ಸುದ್ದಿಗೋಷ್ಟಿಯಲ್ಲಿ ಸಾಗರ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಗುಡುಗಿದ ಗುಡುಗುಗಳು…* ಶಿವಮೊಗ್ಗದ ಶಾಹಿ ಗಾರ್ಮೆಂಟ್ಸ್ ಕಾರ್ಖಾನೆಗೆ ಕಾನೂನುಬಾಹಿರವಾಗಿ ನೀಡಿದ 240 ಎಕರೆ ಜಮೀನಿನನಲ್ಲಿ 230 ಎಕರೆ ವಾಪಸ್ ಪಡೆಯಬೇಕು…ಇಲ್ಲದಿದ್ದರೆ ಉಗ್ರ ಹೋರಾಟ ಮಾಡಿ ಶಾಸಕ ಸ್ಥಾನಕ್ಕೆ ರಾಜಿನಾಮೆ ಕೊಡುವೆ… ಗೀತಾ ಶಿವರಾಜ್ ಕುಮಾರ್ ಹೈಲೀಡ್ ನಲ್ಲಿ ಗೆದ್ದೇ ಗೆಲ್ತಾರೆ ರಾಮೇಶ್ವರಂ ಕೆಫೆಗೆ ಬಾಂಬಿಟ್ಟವರು ಯಾರೇ ಇರಲಿ- ಗುಂಡಿಟ್ಟು ಕೊಲ್ಲಿ- ಜಾತಿ,ಪಕ್ಷ ನೋಡಲೇ ಬೇಡಿ- ಗುಂಡಿಡಿ…

*ಸುದ್ದಿಗೋಷ್ಟಿಯಲ್ಲಿ ಸಾಗರ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಗುಡುಗಿದ ಗುಡುಗುಗಳು…*

ಶಿವಮೊಗ್ಗದ ಶಾಹಿ ಗಾರ್ಮೆಂಟ್ಸ್ ಕಾರ್ಖಾನೆಗೆ ಕಾನೂನುಬಾಹಿರವಾಗಿ ನೀಡಿದ 240 ಎಕರೆ ಜಮೀನಿನನಲ್ಲಿ 230 ಎಕರೆ ವಾಪಸ್ ಪಡೆಯಬೇಕು…ಇಲ್ಲದಿದ್ದರೆ ಉಗ್ರ ಹೋರಾಟ ಮಾಡಿ ಶಾಸಕ ಸ್ಥಾನಕ್ಕೆ ರಾಜಿನಾಮೆ ಕೊಡುವೆ…

ಗೀತಾ ಶಿವರಾಜ್ ಕುಮಾರ್ ಹೈಲೀಡ್ ನಲ್ಲಿ ಗೆದ್ದೇ ಗೆಲ್ತಾರೆ

ರಾಮೇಶ್ವರಂ ಕೆಫೆಗೆ ಬಾಂಬಿಟ್ಟವರು ಯಾರೇ ಇರಲಿ- ಗುಂಡಿಟ್ಟು ಕೊಲ್ಲಿ- ಜಾತಿ,ಪಕ್ಷ ನೋಡಲೇ ಬೇಡಿ- ಗುಂಡಿಡಿ…

ಜಿದ್ದಾಜಿದ್ದಿ ಚುನಾವಣೆ ನಡೆಯುತ್ತಿದೆ. ನೂರಕ್ಕೆ ನೂರು ಗೀತಾ ಶಿವರಾಜ್ ಕುಮಾರ್ ಗೆಲ್ಲೋದು ಖಚಿತ.
ಕೆಜೆಪಿಗೆ ಹೋಗಿಲ್ಲ ಎಂಬ ಒಂದೇ ಕಾರಣಕ್ಕೆ ಈಶ್ವರಪ್ಪರನ್ನು ದೂರ ಇಡಲಾಗಿದೆ. ಹಿಂದುತ್ವದ ಬಿಜೆಪಿ ಕಟ್ಟಾ ಅಭಿಮಾನಿ ಈಶ್ವರಪ್ಪ ಈಗ ಅಪ್ಪ ಮಕ್ಕಳ ಹಿಂದೆ ಬಿದ್ದಿದ್ದಾರೆ.

ಮಧು ಬಂಗಾರಪ್ಪ ನೇತೃತ್ವದಲ್ಲಿ ಚುನಾವಣೆ ನಡೆಯುತ್ತಿದೆ. ಬೈಂದೂರಿನಲ್ಲೂ ಅತ್ಯಂತ ಹೆಚ್ಚಿನ ಬೆಂಬಲ ಇದೆ. ಹಿಂದೆ ರಾಘವೇಂದ್ರ 75 ಸಾವಿರ ಮತಗಳ ಲೀಡ್ ಪಡೆದಿದ್ದರು. ಈಗ ಕಾಂಗ್ರೆಸ್ ಆ ಲೀಡ್ ಪಡೆಯಲಿದೆ.

