Editor MalenaduExpress

ನಾನು ನಿಮ್ಮ ಶಿ.ಜು.ಪಾಶ. ವಿಶೇಷವೂ ವಿಭಿನ್ನವೂ ಆದ ಸುದ್ದಿಗಳನ್ನು, ವಿಷಯಗಳನ್ನು ಹಂಚಿಕೊಳ್ಳಲೆಂದೇ ಆರಂಭಿಸಿದ ಸಾಮಾಜಿಕ ಜಾಲತಾಣವಿದು...

ಮಾರಿಜಾತ್ರೆಗೆ ನೀರಿನ ಸಮಸ್ಯೆ ಆಗದಂತೆ ವ್ಯವಸ್ಥೆ ಮಾಡಲು ಹೆಚ್.ಸಿ.ಯೋಗೇಶ್ ಮತ್ತು ತಂಡದ ಆಗ್ರಹ*

*ಮಾರಿಜಾತ್ರೆಗೆ ನೀರಿನ ಸಮಸ್ಯೆ ಆಗದಂತೆ ವ್ಯವಸ್ಥೆ ಮಾಡಲು ಹೆಚ್.ಸಿ.ಯೋಗೇಶ್ ಮತ್ತು ತಂಡದ ಆಗ್ರಹ* ಶಿವಮೊಗ್ಗದಲ್ಲಿ ಇದೇ ತಿಂಗಳು 12ರಿಂದ 16ರ ವರೆಗೆ 5 ದಿನಗಳ ಕಾಲ  ಪ್ರತಿ ಎರಡು ವರ್ಷಕ್ಕೊಮ್ಮೆ ಬರುವ ಗ್ರಾಮ ದೇವತೆ ಶ್ರೀ ಕೋಟೆ ಮಾರಿಕಾಂಬ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗುತ್ತಿದ್ದು, ಸಾರ್ವಜನಿಕರಿಗೆ ಈ ಸಂದರ್ಭದಲ್ಲಿ ಅನುಕೂಲವಾಗಲು 35 ವಾರ್ಡ್ ಗಳಲ್ಲೂ ನೀರಿನ ವ್ಯವಸ್ಥೆ ಮಾಡಬೇಕೆಂದು ಕಾಂಗ್ರೆಸ್ ವಿಧಾನಸಭಾ ಚುನಾವಣಾ ಅಭ್ಯರ್ಥಿಯಾಗಿದ್ದ, ಮಾಜಿ ಕಾರ್ಪೊರೇಟರ್ ಹೆಚ್.ಸಿ.ಯೋಗೇಶ್ ನೇತೃತ್ವದ ತಂಡ ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರಿಗೆ…

Read More

ಕುವೆಂಪು ವಿವಿಯ ನೂತನ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಅಧಿಕಾರ ಸ್ವೀಕಾರ*

*ಕುವೆಂಪು ವಿವಿಯ ನೂತನ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಅಧಿಕಾರ ಸ್ವೀಕಾರ* ಶಂಕರಘಟ್ಟ- ಕುವೆಂಪು ವಿವಿಯ ನೂತನ ಕುಲಪತಿಯಾಗಿ ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರ ಪ್ರಾಧ್ಯಾಪಕರಾಗಿದ್ದ ಡಾ. ಶರತ್ ಅನಂತಮೂರ್ತಿ ಅವರು ಗುರುವಾರ ಬೆಳಿಗ್ಗೆ ಅಧಿಕಾರ ಸ್ವೀಕಾರ ಮಾಡಿದ್ದಾರೆ. ರಾಜ್ಯಪಾಲ ಡಾ. ತಾವರ್ ಚಂದ್ ಗೆಹ್ಲೋಟ್ ಅವರು ಫೆಬ್ರವರಿ 05ರಂದು ಡಾ. ಶರತ್ ಅವರನ್ನು ಪೂರ್ಣಾವಧಿ ಕುಲಪತಿಯಾಗಿ ನಿಯುಕ್ತಿಗೊಳಿಸಿ ಆದೇಶ ಹೊರಡಿಸಿದ್ದರು. ಪ್ರೊ. ಶರತ್ ಅನಂತಮೂರ್ತಿ ಕರ್ನಾಟಕದ ಖ್ಯಾತ ಸಾಹಿತಿ ಹಾಗೂ ಜ್ಞಾನಪೀಠ ಪುರಸ್ಕೃತ ಡಾ. ಯು ಆರ್…

