ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆ;* *ಮೇ.16 ರಂದು ನಾಮಪತ್ರ ಸಲ್ಲಿಸಲಿದ್ದಾರೆ ಆಯನೂರು ಮಂಜುನಾಥ್*

*ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆ;* *ಮೇ.16 ರಂದು ನಾಮಪತ್ರ ಸಲ್ಲಿಸಲಿದ್ದಾರೆ ಆಯನೂರು ಮಂಜುನಾಥ್* ವಿಧಾನ ಪರಿಷತ್ ನೈರುತ್ಯ ಪದವೀಧರರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಮೇ.16 ರಂದು ಬೆಳಿಗ್ಗೆ 11 ಕ್ಕೆ ಮೈಸೂರಿನ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ನಾಮಪತ್ರ ಸಲ್ಲಿಸುತ್ತಿರುವುದಾಗಿ ಅಭ್ಯರ್ಥಿ ಆಯನೂರು ಮಂಜುನಾಥ್ ತಿಳಿಸಿದ್ದಾರೆ. ಬಹಳಷ್ಟು ಕಾಂಗ್ರೆಸ್ ಮುಖಂಡರೊಂದಿಗೆ ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಆಗಮಿಸಿ ಹಾರೈಸಲಿದ್ದಾರೆ ಎಂದು ಅವರು ಹೇಳಿದ್ದಾರೆ. ಈ ಚುನಾವಣೆಯು ಜೂನ್ 3 ರಂದು ನಡೆಯಲಿದೆ.

Read More

ಆರ್ ಟಿ ವಿಠ್ಠಲಮೂರ್ತಿ ರಾಜಕೀಯ ವಿಶ್ಲೇಷಣೆ; ಬಿಜೆಪಿಯ ಸಂತೋಷಕ್ಕೆ ಮುಸುಕು ಹಾಕಿದರು/ಕಾಂಗ್ರೆಸ್ಸಿಗೆ ಹದಿನೇಳು ನಿಕ್ಕಿಯಂತೆ/ಸಿದ್ರಾಮಯ್ಯ-ಡಿಕೆಶಿ ಹತ್ತಿರವಾಗಿದ್ದಾರೆ/

ಬಿಜೆಪಿಯ ಸಂತೋಷಕ್ಕೆ ಮುಸುಕು ಹಾಕಿದರು ಮೊನ್ನೆ ಶನಿವಾರ ರಾತ್ರಿ ಪಕ್ಷದ ಹಿರಿಯ ನಾಯಕರೊಬ್ಬರಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಫೋನು ಮಾಡಿದ್ದಾರೆ.ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಿಂದ ನಾವು ಎಷ್ಟು ಸ್ಥಾನಗಳನ್ನು ಗೆಲ್ಲಬಹುದು ಅಂತ ಈ ಸಂದರ್ಭದಲ್ಲಿ ಅವರು ಕೇಳಿದರಂತೆ. ಅಂದ ಹಾಗೆ ಶನಿವಾರ ರಾಜ್ಯ ಬಿಜೆಪಿಯ ಹಿರಿಯ ನಾಯಕರಿಗೆ ನಡ್ಡಾ ಫೋನು ಮಾಡಲು ಒಂದು ಕಾರಣವಿತ್ತು.ಅದೆಂದರೆ ಅವತ್ತೇ ರಾಜ್ಯದಲ್ಲಿ ಪಕ್ಷದ ಪ್ರಮುಖರು ಆತ್ಮಾವಲೋಕನ ಸಭೆ ನಡೆಸಿದ್ದರು.ಈ ಸಭೆಯಲ್ಲಿ ಮಾತನಾಡಿದ ಹಲವರು,ಈ ಚುನಾವಣೆಯಲ್ಲಿ ನಾವು ಇಪ್ಪತ್ತೈದು ಸೀಟುಗಳನ್ನು ಗೆಲ್ಲುವುದು ಕಷ್ಟ…

Read More

ಪದವೀಧರ ನೈರುತ್ಯ ಕ್ಷೇತ್ರದ ಬಿಜೆಪಿ ಟಿಕೇಟ್ ಡಾ.ಧನಂಜಯ ಸರ್ಜಿಗೆ; ಏನಂತಾರೆ ಮಾಜಿ ಶಾಸಕ ರಘುಪತಿ ಭಟ್; ಬಿಜೆಪಿಯಲ್ಲೂ ಬಂಡಾಯ?

