಿಲ್ 6ಕ್ಕೆ ಹಿರಿಯ ವಕೀಲ* *ಜಿ.ಎಸ್. ನಾಗರಾಜ್ ರಿಗೆ* *ವೃತ್ತಿ ಜೀವನ ಸಾರ್ಥಕತೆ -50 ಗೌರವ*

*ಏಪ್ರಿಲ್ 6ಕ್ಕೆ ಹಿರಿಯ ವಕೀಲ* *ಜಿ.ಎಸ್. ನಾಗರಾಜ್ ರಿಗೆ* *ವೃತ್ತಿ ಜೀವನ ಸಾರ್ಥಕತೆ -50 ಗೌರವ* ಶಿವಮೊಗ್ಗ ಜಿಲ್ಲಾ ವಕೀಲರ ಸಂಘ ಹಾಗೂ ಜಿ.ಎಸ್. ನಾಗರಾಜ್ ರವರ ಕಿರಿಯ ವಕೀಲರ ಬಳಗ ಇವರ ಸಂಯುಕ್ತಾಶ್ರಯದಲ್ಲಿ ಏ.೬ರ ಸಂಜೆ ೬ಕ್ಕೆ ರಾಷ್ಟ್ರೀಯ ಶಿಕ್ಷಣ ಸಮಿತಿಯ ರಾಷ್ಟ್ರೀಯ ಪ್ರೌಢಶಾಲೆಯ ಆವರಣದಲ್ಲಿ ಜಿ.ಎಸ್. ನಾಗರಾಜ್ ಅವರ ವಕೀಲ ವೃತ್ತಿ ಬದುಕಿನ ೫೦ ವರ್ಷ ಪೂರೈಸಿದ ಸಂಭ್ರಮದಲ್ಲಿ “ವೃತ್ತಿ ಜೀವನ ಸಾರ್ಥಕತೆ-೫೦” ವಿಶೇಷ ಅಭಿನಂದನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ವಕೀಲರ ಸಂಘ ಹಾಗೂ…

Read More