Read More

ಶ್ರೀ ಮಾರಿಕಾಂಬ ಜಾತ್ರೆ ಪ್ರಯುಕ್ತ* *ಮಾರ್ಚ್ 10 ರಂದು ರಾಜ್ಯಮಟ್ಟದ 7ನೇ ಭರ್ಜರಿ ಟಗರು ಕಾಳಗ…* *ಏನಿದರ ವಿಶೇಷ?*

*ಶ್ರೀ ಮಾರಿಕಾಂಬ ಜಾತ್ರೆ ಪ್ರಯುಕ್ತ* *ಮಾರ್ಚ್ 10 ರಂದು ರಾಜ್ಯಮಟ್ಟದ 7ನೇ ಭರ್ಜರಿ ಟಗರು ಕಾಳಗ…* *ಏನಿದರ ವಿಶೇಷ?* ಶಿವಮೊಗ್ಗದ ಪ್ರಸಿದ್ಧ ಕೋಟೆ ಶ್ರೀ ಮಾರಿಕಾಂಬ ಗೆಳೆಯರ ಬಳಗದ ವತಿಯಿಂದ 7ನೇ ಬಾರಿಗೆ ರಾಜ್ಯಮಟ್ಟದ ಭರ್ಜರಿ ಟಗರು ಕಾಳಗವನ್ನು ಮಾರ್ಚ್ 10 ರಂದು ಬೆಳಿಗ್ಗೆ 9 ರಿಂದ ಹಮ್ಮಿಕೊಳ್ಳಲಾಗಿದೆ. ಈ ಟಗರು ಕಾಳಗವು ನ್ಯಾಷನಲ್ ಕಾಲೇಜು ಆವರಣದಲ್ಲಿ ನಡೆಯಲಿದೆ. ಈ ಟಗರು ಕಾರ್ಯಕ್ರಮದ ವಿಶೇಷತೆ ಏನು? ಯಾರು ಉದ್ಘಾಟಿಸಲಿದ್ದಾರೆ? ಯಾರೆಲ್ಲ ಅತಿಥಿಗಳು ಪಾಲ್ಗೊಳ್ಳಲಿದ್ದಾರೆ? ಈ ಟಗರುಗಳ ಕಾಳಗ…

Read More

ಥ್ರೋ ಬಾಲ್ ಸ್ಪರ್ಧೆಯಲ್ಲಿ ಗೆದ್ದು ಬೀಗಿದ ನಿಸರ್ಗ ತಂಡದ ಮಹಿಳೆಯರು*

*ಥ್ರೋ ಬಾಲ್ ಸ್ಪರ್ಧೆಯಲ್ಲಿ ಗೆದ್ದು ಬೀಗಿದ ನಿಸರ್ಗ ತಂಡದ ಮಹಿಳೆಯರು* ಶಿವಮೊಗ್ಗ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಜಿಲ್ಲಾ ಪಂಚಾಯತ್ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತದ ಮಹಿಳಾ ಕ್ರೀಡಾಕೂಟದಲ್ಲಿ ಥ್ರೋಬಾಲ್ ಸ್ಪರ್ಧೆಯೂ ನಡೆಯಿತು. ಈ ಸ್ಪರ್ಧೆಯಲ್ಲಿ ಮಮತಾ, ರೇಖಾ,ಲತಾ,ಅಂಬಿಕಾ, ಚಂದ್ರಕಲಾ, ಸುಮಯ್ಯಾ, ಮಧು,ಕವಿತಾ, ಸುಮಾ, ಸವಿತಾರವರಿದ್ದ ನಿಸರ್ಗ ತಂಡ ಪ್ರಥಮ ಸ್ಥಾನ ಪಡೆದು ಗಮನ ಸೆಳೆಯಿತು.