ಪದವೀಧರ ನೈರುತ್ಯ ಕ್ಷೇತ್ರದ ಬಿಜೆಪಿ ಟಿಕೇಟ್ ಡಾ.ಧನಂಜಯ ಸರ್ಜಿಗೆ; ಏನಂತಾರೆ ಮಾಜಿ ಶಾಸಕ ರಘುಪತಿ ಭಟ್; ಬಿಜೆಪಿಯಲ್ಲೂ ಬಂಡಾಯ? ವಿಧಾನ ಪರಿಷತ್ ಟಿಕೆಟ್ ಘೋಷಣೆಯಾಗಿದೆ. ಶಿಕ್ಷಕರ ಕ್ಷೇತ್ರದ ಟಿಕೆಟ್ ಜೆಡಿಎಸ್ ಪಕ್ಷದ ಚಿಕ್ಕಮಗಳೂರು ಅಭ್ಯರ್ಥಿಗೆ ನೀಡಿ ಪದವೀಧರ ಕ್ಷೇತ್ರದ ಟಿಕೆಟ್ ಶಿವಮೊಗ್ಗದ ಬಿಜೆಪಿ ಅಭ್ಯರ್ಥಿಗೆ ನೀಡಲಾಗಿದೆ. ಇದು ನಾಲ್ಕು ದಶಕಗಳಿಂದ ಬಿಜೆಪಿ ಸಂಪ್ರದಾಯ ಮುರಿದು ಕರಾವಳಿ ಭಾಗಕ್ಕೆ ನೀಡುತ್ತಿದ್ದ ಶಿಕ್ಷಕರ ಕ್ಷೇತ್ರದ ಟಿಕೆಟ್ ನೀಡದೆ ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಕೊಡಗು ಭಾಗದ ವಿದ್ಯಾವಂತ, ಪ್ರಜ್ಞಾವಂತ ಮತದಾರರಿಗೆ…

Read More

ಸುದ್ದಿಗೋಷ್ಠಿಯಲ್ಲಿ ಕೆ.ಎಸ್.ಈಶ್ವರಪ್ಪ ಹೇಳಿದ್ದು; ಲೋಕಸಭೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧಿಸುವುದು ಶತಃಸಿದ್ಧ ಕಾಂಗ್ರೆಸ್- ಜೆಡಿಎಸ್ ನಾಯಕರೂ ಬೆಂಬಲಿಸುತ್ತಿದ್ದಾರೆ

ಸುದ್ದಿಗೋಷ್ಠಿಯಲ್ಲಿ ಕೆ.ಎಸ್.ಈಶ್ವರಪ್ಪ ಹೇಳಿದ್ದು; ಲೋಕಸಭೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧಿಸುವುದು ಶತಃಸಿದ್ಧ ಕಾಂಗ್ರೆಸ್- ಜೆಡಿಎಸ್ ನಾಯಕರೂ ಬೆಂಬಲಿಸುತ್ತಿದ್ದಾರೆ ನಾನು ಚುನಾವಣಾ ಕಣದಿಂದ ಹಿಂದೆ ಸರಿಯುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ನನ್ನ ಸ್ಪರ್ಧೆಗೆ ಅಭೂತಪೂರ್ವ ಬೆಂಬಲ ಸಿಗುತ್ತಿದೆ ಎಂದು ಕೆ.ಎಸ್.ಈಶ್ವರಪ್ಪ ಮತ್ತೆ ಪುನರುಚ್ಛರಿಸಿದ್ದಾರೆ. ತಮ್ಮ ಸ್ವಗೃಹದ ಆವರಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಮಠ ಮಂದಿರಗಳು, ಸರ್ವ ಜಾತಿಯ ಬಾಂಧವರು ಒಳ್ಳೆಯ ಬೆಂಬಲ ನೀಡುವುದಾಗಿ ಭರವಸೆ ನೀಡುತ್ತಿದ್ದಾರೆ ಎಂದರು. ಬಿಜೆಪಿ ನನ್ನ ತಾಯಿ ಇದ್ದಂತೆ. ನಾನೆಂದೂ ಅದರಿಂದ ದೂರವಾಗಿಲ್ಲ. ಕೆಲವರ ಷಡ್ಯಂತ್ರ…

