ಗಂಡ ಮಾರುತಿ ಜೊತೆ ಸೇರಿ ಜೀವ ಬೆದರಿಕೆ ಹಾಕುತ್ತಿದ್ದಾರಾ ಡಿಎಸ್ ಎಸ್ ಸಂಘದ ಅರುಣ್ ಕುಮಾರ್, ನಿದಿಗೆ ನಾಗರಾಜ್?!ಇವರ ಮೇಲೆ ದಾಖಲಾಗಿರುವ ಎಫ್ ಐ ಆರ್ ನಲ್ಲೇನಿದೆ?ಇಲ್ಲಿದೆ ಫುಲ್ ಡೀಟೈಲ್ಸ್…

ಗಂಡ ಮಾರುತಿ ಜೊತೆ ಸೇರಿ ಜೀವ ಬೆದರಿಕೆ ಹಾಕುತ್ತಿದ್ದಾರಾ ಡಿಎಸ್ ಎಸ್ ಸಂಘದ ಅರುಣ್ ಕುಮಾರ್, ನಿದಿಗೆ ನಾಗರಾಜ್?!

ಇವರ ಮೇಲೆ ದಾಖಲಾಗಿರುವ ಎಫ್ ಐ ಆರ್ ನಲ್ಲೇನಿದೆ?

ಇಲ್ಲಿದೆ ಫುಲ್ ಡೀಟೈಲ್ಸ್…

ತನ್ನ ಗಂಡ ಮಾರುತಿ, ಡಿ ಎಸ್ ಎಸ್ ಸಂಘದ ಅರುಣ್ ಕುಮಾರ್ ಮತ್ತು ನಿದಿಗೆ ನಾಗರಾಜ್ ಅವಾಚ್ಯವಾಗಿ ಬೈದು, ಕೊಲೆ ಬೆದರಿಕೆ ಹಾಕಿದ್ದಾರೆ. ಮತ್ತೊಮ್ಮೆ ಪೊಲೀಸರಿಗೆ ದೂರು ನೀಡಿದರೆ ಜೀವ ಸಹಿತ ಬಿಡುವುದಿಲ್ಲ ಎಂದು ಶಿವಮೊಗ್ಗದ ಜಯನಗರ ಪೊಲೀಸ್ ಠಾಣೆಗೆ ಮಹಿಳೆಯೊಬ್ಬರು ಲಿಖಿತ ದೂರು ಸಲ್ಲಿಸಿದ್ದು, ಪೊಲೀಸರು ಮೂವರು ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ 2023, ಯು/ಎಸ್- 126(2), 352,351(3),3(5) ರಂತೆ ಎಫ್ ಐ ಆರ್ ದಾಖಲಿಸಿಕೊಂಡಿದ್ದಾರೆ.

ಹೊಸಮನೆಯ ಹೆಚ್.ಮಾರುತಿ ಜೊತೆ ಸಿ.ಗೌರಿ ಎಂಬುವವರು ಪ್ರೀತಿಸಿ 2018ರಲ್ಲಿಯೇ ವಿವಾಹವಾಗಿದ್ದರು. ನಂತರ ಜಗಳವಾಗಿ ಏಳೆಂಟು ತಿಂಗಳುಗಳಲ್ಲೇ ದಾಂಪತ್ಯ ಬಿರುಕು ಬಿಟ್ಟಿತ್ತು. 2020 ರಲ್ಲಿಯೇ ಮಹಿಳೆ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆನಂತರ, ಗಂಡ ಮಾರುತಿಯ ಜೊತೆ ನಿದಿಗೆ ನಾಗರಾಜಪ್ಪ, ಅರುಣ ಕುಮಾರ, ಶ್ವೇತಾ ಬಸವರಾಜಪ್ಪ, ಹನುಮಂತರಾಜು ತೊಂದರೆ ನೀಡುತ್ತಿದ್ದಾರೆಂದು 2023 ರ ಫೆಬ್ರವರಿಯಲ್ಲಿ ನ್ಯಾಯಾಲಯದಲ್ಲಿ ಮಹಿಳೆ ಪಿಸಿಆರ್ ದಾಖಲಿಸಿದ್ದರು. ಅದು ದೊಡ್ಡಪೇಟೆ ಠಾಣೆಯಲ್ಲಿ ಎಫ್ ಐ ಆರ್ ಆಗಿತ್ತು.

ತದನಂತರ, ಮಹಿಳೆಗೆ ರಾಘವೇಂದ್ರ ಸ್ವಾಮಿ ಮಠದ ಬಳಿ 2024ರ ಏಪ್ರಿಲ್ 6 ರಂದು ಮಾತುಕತೆಗೆಂದು ಕರೆಸಿಕೊಂಡು ಅವಾಚ್ಯ ಶಬ್ದಗಳಿಂದ ಬೈದರು.ಬೆದರಿಕೆ ಹಾಕಿದರು. ನಂತರ, ಅರುಣ್ ಕುಮಾರ್ ಮೊಬೈಲಿನಿಂದ ಕರೆ ಮಾಡಿ ಹೆದರಿಸಿದ್ದನು. ಈ ಬಗ್ಗೆ ಮಹಿಳೆ ಗೌರಿ ಮಹಿಳಾ ಆಯೋಗಕ್ಕೆ ದೂರು ನೀಡಿದ್ದು, ಇದರ ವಿಚಾರಣೆಗೆ ಹೋಗಿ ಮನೆಗೆ ವಾಪಸ್ ಆಗುವಾಗ ಮತ್ತೆ ಜೀವ ಬೆದರಿಕೆಯನ್ನು ಗಂಡ ಮಾರುತಿ ಹಾಕಿದ್ದಾನೆ. ಕೊಲೆ ಮಾಡುತ್ತೇನೆಂದು ಹೇಳಿದ್ದಾನೆ. ಕೂಡಲೇ ಅಲ್ಲಿಂದ ಭಯದಿಂದ ಓಡಿ ಹೋದ ಗೌರಿಯವರು ಮತ್ತೆ ಜಯನಗರ ಪೊಲೀಸ್ ಠಾಣೆಗೆ ಅಕ್ಟೋಬರ್ 2 ರ ಗಾಂಧಿ ಜಯಂತಿಯ ದಿನವೇ ಲಿಖಿತ ದೂರು ನೀಡಿದ್ದಾರೆ.
ಪೊಲೀಸರು ಕಾನೂನು ಕ್ರಮ ಮುಂದುವರೆಸಿದ್ದಾರೆ.