Read More

ಶಿವ’ನ ಸಂಗಡ ‘ಆಪ್ತ’ಮಾತು;- ಸೃಜನಶೀಲ ಪತ್ರಕರ್ತ ಆರುಂಡಿ ಶ್ರೀನಿವಾಸ ಮೂರ್ತಿ ಶಿವನ ಸಂಗಡ ಆಪ್ತ ಮಾತುಕತೆ ಮಾಡಿದ್ದಾರೆ. ಆ ಮಾತುಕತೆಯ ಪೂರ್ಣ ಸಾರ ಇಲ್ಲಿದೆ…

ಸೃಜನಶೀಲ ಪತ್ರಕರ್ತ ಆರುಂಡಿ ಶ್ರೀನಿವಾಸ ಮೂರ್ತಿ ಶಿವನ ಸಂಗಡ ಆಪ್ತ ಮಾತುಕತೆ ಮಾಡಿದ್ದಾರೆ. ಆ ಮಾತುಕತೆಯ ಪೂರ್ಣ ಸಾರ ಇಲ್ಲಿದೆ. ಮಹಾ ಶಿವರಾತ್ರಿಯ ಈ ಸಂದರ್ಭದಲ್ಲಿ ಮನಸಿನ ಜಾಗರಣೆಯೂ ಮುಖ್ಯ ಎಂಬುದನ್ನು ಹೇಳುತ್ತಾ…ಈ ಲೇಖನ ಓದಿರೆಂಬ ಮನವಿ   ‘ಶಿವ’ನ ಸಂಗಡ ‘ಆಪ್ತ’ಮಾತು ಪ್ರಿಯ ಗೆಳೆಯ ‘ಶಿವ’ ನಿನ್ನೊಂದಿಗೆ ಮನಬಿಚ್ಚಿ ಮಾತಾಡ ಬೇಕು ಎಂದು ಬಹಳ ದಿನದಿಂದ ಅಂದುಕೊಂಡಿದ್ದೆ. ಆದರೆ, ನಿನಗೂ ಕೆಲಸ, ನನಗೂ ಒತ್ತಡ. ನಿನಗೆ ಇಡೀ ಲೋಕವನ್ನೇ ಕಾಯುವ ಕೆಲಸವಾದರೆ, ನನಗೆ ನನ್ನನ್ನೇ ಕಾಪಾಡಿಕೊಳ್ಳುವ…

Read More

.8-9 ಶಿವರಾತ್ರಿ ಪ್ರಯುಕ್ತ ಹರಕೆರೆ ಜಾತ್ರೆ; ವಾಹನಗಳ ಮಾರ್ಗ ಬದಲಾವಣೆ

ಮಾ.8-9 ಶಿವರಾತ್ರಿ ಪ್ರಯುಕ್ತ ಹರಕೆರೆ ಜಾತ್ರೆ; ವಾಹನಗಳ ಮಾರ್ಗ ಬದಲಾವಣೆ ಶಿವಮೊಗ್ಗ; .8 ಮತ್ತು 9 ರಂದು ಶಿವಮೊಗ್ಗ ನಗರದಲ್ಲಿ ಹರಕೆರೆ ಗ್ರಾಮದಲ್ಲಿ ಶ್ರೀ ರಾಮೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಶಿವರಾತ್ರಿ ಹಬ್ಬದ ನಿಮತ್ತ ಜಾತ್ರೆ ನಡೆಯಲಿದ್ದು, ಮಾ.08 ರ ಬೆಳಗ್ಗಿನ ಜಾವ 4 ರಿಂದ 09 ರ ಬೆಳಗಿನ ಜಾವದವರೆಗೆ ಒಂದು ಲಕ್ಷಕ್ಕೂ ಹೆಚ್ಚು ಭಕ್ತಾದಿಗಳು ಬಂದು ಹೋಗುವ ಕಾರಣ ಹಾಗೂ ಸೂಳೆಬೈಲು ಬೆಟ್ಟದ ಮಲ್ಲೇಶ್ವರ ದೇವಾಲಯಕ್ಕೂ ಭಕ್ತಾದಿಗಳು ಆಗಮಿಸುವುದರಿಂದ ಈ ಕೆಳಗಿನಂತೆ ತಾತ್ಕಾಲಿಕವಾಗಿ ವಾಹನಗಳಿಗೆ ಮಾರ್ಗ…