Read More

ಎಂ.ಶ್ರೀಕಾಂತ್ @ ಶ್ರೀಕಾಂತಣ್ಣ;* *ಅಚ್ಚರಿಗಳ ಜಾಡು ಹಿಡಿದು…*

*ಎಂ.ಶ್ರೀಕಾಂತ್ @ ಶ್ರೀಕಾಂತಣ್ಣ;* *ಅಚ್ಚರಿಗಳ ಜಾಡು ಹಿಡಿದು…* ಕುವೆಂಪು ಸಾಹಿತ್ಯದಲ್ಲಿ ಒಂದು ಮಾತು ಬರುತ್ತದೆ. ಸರ್ವ ಜನಾಂಗದ ಶಾಂತಿಯ ತೋಟ ಅಂತ. ಅಂಥೊಬ್ಬ ವ್ಯಕ್ತಿಯನ್ನು ನಾನು ಕಂಡಿದ್ದು ಎಂ.ಶ್ರೀಕಾಂತ್ @ ಕಾಂತಣ್ಣನಲ್ಲಿ! ಇದು ಆಶ್ಚರ್ಯ ಎನಿಸಬಹುದು. ಅವರ ಸೇವೆಗೆ ಮಿತಿಗಳಿಲ್ಲ, ಸಹಾಯಕ್ಕೆ ಧರ್ಮದ ಗಡಿಗಳಿಲ್ಲ. ಬಡವರು, ಶ್ರೀಮಂತಿಕೆಯ ತೋರ್ಪಡಿಕೆ ಕೂಡ ಅವರಲ್ಲಿಲ್ಲ. ಎಲ್ಲರನ್ನೂ ಮೆಚ್ಚುವ, ಎಲ್ಲರಿಗೂ ಮೆಚ್ಚುಗೆಯಾಗುವ ವ್ಯಕ್ತಿ ಮತ್ತು ವ್ಯಕ್ತಿತ್ವ ಶ್ರೀಕಾಂತ್ ರವರದು. ಅವರು ರಾಜಕಾರಣದಲ್ಲಿ ಬೆಳೆಯಬೇಕೆಂದೇ ಬಂದರು. ಜನ ರಾಜಕಾರಣದಲ್ಲಿ ಅವರನ್ನು ಕೈ ಹಿಡಿದು…

Read More

ನೈರುತ್ಯ ಪದವೀಧರ ಕ್ಷೇತ್ರಕ್ಕೆ ಆಯನೂರು ಮಂಜುನಾಥ್ ರಿಗೆ ಕಾಂಗ್ರೆಸ್ ಟಿಕೆಟ್; ಒಗ್ಗಟ್ಟಿನಿಂದ ಗೆಲ್ಲಿಸುತ್ತೇವೆ ಎಂದ ಹೆಚ್.ಎಸ್.ಸುಂದರೇಶ್

ನೈರುತ್ಯ ಪದವೀಧರ ಕ್ಷೇತ್ರಕ್ಕೆ ನಾಲ್ಕು ಮನೆಗಳ ಸದಸ್ಯರಾಗಿದ್ದ ಆಯನೂರು ಮಂಜುನಾಥ್ ಅವರನ್ನು ಕಾಂಗ್ರೆಸ್ ಪಕ್ಷ ಅಭ್ಯರ್ಥಿಯಾಗಿ ಘೋಷಿಸಿದ್ದು, ಅವರ ಗೆಲುವಿಗೆ ನಾವೆಲ್ಲರೂ ಒಟ್ಟಾಗಿ ಶ್ರಮಿಸುತ್ತೇವೆ. ಅವರ ಗೆಲುವು ಖಚಿತ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ಹೇಳಿದರು. ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಿಧಾನಪರಿಷತ್ ಚುನಾವಣೆ ದಿನಾಂಕವನ್ನು ಘೋಷಣೆ ಮಾಡುವ ಮೊದಲೇ ಕಾಂಗ್ರೆಸ್ ಪಕ್ಷ ನೈರುತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿಯ ಹೆಸರನ್ನು ಪ್ರಕಟಿಸಿದೆ. ಆಯನೂರು ಮಂಜುನಾಥ್ ಈ ಹಿಂದೆ ಇದೇ ಕ್ಷೇತ್ರದಿಂದ ಗೆದ್ದು ಬಂದಿದ್ದರು. ಇದು ಅವರಿಗೆ…

