ಆರೋಪಿ ಫರೂ ಕಾಲಿಗೆ ಗುಂಡು ಹೊಡೆದ ಪೊಲೀಸರು*

*ಆರೋಪಿ ಫರೂ ಕಾಲಿಗೆ ಗುಂಡು ಹೊಡೆದ ಪೊಲೀಸರು*

ವರದಿ; ಸಲೀಂ

ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಲೆಮರೆಸಿಕೊಂಡಿದ್ದ ಕೊಲೆಯತ್ನ ಆರೋಪಿಗೆ ಬಂಧಿಸಿ ಕರೆತರುವಾಗ ಪೊಲೀಸರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲೆತ್ನಿಸಿದಾಗ ಕಾಲಿಗೆ ಗುಂಡು ಹೊಡೆದ ಘಟನೆ ವರದಿಯಾಗಿದೆ.

ಕೊಲೆಯತ್ನ ಪ್ರಕರಣ ಮಾ.19ರಂದು ತುಂಗಾನಗರ ಠಾಣೆಯಲ್ಲಿ ದಾಖಲಾಗಿದ್ದು, ಪ್ರಕರಣದ ಆರೋಪಿ ಫರೂ ತಲೆಮರೆಸಿಕೊಂಡಿದ್ದ.

ಇವತ್ತು ಈತನನ್ನು ತುಂಗಾನಗರ ಠಾಣೆಯ ಪಿ ಎಸ್ ನಾಗಪ್ಪ ಮತ್ತು ತಂಡ ಫರೂನನ್ನು ಮಲ್ಲಿಗೇನಹಳ್ಳಿ ಬಳಿ ಬಂಧಿಸಿ ಕರೆತರುವಾಗ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ.

ಆಗ ಸ್ವ ರಕ್ಷಣೆಗಾಗಿ ಶಿವಮೊಗ್ಗ ಗ್ರಾಮಾಂತರ ಠಾಣೆಯ ಇನ್ಸ್ ಪೆಕ್ಟರ್ ಸತ್ಯನಾರಾಯಣ್ ರಿವಾಲ್ವರ್ ನಿಂದ ಎರಡು ಸುತ್ತಿನ ಗುಂಡು ಹಾರಿಸಿ ಫರೂಗೆ ಎಚ್ಚರಿಸಿದ್ದಾರೆ.

ಈ ಸಂದರ್ಭದಲ್ಲಿ ಆರೋಪಿ ಫರೂ ಕಾಲಿಗೆ ಗುಂಡು ತಗುಲಿದ್ದು, ಈತನನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಾಯಗೊಂಡ ಪೊಲೀಸ್ ನಾಗಪ್ಪರಿಗೂ ಚಿಕಿತ್ಸೆಗೆ ಒಳಪಡಿಸಲಾಗಿದೆ ಎಂದು ಎಸ್ ಪಿ ಮಿಥುನ್ ಕುಮಾರ್ ಹೇಳಿದ್ದಾರೆ.