ಔಷಧಿ ವ್ಯಾಪಾರಿ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ

ಔಷಧಿ ವ್ಯಾಪಾರಿ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ

ಶಿವಮೊಗ್ಗ ಜಿಲ್ಲಾ ಔಷಧಿ ವ್ಯಾಪಾರಿಗಳ ಸಂಘದ 2024-27 ಸಾಲಿನ ಪದಾಧಿಕಾರಿಗಳ ಸ್ಥಾನಕ್ಕೆ ಈ ಕೆಳಕಂಡವರು ಆಯ್ಕೆಯಾಗಿದ್ದಾರೆ ಎಂದು ಸಂಘದ ಖಜಾಂಚಿ ಕೆ.ಸಿ.ನಾಗರಾಜ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಂಘದ ಜಿಲ್ಲಾ ಅಧ್ಯಕ್ಷರಾಗಿ ಎಸ್. ಪಿ .ಮಧುಕರ್, ಉಪಾಧ್ಯಕ್ಷರಾಗಿ ದತ್ತಾತ್ರೇಯ ಎನ್. ಉಡುಪ, ಕಾರ್ಯದರ್ಶಿಯಾಗಿ ಈ.ಜಿ.ವೆಂಕಟೇಶ, ಸಹಕಾರ್ಯದರ್ಶಿಯಾಗಿ ಎಂ.ಎಲ್. ಮಂಜುನಾಥ ಮತ್ತು ಖಜಾಂಚಿಯಾಗಿ ಕೆ.ಸಿ.ನಾಗರಾಜ ಅವರು ಆಯ್ಕೆಯಾಗಿದ್ದಾರೆ.

ಚುನಾಯಿತ  ಸದಸ್ಯರಾಗಿ ಎಸ್.ಪಿ ಮಧುಕರ್, ವಿವೇಕಾನಂದ ನಾಯಕ್, ಕೆ.ಕುಮಾರ್, ಎಂ.ಎಲ್.ಮಂಜುನಾಥ್, ಎಸ್. ವಿನಾಯಕ್ ಸ್ವಾಮಿ ,  ಭವರಲಾಲ್. ಬಿ. ಜೈನ್, ಎಂ.ಮುತ್ತಣ್ಣ, ಎಸ್.ಚಂದ್ರಶೇಖರ್,  ಈ.ಜಿ. ವೆಂಕಟೇಶ್,  ಎನ್. ದತ್ತಾತ್ರೇಯ ಉಡುಪ ಹೊಸನಗರ, ಜೆ.ರಮೇಶ್ ಕುಮಾರ್, ಅನಿಲ್ ಕುಮಾರ್  ಜೈನ್, ಕೆ.ಸಿ ನಾಗರಾಜ್, ಕೆ.ಎಂ. ಜಗದೀಶ್, ಗಣೇಶ .ಎಂ. ಅಂಗಡಿ ಆಯ್ಕೆಯಾಗಿದ್ದಾರೆ.

ಸಹ ಸದಸ್ಯರಾಗಿ ಮೊಹಮ್ಮದ್ ಕಯುಮ್, ಎಂ.ಶಂಕರ್, ರುದ್ರ ಪ್ರಸಾದ್ ಹೆಚ್. ಬಿ, ನಟರಾಜ್.ಎಸ್, ಎಸ್.ವಿ ರುದ್ರೇ ಗೌಡ್ರು  ಶಿಕಾರಿಪುರ ಆಯ್ಕೆಯಾಗಿದ್ದಾರೆ.

ಖಾಯಂ ಆಹ್ವಾನಿತರಾಗಿ ಚಂದ್ರಶೇಖರ್ ಸಾಗರ, ಬಿ.ಒ.ಬಸವರಾಜ್, ಸದಾನಂದ  ಹತ್ವಾರ್,ಬಿ.ಎಸ್. ಪ್ರಕಾಶ್, ಗಜಾನನ ಹೆಗಡೆ, ಭವಾನಿ ರಾವ್ ಶಿಂದೆ, ಮುರುಳಿಧರ್ ಗೋಖಲೆ ಸೊರಬ, ಸತೀಶ್  ತೀರ್ಥಹಳ್ಳಿ, ವೈ.ಕೆ.ಮೂರ್ತಿ,  ಜಯರಾಜ್ ಆಯ್ಕೆಯಾಗಿದ್ದಾರೆ‌.

ಈ ಚುನಾವಣೆಗೆ ಬಂದು ಮತ ಚಲಾಯಿಸಿದ ಮತ್ತು ಆಯ್ಕೆಯಾಗಲು ಬೆಂಬಲಿಸಿದ ಜಿಲ್ಲೆಯ ಎಲ್ಲಾ ಔಷಧಿ ವ್ಯಾಪಾರಸ್ಥರಿಗೆ ನೂತನ ಜಿಲ್ಲಾಧ್ಯಕ್ಷ ಎಸ್. ಪಿ ಮಧುಕರ್  ಧನ್ಯವಾದ ತಿಳಿಸಿದ್ದಾರೆ.