Headlines

ವಲಯ ಚಾಂಪಿಯನ್ ಆಗಿ ರೋಟರಿ ಕ್ಲಬ್ ಮಿಡ್ ಟೌನ್ – ಹರ್ಷ ಕಾಮತ್

*ವಲಯ ಚಾಂಪಿಯನ್ ಆಗಿ ರೋಟರಿ ಕ್ಲಬ್ ಮಿಡ್ ಟೌನ್ – ಹರ್ಷ ಕಾಮತ್* ಶಿವಮೊಗ್ಗದ ಸುವರ್ಣ ಸಂಸ್ಕೃತಿ ಭವನದಲ್ಲಿ ನಡೆದ ರೋಟರಿ ವಲಯ–10 ಸಾಂಸ್ಕೃತಿಕ ಸ್ಪರ್ಧೆಯಲ್ಲಿ, ರೋಟರಿ ಕ್ಲಬ್ ಮಿಡ್ ಟೌನ್ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಒಟ್ಟು ಎಂಟು ಪ್ರಶಸ್ತಿಗಳನ್ನು ಗಳಿಸಿ, ಒವರ್ ಆಲ್ ಚಾಂಪಿಯನ್‌ಶಿಪ್ ಕಿರೀಟವನ್ನು ತನ್ನದಾಗಿಸಿಕೊಂಡಿದೆ ಎಂದು ಕ್ಲಬ್ ಅಧ್ಯಕ್ಷರಾದ ರೋಟರಿಯನ್ ಹರ್ಷ ಭಾಸ್ಕರ್ ಕಾಮತ್ ಹೇಳಿದರು. ಈ ಸಾಧನೆಯ ಬಗ್ಗೆ ಹರ್ಷ ವ್ಯಕ್ತಪಡಿಸುತ್ತಾ ಹೇಳಿದ ಅವರು, > “ಅಧ್ಯಕ್ಷ ಸ್ಥಾನ ವಹಿಸಿಕೊಂಡು…

Read More

ಮಾಜಿ ಸಚಿವ ಎಚ್.ವೈ.ಮೇಟಿ ನಿಧನ*

*ಮಾಜಿ ಸಚಿವ ಎಚ್.ವೈ.ಮೇಟಿ ನಿಧನ* ಅನಾರೋಗ್ಯದಿಂದ ಬಳಲುತ್ತಿದ್ದ ಕಾಂಗ್ರೆಸ್​​ ಹಿರಿಯ ಶಾಸಕ ಹೆಚ್​.ವೈ.ಮೇಟಿ (79) ವಿಧಿವಶರಾಗಿದ್ದಾರೆ. ಬಾಗಲಕೋಟೆ ಕಾಂಗ್ರೆಸ್​ ಶಾಸಕರಾಗಿದ್ದ ಇವರು ಚಿಕಿತ್ಸೆ ಫಲಕಾರಿಯಾಗದೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇತ್ತೀಚೆಗಷ್ಟೇ ಹೆಚ್​.ವೈ. ಮೇಟಿ ಅವರನ್ನ ಖಾಸಗಿ ಆಸ್ಪತ್ರೆಯಲ್ಲಿ ಸಿಎಂ ಸಿದ್ದರಾಮಯ್ಯ ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದರು. ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ H​.Y. ಮೇಟಿ, ಜಿಲ್ಲೆಯ ತಿಮ್ಮಾಪುರದಲ್ಲಿ 1946 ಅಕ್ಟೋಬರ್ 9ರಂದು ಜನಿಸಿದ್ದರು. ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ, ಬಾಗಲಕೋಟೆ ಡಿಸಿಸಿ ಬ್ಯಾಂಕ್ ನಿರ್ದೇಶಕರೂ ಆಗಿದ್ದ…

Read More

ಶಿವಮೊಗ್ಗಕ್ಕೆ ಭೇಟಿ ನೀಡಿದ್ದ ರಾಜ್ಯ ಪೊಲೀಸ್ ಪಡೆಯ ಮುಖ್ಯಸ್ಥರು* *ಪೊಲೀಸ್ ಮಹಾ ನಿರ್ದೇಶಕ ಎಂ.ಎ.ಸಲೀಂ ನೀಡಿದ ಆ 13 ಸಲಹೆ- ಸೂಚನೆಗಳೇನು?*

