ಬಿಜೆಪಿ ಹಿರಿಯ ಮುಖಂಡ- ಮಾಜಿ ಎಂ ಎಲ್ ಸಿ ಎಂ.ಬಿ.ಭಾನು ಪ್ರಕಾಶ್ ಹಠಾತ್ ನಿಧನ ಪ್ರತಿಭಟನೆ ವೇಳೆಯೇ ಹೃದಯಾಘಾತ…

ಪೆಟ್ರೋಲ್ ಬೆಲೆ ಏರಿಕೆಯ ವಿರುದ್ಧ ಬಿಜೆಪಿ ಮಾಡುತ್ತಿದ್ದ ಪ್ರತಿಭಟನೆಯಲ್ಲಿ ಬೆಳಿಗ್ಗೆಯಿಂದ ಪಾಲ್ಗೊಂಡಿದ್ದ ಮಾಜಿ ವಿಧಾನ ಪರಿಷತ್ ಸದಸ್ಯ ಎಂ.ಬಿ.ಭಾನುಪ್ರಕಾಶ್ ಹಠಾತ್ತನೆ ಕುಸಿದು ಬಿದ್ದು ನಿಧನರಾದರು.

ಕೂಡಲೇ ಗೋಪಿ ಸರ್ಕಲ್ಲಿನಿಂದ ಮ್ಯಾಕ್ಸ್ ಆಸ್ಪತ್ರೆಗೆ ಅವರನ್ನು ಸಾಗಿಸಲಾಯಿತಾದರೂ ಅವರು ಸಾವು ಕಂಡಿರುವುದನ್ನು ವೈದ್ಯರು ದೃಢ ಪಡಿಸಿದ್ದಾರೆ.
ಮೃತರು ಬಿಜೆಪಿಯ ಹಿರಿಯ ಮುಖಂಡರಲ್ಲಿ ಪ್ರಮುಖರಾಗಿದ್ದರು. ಅವರಿಗೆ 69 ವರ್ಷ ವಯಸ್ಸಾಗಿತ್ತು.
ಹೃದಯಾಘಾತದಿಂದ ಅವರು ಸಾವು ಕಂಡಿದ್ದಾರೆಂದು ವೈದ್ಯ ಮೂಲಗಳು ದೃಢ ಪಡಿಸಿವೆ. ಮೃತರ ಶರೀರವನ್ನು ಅವರ ಸ್ವ ಗ್ರಾಮವಾದ ಮತ್ತೂರಿಗೆ ಒಯ್ಯಲಾಗುತ್ತಿದೆ.ಅಲ್ಲಿಯೇ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ತಿಳಿದು ಬಂದಿದೆ.