ಹೊಸಮನೆ ವಾಹನಗಳ ಧ್ವಂಸ ಪ್ರಕರಣ;ಬಿಕ್ಲಾ ಗ್ಯಾಂಗ್ ಬೇಟೆಯಾಡಿದ ಪೊಲೀಸರು!ಆರೂ ಜನರೂ ಸಣ್ಣ ವಯಸ್ಸಿನ ಯುವಕರಿಂದ ಕೃತ್ಯ…

ಹೊಸಮನೆ ವಾಹನಗಳ ಧ್ವಂಸ ಪ್ರಕರಣ;

ಬಿಕ್ಲಾ ಗ್ಯಾಂಗ್ ಬೇಟೆಯಾಡಿದ ಪೊಲೀಸರು!

ಆರೂ ಜನರೂ ಸಣ್ಣ ವಯಸ್ಸಿನ ಯುವಕರಿಂದ ಕೃತ್ಯ…

ಶಿವಮೊಗ್ಗದ ಹೊಸಮನೆ ಬಡಾವಣೆಯ ಮೂರನೇ ತಿರುವಿನಲ್ಲಿ ವಾಹನಗಳ ಗಾಜುಗಳನ್ನು ಪುಡಿ ಪುಡಿ ಮಾಡಿ ಹಂಗಾಮ ಎಬ್ಬಿಸಿದ್ದ ಆರು ಜನ ಪುಂಡರ ಹೆಡೆಮುರಿಯನ್ನು ಪೊಲೀಸರು ಕಟ್ಟಿದ್ದು, ಸಾಕಷ್ಟು ಸದ್ದು ಮಾಡಿದ್ದ ಪ್ರಕರಣಕ್ಕೆ ಕೊನೆ ಮೊಳೆ ಹೊಡೆದಿದ್ದಾರೆ.

ಸಾರ್ವಜನಿಕರು ಮನೆಗಳ ಮುಂದೆ ನಿಲ್ಲಿಸಿದ್ದ ವಾಹನಗಳನ್ನು ಸಾಲು ಸಾಲಾಗಿ ಜಖಂಗೊಳಿಸಿ ಭಯದ ವಾತಾವರಣ ಸೃಷ್ಟಿಸಿದ್ದರ ಬಗ್ಗೆ ದೊಡ್ಡಪೇಟೆ ಪೊಲೀಸ್ ಠಾಣೆಗೆ ಸಾರ್ವಜನಿಕರೇ ದೂರು ನೀಡಿದ್ದರು.

ಹೊಸಮನೆಯ ಬಿ.ನೀರಜ್ @ ಬಿಕ್ಲಾ, ಕಾಮಾಕ್ಷಿ ಬೀದಿಯ ಎಸ್.ಮಣಿಕಂಠ @ ಮಾರ್ವಾಡಿ ಮಣಿ, ಎಸ್.ದರ್ಶನ್ @ ದಾಸ, ಇ.ಗಗನ್ @ ಕಪಾಲಿ ಬಿನ್ ಈಶ್ವರ, ವಿನೋಬನಗರ ಜಟ್ ಪಟ್ ನಗರದ ರಾಕೇಶ್ @ ಅಪ್ಪು, ಮೇದಾರ ಕೇರಿಯ ಶ್ರೀನಿವಾಸ @ ಅಪ್ರಿಲಾ ಸೀನ ಬಂಧನಕ್ಕೊಳಗಾದ ಪುಡಿರೌಡಿಗಳು.

ಹೊಸಮನೆಯ ಈ ಘಟನೆ ಸಾಕಷ್ಟು ಸದ್ದು ಮಾಡಿದ್ದರಿಂದ ಎಸ್ ಪಿ ಮಿಥುನ್ ಕುಮಾರ್ ರವರು ದೊಡ್ಡಪೇಟೆ ಪೊಲೀಸ್ ಠಾಣೆಯ ಸಿಪಿಐ ರವಿ ಪಾಟೀಲ್ ನೇತೃತ್ವದಲ್ಲಿ ತನಿಖಾ ತಂಡ ರಚಿಸಿದ್ದರು.

ಈ ಪ್ರಕರಣ ಮೇ 30ರ ರಾತ್ರಿ ನಡೆದಿತ್ತು.