*ಶಿವಮೊಗ್ಗಕ್ಕೆ ಭೇಟಿ ನೀಡಿದ್ದ ರಾಜ್ಯ ಪೊಲೀಸ್ ಪಡೆಯ ಮುಖ್ಯಸ್ಥರು* *ಪೊಲೀಸ್ ಮಹಾ ನಿರ್ದೇಶಕ ಎಂ.ಎ.ಸಲೀಂ ನೀಡಿದ ಆ 13 ಸಲಹೆ- ಸೂಚನೆಗಳೇನು?* ಕರ್ನಾಟಕ ರಾಜ್ಯ ಪೊಲೀಸ್ ಪಡೆಯ ಮುಖ್ಯಸ್ಥರೂ ಮಹಾ ನಿರ್ದೇಶಕರೂ ಮತ್ತು ಪೊಲೀಸ್ ಮಹಾ ನಿರೀಕ್ಷಕರೂ ಆದ ಎಂ.ಎ.ಸಲೀಂರವರು ಶಿವಮೊಗ್ಗ ಜಿಲ್ಲೆಗೆ ಭೇಟಿ ನೀಡಿ ಶಿವಮೊಗ್ಗ ನಗರದ ಡಿ ಎ ಆರ್ ಪೊಲೀಸ್ ಸಭಾಂಗಣದ ಆವರಣದಲ್ಲಿ ಪೊಲೀಸ್ ಗೌರವ ವಂದನೆಗಳನ್ನು ಸ್ವೀಕರಿಸಿದರು. ಆ ನಂತರ ಪೊಲೀಸ್ ಸಭಾಂಗಣದಲ್ಲಿ ಶಿವಮೊಗ್ಗ ಜಿಲ್ಲೆಯ ಪೋಲಿಸ್ ನಿರೀಕ್ಷಕರ ಮೇಲ್ಪಟ್ಟ ಅಧಿಕಾರಿಗಳಿಗೆ…

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ಕನ್ನಡಿ ಕಂಡು ಹಿಡಿದ ಮನುಷ್ಯನಿಗೆ ಗೊತ್ತಿತ್ತು ಅವನು ಸತ್ಯ ಎದುರಿಸಲಾರ ಎಂದು! 2. ಹೃದಯದ ಹೊಸ್ತಿಲ ಬಳಿ ಹೀಗೇ ಬರುತ್ತಿರು ಚೆಂದವಿರುತ್ತೆ ಏಕಾಂಗಿಯಾಗಿದ್ದಾಗ ನಿನ್ನ ಬರುವಿಕೆ! – *ಶಿ.ಜು.ಪಾಶ* 8050112067 (4/11/2025)

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ನೆನಪುಗಳಿಗೆ ವಿಶೇಷ ತಾಕತ್ತಿದೆ ಹೃದಯವೇ… ನಿನ್ನೆಯನ್ನು ಜೀವಂತಗೊಳಿಸಿ ಇವತ್ತಿನಲ್ಲಿಡುವುದು! 2. ಅಂದುಕೊಂಡಿದ್ದೆ; ದುಃಖದ ದೌಲತ್ತಿಂದ ನಾನೊಬ್ಬನೇ ಶ್ರೀಮಂತ ಎಂದು… ಆದರಿಲ್ಲಿ ಕಂಡವರೆಲ್ಲ ಅಗಾಧ ಶ್ರೀಮಂತರೇ! 3. ಪ್ರೇಮಕ್ಕೆ ಕಣ್ಣಿಲ್ಲ ಎಂದಿದ್ದರು ಯಾರೋ… ಹೃದಯದ ದಾರಿ ತೋರಿಸಿದ್ಯಾರೋ? – *ಶಿ.ಜು.ಪಾಶ* 8050112067 (3/11/2025)

Read More

*ಹಾಪ್ ಕಾಮ್ಸ್ ಅಧ್ಯಕ್ಷರಾಗಿ ಆರ್.ವಿಜಯ ಕುಮಾರ್(ದನಿ)* *ಉಪಾಧ್ಯಕ್ಷರಾಗಿ ಉಂಬಳೇಬೈಲ್ ಚಂದ್ರೇಗೌಡ(ಪುಟ್ಟಣ್ಣ) ಅವಿರೋಧವಾಗಿ ಆಯ್ಕೆ*