ಅಪ್ಪ ಮಕ್ಕಳು ಆಸ್ತಿ ಮಾಡಿದ್ದೇ ಸಾಧನೆ. 18 ವರ್ಷವಾದರೂ ಹೈವೇ ಸಂಪೂರ್ಣ ಆಗಿಲ್ಲ‌. ತಮ್ಮ ಮಾಲೀಕತ್ವದ ಕಾಲೇಜಿಗೆ ಬಂದು ಹೋಗಲಷ್ಟೇ ಹೈವೇ ಮಾಡಿದ್ದಾರೆ. ಬಸ್ ನಿಲ್ದಾಣಗಳ ನಿರ್ಮಾಣ ಬಿಟ್ಟರೆ ಮತ್ತೇನಾಗಿದೆ. ವಿಮಾನ ನಿಲ್ದಾಣ ನಿರ್ಮಾಣ ಮಾಡಿದ್ದು ಬಿಟ್ಟರೆ ಅದರ ಅಕ್ಕಪಕ್ಕದಲ್ಲೇ ಬೇನಾಮಿ ಆಸ್ತಿ ಮಾಡಿದ್ದಾರೆ.

ಸಾಯಿ ಗಾರ್ಮೆಂಟ್ಸ್ ಗೆ 240 ಎಕರೆ ಜಾಗ ನೀಡುವಲ್ಲಿ ಸಂಸದರ ಕೈವಾಡವಿದೆ. ಬೇನಾಮಿ ಶಂಕೆ ಇಲ್ಲೂ ಇದೆ.

ಬಂಗಾರಪ್ಪ ಕೊಟ್ಟ ಯೋಜನೆಗಳನ್ನು ಮುಂದಿಟ್ಟುಕೊಂಡು ನಾವೂ ಮತ ಕೇಳುತ್ತಿದ್ದೇವೆ. ಹೈಲೀಡ್ ನಮ್ಮದೇ.

ಜೂನ್ 4 ರಿಂದ ಕುಟುಂಬ ರಾಜಕಾರಣ ಕೊನೆಗೊಳಿಸ್ತೀವಿ ಅಂತ ಬಿಜೆಪಿಯ ಶಾಸಕ ಯತ್ನಾಳ್ ಹೇಳಿದ್ದಾರೆ. ಈಶ್ವರಪ್ಪ ಕೂಡ ಹೇಳುತ್ತಿದ್ದಾರೆ. ಅಂದರೆ, ರಾಘವೇಂದ್ರ ಸೇರಿದಂತೆ ಯಾರೂ ಬಿಜೆಪಿಯಿಂದ ಗೆಲ್ಲೋದಿಲ್ಲ.

ಕಾಂಗ್ರೆಸ್ ಅಧಿಕಾರದಲ್ಲಿದೆ. ನಮ್ಮ ಅಭ್ಯರ್ಥಿ ಗೆಲ್ಲೋದು ಖಚಿತ. ಕಾಂಗ್ರೆಸ್ ಪಕ್ಷ ಮೇಲುಗೈ ವಾತಾವರಣವಿದೆ. ಮೋದಿ, ಶಾ ಹಿಂದಿನ ಚುನಾವಣೆಯಲ್ಲೂ ಬಂದಿದ್ರು. ಬಂದ ಕಡೆ ಗೆದ್ದಿಲ್ಲ. ಈಗಲೂ ಗೆಲ್ಲೋಲ್ಲ.

ಏತ ನೀರಾವರಿ ಕಾಂಗ್ರೆಸ್ ನೀಡಿದ್ದು. ಸಂಸದರು ಸುಳ್ಳು ಹೇಳ್ತಿದ್ದಾರೆ. ಶಿಕಾರಿಪುರ ಬಿಟ್ಟರೆ ಮತ್ಯಾವ ತಾಲ್ಲೂಕಲ್ಲೂ ಸಾಧನೆ ಆಗಿಲ್ಲ. ಬಸ್ ನಿಲ್ದಾಣಗಳ ಸೃಷ್ಟಿ ಅಷ್ಟೇ. ಅದಕ್ಕೆ ಅವರು ಬಸ್ ಸ್ಟ್ಯಾಂಡ್ ರಾಘು.

ಕಲ್ಲು ಹೊಡೆದ ಕಡೆ ಯಡಿಯೂರಪ್ಪರ ಆಸ್ತಿ ಇದೆ. ಇಡಿ , ಐಟಿ ಕಣ್ಮುಚ್ಚಿ ಕುಳಿತಿದೆ. ಚುನಾವಣಾ ಬಾಂಡ್ ಹೆಸರಲ್ಲಿ ಗೋಮಾಂಸ ಮಾರಾಟಗಾರರಿಂದಲೂ ಹಣ ಪಡೆದಿದ್ದಾರೆ.

