*ಶಿವಮೊಗ್ಗದ ಮಿಳಘಟ್ಟ ವಾರ್ಡಿನ ಆನಂದರಾವ್ ಬಡಾವಣೆಯಲ್ಲಿ ಭೀಕರ ದುರಂತ* *ಗಾಂಜಾ ವಿರುದ್ಧ ದೂರು ಕೊಡಲು ಹೊರಟ ಅಜ್ಜಿ ಮೇಲೆ ಸೈಜುಕಲ್ಲು ಎತ್ತಿಹಾಕಿ ಭೀಕರ ಕೊಲೆ* *ಗಾಂಜಾ ಗಿರಾಕಿ ಮೊಮ್ಮಗನಿಂದಲೇ ನಡೆಯಿತು ಭೀಕರ ಕೃತ್ಯ*

*ಶಿವಮೊಗ್ಗದ ಮಿಳಘಟ್ಟ ವಾರ್ಡಿನ ಆನಂದರಾವ್ ಬಡಾವಣೆಯಲ್ಲಿ ಭೀಕರ ದುರಂತ*

*ಗಾಂಜಾ ವಿರುದ್ಧ ದೂರು ಕೊಡಲು ಹೊರಟ ಅಜ್ಜಿ ಮೇಲೆ ಸೈಜುಕಲ್ಲು ಎತ್ತಿಹಾಕಿ ಭೀಕರ ಕೊಲೆ*

*ಗಾಂಜಾ ಗಿರಾಕಿ ಮೊಮ್ಮಗನಿಂದಲೇ ನಡೆಯಿತು ಭೀಕರ ಕೃತ್ಯ*

ತನ್ನ ಮೊಮ್ಮಗನ ಗಾಂಜಾ ಹಿಡಿಸಬೇಕೆಂದು ದೊಡ್ಡಪೇಟೆ ಪೊಲೀಸ್ ಠಾಣೆಗೆ ಹೊರಟಿದ್ದ ಅಜ್ಜಿಯ ಮೇಲೆ ಹಲ್ಲೆ ಮಾಡಿದ ಗಾಂಜಾ ಗಿರಾಕಿ ಯುವಕ ಆಕೆ ಕೆಳಕ್ಕೆ ಬೀಳುತ್ತಿದ್ದಂತೆಯೇ ತಲೆಯ ಮೇಲೆ ಸೈಜುಕಲ್ಲು ಹಾಕಿ ಭೀಕರವಾಗಿ ಕೊಂದಿರುವ ಘಟನೆ ಶಿವಮೊಗ್ಗದ ಮಿಳಘಟ್ಟ ವಾರ್ಡಿನ ಆನಂದರಾವ್ ಬಡಾವಣೆಯಲ್ಲಿ ಬುಧವಾರ ಸಂಜೆ ನಡೆದಿದೆ.

ಆನಂದರಾವ್ ಬಡಾವಣೆಯ ತಖ್ವಾ ಮಸೀದಿ ಬಳಿಯ ರಸ್ತೆಯಲ್ಲಿಯೇ ಈ ಭೀಕರ ಘಟನೆ ನಡೆದಿದೆ.

ತನ್ನ ಅಜ್ಜಿಯನ್ನು ಹೀಗೆ ಕೊಂದಾತ ಯುವಕ ಕಿಶೋರ್ ಎಂದು ಹೇಳಲಾಗಿದ್ದು, ಅಜ್ಜಿ ತನ್ನ ಮೊಮ್ಮಗನ ಗಾಂಜಾ ಚಾಳಿಯ ವಿರುದ್ಧ ಪದೇ ಪದೇ ಪೊಲೀಸರಿಗೆ ದೂರು ನೀಡುತ್ತಿದ್ದಳು. ಇವತ್ತು ಸಂಜೆ ಕೂಡ ದೂರು ನೀಡಲು ಹೊರಟಾಗ ಆಕೆಯ ಮೊಮ್ಮಗನೇ ಕೆಳಕ್ಕೆ ಬೀಳಿಸಿ ಸೈಜ್ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾನೆ.

ಈ ಹಿಂದೆಯೂ ಮಿಳಘಟ್ಟ ಬಡಾವಣೆಯಲ್ಲಿ ಗಾಂಜಾ ಹಾವಳಿ ಹೆಚ್ಚಿರುವ ಬಗ್ಗೆ, ಕ್ರಮ ಕೈಗೊಳ್ಳುವ ಬಗ್ಗೆ ಪೊಲೀಸ್ ಇಲಾಖೆಗೆ ಮಾಹಿತಿ ಮತ್ತು ವಿನಂತಿ ಸಲ್ಲಿಸಲಾಗಿತ್ತು. ಈಗ ಗಾಂಜಾ ಕಾರಣದಿಂದ ಜೀವವೊಂದು ಬಲಿಯಾಗಿದೆ.

ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.