ಶ್ರೀ ವಿಶ್ವಕರ್ಮ ಯಕ್ಷಾಭಿಮಾನಿ ವೇದಿಕೆಯಿಂದ ಏ.7 ರಂದು ನಡೆಯಲಿದೆ ಗೌರವ ಸನ್ಮಾನ ಮತ್ತು ಭಾವಯಾನ(ಸವಿಗಾನದ ಸಂಜೆ)

ಶ್ರೀ ವಿಶ್ವಕರ್ಮ ಯಕ್ಷಾಭಿಮಾನಿ ವೇದಿಕೆಯಿಂದ ಏ.7 ರಂದು ನಡೆಯಲಿದೆ ಗೌರವ ಸನ್ಮಾನ ಮತ್ತು ಭಾವಯಾನ(ಸವಿಗಾನದ ಸಂಜೆ)

ಶ್ರೀ  ವಿಶ್ವಕರ್ಮ ಯಕ್ಷಾಭಿಮಾನಿ ವೇದಿಕೆಯಿಂದ ಅರುಣ್ ಯೋಗಿರಾಜ್ ಮತ್ತು ರಾಜಗೋಪಾಲ್ ಆಚಾರ್ಯರವರಿಗೆ ಸನ್ಮಾನ ಹಾಗೂ ಭಾವಯಾನ(ಸವಿಗಾನದ ಸಂಜೆ) ಕಾರ್ಯಕ್ರಮವನ್ನು ಏ.7 ರಂದು ಸಂಜೆ 4 ಕ್ಕೆ ಕುವೆಂಪು ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಆಯೋಜಕರಾದ ಶಶಿ ಮಂಗಳಗಾರ್ ತಿಳಿಸಿದ್ದಾರೆ.

ರಾಜ್ಯೋತ್ಸವ ಪುರಸ್ಕೃತ ಹಿರಿಯ ಯಕ್ಷಗಾನ ಕಲಾವಿದ ಎಂ.ಕೆ.ರಮೇಶ್ ಆಚಾರ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಮತ್ತೋರ್ವ ರಾಜ್ಯೋತ್ಸವ ಪುರಸ್ಕೃತ ಪತ್ರಕರ್ತರಾದ ಎಸ್.ಚಂದ್ರಕಾಂತ್ ಅಧ್ಯಕ್ಷತೆ ವಹಿಸುವರು.
ಮುಖ್ಯ ಅತಿಥಿಗಳಾಗಿ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ, ವಕೀಲ ಮಧುಸೂದನ್, ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್ ಹಾಲಾಡಿ, ಛೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಎನ್.ಗೋಪಿನಾಥ್, ಪತ್ರಕರ್ತ ವೈ.ಕೆ.ಸೂರ್ಯನಾರಾಯಣ್, ಕರ್ನಾಟಕ ಸಂಘದ ಅಧ್ಯಕ್ಷ ಎಂ.ಎನ್.ಸುಂದರರಾಜ್, ನಿವೇದನ್ ನೆಂಪೆ, ಹರ್ಷ ಕಾಮತ್, ಸುರೇಶ್ ಕೆ.ಬಾಳೆಗುಂಡಿ ಆಗಮಿಸುವರು.

ಪರಮಪದ ಬೆಂಗಳೂರಿನ ರಾಮಚಂದ್ರ ಹಡಪದ್, ಆರ್.ಕೆ.ಸ್ಪರ್ಷ, ಶರಿಧೀ ಪಾಟೀಲ್ ಗಾಯನವಿದೆ. ರಾಘವೇಂದ್ರ ಕಾಂಚನ್ ನಿರೂಪಿಸಲಿದ್ದಾರೆ.

ವಾದ್ಯವೃಂದದಲ್ಲಿ ದೀಪಕ್ ಜಯಶೀಲನ್, ರಂಜನ್ ಬೇವುರಾ, ಶಿವಲಿಂಗ ರಾಜಾಪುರ್,ಜಲೀಲ್ ಪಾಷ, ಮುನ್ನಾ, ಕೃಷ್ಣ ಆನಂದ್ ಇರಲಿದ್ದಾರೆ.

ಪಾಸ್ ಹಾಗೂ ಇತರೆ ಮಾಹಿತಿಗಳಿಗಾಗಿ ಶಶಿ ಎಸ್.ಮಂಗಳಗಾರ್, ಸಚಿನ್, ಹರೀಶ್, ಸಂಜಯ್ ರವರನ್ನು ಸಂಪರ್ಕಿಸಬಹುದು
(ಮೊ-9844466499)