ಸಂಸತ್ ನಲ್ಲಿ ಧ್ವನಿ ಎತ್ತಲೇ ಇಲ್ಲ ಈ ಸಂಸದರು. ಪ್ರವಾಹ, ಬರ ಪರಿಹಾರದಲ್ಲಿ ಹಣ ಕೊಡಿಸಲಿಲ್ಲ. ಶರಾವತಿ ಮುಳುಗಡೆ ಸಂತ್ರಸ್ತರ ಮೇಲೆ ಚಪ್ಪಡಿ ಎಳೆದಿದ್ದಾರೆ ಸಂಸದರು, ಬಿಜೆಪಿ ಶಾಸಕರು.

ಕೋಟಾ ಶ್ರೀನಿವಾಸ ಪೂಜಾರಿ ಬಳಿ 62 ಕೋಟಿ ಮೌಲ್ಯದ ಆಸ್ತಿ ಇದೆ. ಅಂಥವರು ಗಂಜಿ ಕುಡಿದು ರಾಜಕಾರಣ ಮಾಡ್ತಾರಾ?

ಸ್ವಾಭಿಮಾನ ಎಂದು ಗೆದ್ದಿದ್ರು. ಈಗ ಅದನ್ನೇ ಬಿಟ್ಟು ತಮ್ಮ ರಾಜಕೀಯ ಜೀವನ ಹಾಳು ಮಾಡಿಕೊಂಡ್ರು…

ಸಾಗರದಲ್ಲಿ ಹೈ ಲೀಡ್ ಕೊಡ್ತೀವಿ. ಒಳ್ಳೇ ಹವಾ ಇದೆ…

ಗೀತಾ ಶಿವರಾಜ್ ಕುಮಾರ್ ಮನೆ ಇಲ್ಲೇ ಇದೆ. ಗೀತಕ್ಕನ ಮನೆಯೂ ಶಿವಮೊಗ್ಗದಲ್ಲೇ ಇದೆ. ಆ ಹರತಾಳು ಹಾಲಪ್ಪನಿಗೆ ನಾಯಿಗಿರೋ ನಿಯತ್ತೂ ಇಲ್ಲ. ಬಂಗಾರಪ್ಪನೆಯಲ್ಲಿ ದೊಡ್ಡ ನಾಯಿ ಇದ್ರೂ ಹೋಗ್ತಿದ್ದ…ಯಾರ ಮನೆ ಬೆಂಗಳೂರಲ್ಲಿಲ್ಲ…ಎಲ್ಲರದೂ ಇದೆ…

ಇವತ್ತಿನ ಸಮೀಕ್ಷೆ ಪ್ರಕಾರ, 20 ಸೀಟ್ ಮೇಲೆ ಗೆಲ್ತೀವಿ. ಮೋದಿ- ಶಾ ಅಲೆ ಇಲ್ಲವೇ ಇಲ್ಲ…

ಶಾಹಿ ಗಾರ್ಮೆಂಟ್ಸ್ ಕಾರ್ಖಾನೆಗೆ 240 ಎಕರೆ ಜಾಗ ನೀಡಿರುವ ಬಹುದೊಡ್ಡ ಹಗರಣ ಬಯಲಾಗಬೇಕು. ಇದರ ಹಿಂದೆ ಪ್ರಭಾವಿಗಳಿದ್ದಾರೆ. ಕೂಡಲೇ 10 ಎಕರೆ ಜಾಗವಷ್ಟೇ ಕೊಟ್ಟು ಉಳಿದ 230 ಎಕರೆ ಜಾಗವನ್ನು ಸರ್ಕಾರ ವಾಪಸ್ ಪಡೆಯಬೇಕು. ಇದಕ್ಕಾಗಿ ಒತ್ತಾಯಿಸಿ ತೀವ್ರ ಹೋರಾಟ ಮಾಡುವವನೇ. ಇಲ್ಲದಿದ್ದರೆ ಶಾಸಕ ಸ್ಥಾನಕ್ಕೆ ರಾಜಿನಾಮೆ ಕೊಡುವುದು ಖಂಡಿತ….

ಬೆಂಗಳೂರಿನ ರಾಮೇಶ್ವರ ಕೆಫೆ ಬಾಂಬ್ ಪ್ರಕರಣದಲ್ಲಿ ಯಾರೇ ಇದ್ದರೂ ಕೂಡಲೇ ಅವರನ್ನು ಗುಂಡು ಹೊಡೆಯಬೇಕು. ಅವರು ಮುಸ್ಲೀಮರೇ ಇರಲಿ, ಹಿಂದೂಗಳೇ ಇರಲಿ, ಕ್ರಿಸ್ತರೇ ಇರಲಿ…ಬಾಂಬ್ ಹಾಕುವ ಪಾಪಿಷ್ಠರನ್ನು ಗುಂಡು ಹೊಡೆದೇ ಬಿಡಬೇಕು….