Read More

ಸಾಹಿತ್ಯದ ಸಮಕಾಲೀನತೆ ಕುರಿತ ವಿಚಾರ ಸಂಕಿರಣ ಕುವೆಂಪುಗೆ ತೃಣ ಮತ್ತು ಘನ, ಎರಡೂ ಮುಖ್ಯವಾಗಿತ್ತು: ಡಾ. ಬಸವರಾಜ ಕಲ್ಗುಡಿ

ಸಾಹಿತ್ಯದ ಸಮಕಾಲೀನತೆ ಕುರಿತ ವಿಚಾರ ಸಂಕಿರಣ ಕುವೆಂಪುಗೆ ತೃಣ ಮತ್ತು ಘನ, ಎರಡೂ ಮುಖ್ಯವಾಗಿತ್ತು: ಡಾ. ಬಸವರಾಜ ಕಲ್ಗುಡಿ ಶಂಕರಘಟ್ಟ,; ಭಾರತೀಯ ಸಂದರ್ಭದ ಬಹುದೊಡ್ಡ ಬರಹಗಾರ ಕುವೆಂಪು. ‌ ತಮ್ಮ ಕಾಲಘಟ್ಟದ ಎಲ್ಲ ಸಂಗತಿಗಳ ಸಂಕೀರ್ಣತೆಯನ್ನು ಅರಿತುಕೊಂಡು ಸಾಮಾಜಿಕ ಚರಿತ್ರೆಯನ್ನು ತಿದ್ದಲು ಪ್ರಯತ್ನಿಸಿದ ಅವರಿಗೆ ಅಸಾಮಾನ್ಯವಾದ ಘನವು, ಸಾಮಾನ್ಯವಾದ ತೃಣವು, ಎರಡೂ ಮುಖ್ಯವಾಗಿತ್ತು ಎಂದು ವಿಮರ್ಶಕ ಡಾ. ಬಸವರಾಜ ಕಲ್ಗುಡಿ ಅಭಿಪ್ರಾಯಪಟ್ಟರು. ಕುವೆಂಪು ವಿಶ್ವವಿದ್ಯಾಲಯದ ಕನ್ನಡ ಭಾರತಿ ವಿಭಾಗ ಕುವೆಂಪು ಸಾಹಿತ್ಯದ ಸಮಕಾಲೀನತೆ ಕುರಿತು ಆಯೋಜಿಸಿದ್ದ ವಿಚಾರ…

Read More

ಮಹಿಳಾ ದಿನಾಚರಣೆ ಪ್ರಯುಕ್ತ ಹೆಣ್ಣಿನ‌ ನೂರೆಂಟು ಸವಾಲುಗಳ ಬಗ್ಗೆ ಚರ್ಚಿಸಿದ್ದಾರೆ ಲೇಖಕಿ ವಿಮಲಾರುಣ ಪಡ್ಡಂಬೈಲು; ಹೆಣ್ಣು- ನೂರೆಂಟು ಸವಾಲುಗಳ ನಡುವೆ…