*ಹಾಪ್ ಕಾಮ್ಸ್ ಅಧ್ಯಕ್ಷರಾಗಿ ಆರ್.ವಿಜಯ ಕುಮಾರ್(ದನಿ)* *ಉಪಾಧ್ಯಕ್ಷರಾಗಿ ಉಂಬಳೇಬೈಲ್ ಚಂದ್ರೇಗೌಡ(ಪುಟ್ಟಣ್ಣ) ಅವಿರೋಧವಾಗಿ ಆಯ್ಕೆ* ಹಾಪ್ ಕಾಮ್ಸ್ ಅಧ್ಯಕ್ಷರಾಗಿ ಆರ್.ವಿಜಯ ಕುಮಾರ್(ದನಿ) ಉಪಾಧ್ಯಕ್ಷರಾಗಿ ಉಂಬಳೇಬೈಲ್ ಚಂದ್ರೇಗೌಡ(ಪುಟ್ಟಣ್ಣ) ಅವಿರೋಧವಾಗಿ ಆಯ್ಕೆಯಾದರು. ಸಹಕಾರ ಭೀಷ್ಮ ಆರ್.ಎಂ.ಮಂಜುನಾಥ ಗೌಡರ ಮಾರ್ಗದರ್ಶನದಲ್ಲಿ ಈ ಚುನಾವಣೆ ನಡೆದಿದ್ದು, ಅಧ್ಯಕ್ಷ ಸ್ಥಾನಕ್ಕೆ ವಿಜಯ್ ಕುಮಾರ್, ಉಪಾಧ್ಯಕ್ಷ ಸ್ಥಾನಕ್ಕೆ ಉಂಬಳೇಬೈಲು ಚಂದ್ರೇಗೌಡ ಅರ್ಜಿ ಸಲ್ಲಿಸಿದ್ದರು. ಸ್ಪರ್ಧೆಗೆ ಬೇರೆ ಅರ್ಜಿಗಳು ಬರದೇ ಈ ಇಬ್ಬರು ಅವಿರೋಧವಾಗಿ ಆಯ್ಕೆಯಾದರು. ಹಾಪ್ ಕಾಮ್ಸ್ ನಲ್ಲಿ ಒಟ್ಟು 17 ಮತಗಳಿದ್ದು, ಇದರಲ್ಲಿ 15 ಮತಗಳು…

Read More

ಹೌಸಿಂಗ್ ಸೊಸೈಟಿಯಿಂದ ಎಸ್.ಕೆ.ಮರಿಯಪ್ಪ- ನರಸಿಂಹ ಗಂಧದಮನೆಯವರಿಗೆ ಗೌರವ ಸಮರ್ಪಣೆ

ಹೌಸಿಂಗ್ ಸೊಸೈಟಿಯಿಂದ ಎಸ್.ಕೆ.ಮರಿಯಪ್ಪ- ನರಸಿಂಹ ಗಂಧದಮನೆಯವರಿಗೆ ಗೌರವ ಸಮರ್ಪಣೆ ಇಂದು ಶಿವಮೊಗ್ಗ ಹೌಸಿಂಗ್ ಕೋ ಆಪರೇಟಿವ್ ಸೊಸೈಟಿಯಿಂದ ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕರ ಚುನಾವಣೆಯಲ್ಲಿ ಅತಿ ಹೆಚ್ಚು ಮತ ಪಡೆದು ಆಯ್ಕೆಯಾದ ಹಿರಿಯ ಸಹಕಾರಿಗಳಾದ ಎಸ್ ಕೆ ಮರಿಯಪ್ಪನವರು ಹಾಗೂ ನರಸಿಂಹ ಗಂಧದಮನೆ ಯವರಿಗೆ  ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಹೌಸಿಂಗ್ ಕೋ ಆಪರೇಟಿವ್ ಸೊಸೈಟಿಯ ನಿರ್ದೇಶಕರು ಹಿರಿಯ ಸಹಕಾರಿಗಳಾದ ಎನ್ ಉಮಾಪತಿ. ಉಮಾ ಶಂಕರ್ ಉಪಾಧ್ಯ. ಎಸ್‌.ಬಿ. ಶೇಷಾದ್ರಿ, ಕೆ ರಂಗನಾಥ್, ಪ್ರಕಾಶ್, ನಾಗರಾಜ್, ಕುಮಾರ್. ರಾಘವೇಂದ್ರ….

Read More

ಕಾಂಗ್ರೆಸ್ ಕಚೇರಿಯಲ್ಲಿ ಇಂದಿರಾ ಪುಣ್ಯ ಸ್ಮರಣೆ

 ಕಾಂಗ್ರೆಸ್ ಕಚೇರಿಯಲ್ಲಿ ಇಂದಿರಾ ಪುಣ್ಯ ಸ್ಮರಣೆ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ರಾಷ್ಟ್ರದ ಮೊದಲ ಮಹಿಳಾ ಪ್ರಧಾನಮಂತ್ರಿಗಳಾಗಿದ್ದ ಶ್ರೀಮತಿ ಇಂದಿರಾಗಾಂಧಿಯವರ ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು . ಈ ಕಾರ್ಯಕ್ರಮದಲ್ಲಿ ಇಂದಿರಾಗಾಂಧಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಆರ್ ಪ್ರಸನ್ನ ಕುಮಾರ್, ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕಲೀಮ್ ಪಾಷಾ,  ಅನೇಕ ಪಕ್ಷದ ಮುಖಂಡರು, ಕಾರ್ಯಕರ್ತರು, ಮಹಿಳಾ ಮುಖಂಡರು ಹಾಜರಿದ್ದರು.

Read More

ಶಿವಮೊಗ್ಗದ ಕೋಣಂದೂರು ಲಿಂಗಪ್ಪ, ಪ್ರೊ.ರಾಜೇಂದ್ರ ಚೆನ್ನಿ, ಟಾಕಪ್ಪ ಕಣ್ಣೂರರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ*

*ಶಿವಮೊಗ್ಗದ ಕೋಣಂದೂರು ಲಿಂಗಪ್ಪ, ಪ್ರೊ.ರಾಜೇಂದ್ರ ಚೆನ್ನಿ, ಟಾಕಪ್ಪ ಕಣ್ಣೂರರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ* ರಾಜ್ಯ ಸರಕಾರವು 2025ನೇ ಸಾಲಿನ ‘ಕನ್ನಡ ರಾಜ್ಯೋತ್ಸವ ಪ್ರಶಸ್ತಿ’ಯನ್ನು ಪ್ರಕಟಿಸಿದ್ದು, ನಟ ಪ್ರಕಾಶ್‌ ರಾಜ್‌, ಹಿರಿಯ ಪತ್ರಕರ್ತ ಬಿ.ಎಂ.ಹನೀಫ್‌, ರಾಜೇಂದ್ರ ಚೆನ್ನಿ, ಲೇಖಕ ರಹಮತ್‌ ತರೀಕೆರೆ, ಅನಿವಾಸಿ ಭಾರತೀಯ ಉದ್ಯಮಿ ಝಕರಿಯ ಜೋಕಟ್ಟೆ ಸೇರಿದಂತೆ ವಿವಿಧ ಕ್ಷೇತ್ರಗಳ 70 ಮಂದಿ ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಶಿವಮೊಗ್ಗದ ಹೆಸರಾಂತ ವಿಮರ್ಶಕ, ಚಿಂತಕರಾದ ಡಾ. ರಾಜೇಂದ್ರ ಚೆನ್ನಿ, ಮಾಜಿ ಶಾಸಕ ಕೊಣಂದೂರು ಲಿಂಗಪ್ಪ,…

Read More

ಕನ್ನಡ ರಾಜ್ಯೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ 1700 ಶಾಲಾ ಮಕ್ಕಳು ಪಾಲ್ಗೊಳ್ಳಲಿದ್ದಾರೆ: ಸಚಿವ ಮಧು ಬಂಗಾರಪ್ಪ

ಕನ್ನಡ ರಾಜ್ಯೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ 1700 ಶಾಲಾ ಮಕ್ಕಳು ಪಾಲ್ಗೊಳ್ಳಲಿದ್ದಾರೆ: ಸಚಿವ ಮಧು ಬಂಗಾರಪ್ಪ ಬೆಂಗಳೂರು, ಅಕ್ಟೋಬರ್ 30: ಕನ್ನಡ ರಾಜ್ಯೋತ್ಸವದ ಪೂರ್ವಭಾವಿ ಸಿದ್ಧತೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಾದ ಶ್ರೀ ಮಧು ಬಂಗಾರಪ್ಪ ಅವರು, ಈ ಬಾರಿಯ ಕನ್ನಡ ರಾಜ್ಯೋತ್ಸವವು ವಿಶೇಷವಾಗಲಿರುವುದಾಗಿ ತಿಳಿಸಿದ್ದಾರೆ. ಶ್ರೀ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ನಡೆಯಲಿರುವ ಕನ್ನಡ ರಾಜ್ಯೋತ್ಸವ ಸಮಾರಂಭದ ಸಿದ್ಧತೆಗಳನ್ನು ಸಚಿವರು ಪೊಲೀಸ್ ಹಾಗೂ ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಪರಿಶೀಲಿಸಿದರು. “ಶಾಲಾ ಶಿಕ್ಷಣ…

Read More