*ಹೆಣ್ಣು – ನೂರೆಂಟು ಸವಾಲುಗಳ ನಡುವೆ* ಮಾರ್ಚ್ 8 ಅಂತಾರಾಷ್ಟ್ರೀಯ ಮಹಿಳಾ ದಿನ. ಪ್ರಾದೇಶಿಕತೆಯ ಗಡಿಯನ್ನು ಮೀರಿ ವಿಶ್ವ ಮಟ್ಟದಲ್ಲಿ ಮಹಿಳೆಯ ಕುರಿತು ಚಿಂತನ ಮಂಥನಕೆ ಅಧಿಕೃತತೆ ಪಡೆದ ದಿನವಿದು. ಮಹಿಳೆ ಎಂದರೆ ಯಾರು..? ಹುಟ್ಟಿದ ಒಂದು ದಿನದ ಹೆಣ್ಣು ಮಗುವಿನಿಂದ ವೃದ್ಧೆಯರವರೆಗೂ ಹೆಣ್ಣು ಜೀವವನ್ನು ಮಹಿಳೆ ಎಂದು ಕರೆಯುತ್ತೇವೆ. ಒಂದು ಹೆಣ್ಣು ಮಗು ಜನಿಸಿತೆಂದರೆ ಅದರ ಪಾಲನೆ ಪೋಷಣೆ ರಕ್ಷಣೆ ಇಡೀ ಸಮಾಜದ ಜವಾಬ್ದಾರಿ. ಗಂಡು ಮತ್ತು ಹೆಣ್ಣು ಸೃಷ್ಟಿಯ ಎರಡು ಚಮತ್ಕಾರಗಳು. ಸಮಾಜದಲ್ಲಿ ಹೆಣ್ಣಿಗೆ…

Read More

ಮಾರ್ಚ್ 7 ರಂದು ಸಂಜೆ ಖ್ಯಾತ ಕತೆಗಾರ್ತಿ ಮತ್ತು ಲೇಖಕಿ ಬಿ.ಟಿ.ಜಾಹ್ನವಿಯವರ ಅಭಿನಂದನಾ ಸಮಾರಂಭ ಮತ್ತು ಪುಸ್ತಕ ಬಿಡುಗಡೆ

ಮಾರ್ಚ್ 7 ರಂದು ಸಂಜೆ ಖ್ಯಾತ ಕತೆಗಾರ್ತಿ ಮತ್ತು ಲೇಖಕಿ ಬಿ.ಟಿ.ಜಾಹ್ನವಿಯವರ ಅಭಿನಂದನಾ ಸಮಾರಂಭ ಮತ್ತು ಪುಸ್ತಕ ಬಿಡುಗಡೆ ತಳಸಮುದಾಯಗಳ ಅಲಕ್ಷಿತ ಅನುಭವಗಳನ್ನು ಮತ್ತು ಆ ಸಮುದಾಯಗಳ ಒಳಗಣ ಈ ಹೊತ್ತಿಗೂ ಕುದಿಯುತ್ತಲೇ ಇರುವ ಮಹಿಳೆಯ ಸಂಕಟ ಮತ್ತು ಬೆರಗುಗಳ ಸಂವೇದನೆಗಳನ್ನೆಲ್ಲ ಒಟ್ಟಿಗೆ ಕಡೆದು ಕನ್ನಡ ಸಾಹಿತ್ಯ ಲೋಕದ ಮುಂದೆ ಇರಿಸಿದ ಮೊದಲ ತಲೆಮಾರಿನ ಬರಹಗಾರ್ತಿ ಬಿ.ಟಿ. ಜಾಹ್ನವಿ. ಲಂಕೇಶರಂತಾ ಲಂಕೇಶರ ಸದಾ ನಿಗಿನಿಗಿ ಉರಿಯುವ ಕುಲುಮೆಯಲ್ಲೇ ಹದಗೊಂಡು ಅಪಾರ ಓದುಗರನ್ನು ತಲುಪಿದ ಜಾಹ್ನವಿಯವರ ಕತೆಗಳು ವಿಮರ್ಶಾರಾಜಕಾರಣದಲ್ಲಿ…

Read More