Read More

ಬೈಂದೂರಿನಲ್ಲಿ ಚುನಾವಣಾ ಪ್ರಚಾರ ಮಾಡಿದ ಶಿವರಾಜ್ ಕುಮಾರ್ ದಂಪತಿ;* *ಮೀನು, ಜನ ಮತ್ತು ಚುನಾವಣೆ* *ಗೀತಾ ಯಾಕೆ ಗೆಲ್ಲಬೇಕು? ಶಿವರಾಜ್ ಕುಮಾರ್ ಅಂದಿದ್ದೇನು?*

*ಬೈಂದೂರಿನಲ್ಲಿ ಚುನಾವಣಾ ಪ್ರಚಾರ ಮಾಡಿದ ಶಿವರಾಜ್ ಕುಮಾರ್ ದಂಪತಿ;* *ಮೀನು, ಜನ ಮತ್ತು ಚುನಾವಣೆ* *ಗೀತಾ ಯಾಕೆ ಗೆಲ್ಲಬೇಕು? ಶಿವರಾಜ್ ಕುಮಾರ್ ಅಂದಿದ್ದೇನು?* ಚುನಾವಣಾ ಪ್ರಚಾರದ ವೇಳೆ ಸ್ಯಾಂಡಲ್​ವುಡ್ ಸ್ಟಾರ್ ಶಿವರಾಜ್ ಕುಮಾರ್ (Shiva Rajkumar) ಮೀನು ಊಟದ ಬಗ್ಗೆ ಮಾತನಾಡಿದ್ದಾರೆ! ಹೌದು, ಉಡುಪಿ (Udupi) ಜಿಲ್ಲೆಯ ಬೈಂದೂರಿನಲ್ಲಿ (Baindur) ಕಾಂಗ್ರೆಸ್ (Congress) ಪಕ್ಷದ ಚುನಾವಣಾ ಪ್ರಚಾರ ಅಭಿಯಾನದಲ್ಲಿ ಶುಕ್ರವಾರ ಭಾಗವಹಿಸಿದ ಅವರು, ಕರಾವಳಿಯ ಜನರ ಬಗ್ಗೆ ಪ್ರೀತಿ-ಅಭಿಮಾನದ ಮಾತುಗಳನ್ನಾಡಿದ್ದಾರೆ. ಕಾಣೆ, ಅಂಜಲ್, ಭೂತಾಯಿ ಮೀನೆಂದರೆ ನನಗೆ ಇಷ್ಟ. ಅದೇ…

Read More

ಗೀತಾ ಗೆಲ್ಲಿಸಲು ಪಣ ತೊಟ್ಟ ಶಿವರಾಜ್ ಕುಮಾರ್ ಅಖಾಡಕ್ಕೆ ಅಧಿಕೃತವಾಗಿ ಇಳಿದ ಕಾಂಗ್ರೆಸ್ ಅಭ್ಯರ್ಥಿ

ಗೀತಾ ಗೆಲ್ಲಿಸಲು ಪಣ ತೊಟ್ಟ ಶಿವರಾಜ್ ಕುಮಾರ್ ಅಖಾಡಕ್ಕೆ ಅಧಿಕೃತವಾಗಿ ಇಳಿದ ಕಾಂಗ್ರೆಸ್ ಅಭ್ಯರ್ಥಿ ಲೋಕಸಭಾ ಚುನಾವಣಾ(Lok Sabha Election) ಕಾವು ಹೆಚ್ಚಾಗಿದ್ದು, ಹ್ಯಾಟ್ರಿಕ್ ಹೀರೋ ಶಿವ ರಾಜ್​ಕುಮಾರ್ ಅವರ ಪತ್ನಿ ಗೀತಾ ಶಿವ ರಾಜ್​ಕುಮಾರ್ (Geeta Shivarajkumar) ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆಗೆ ಇಳಿದಿದ್ದಾರೆ. ಈ ಹಿನ್ನಲೆ ಶಿವಮೊಗ್ಗದಲ್ಲಿ ಗೀತಾ ಶಿವರಾಜ್ ​ಕುಮಾರ್ ಚುನಾವಣೆಯಲ್ಲಿ ಗೆಲ್ಲುವ ಮೂಲಕ  ನಮ್ಮ ತಂದೆಯ ಸೋಲಿನ ಸೇಡು ತಿರಿಸಿಕೊಳ್ಳಬೇಕಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ(madhu bangarappa) ವಾಗ್ದಾಳಿ ನಡೆಸಿದರು….

Read More

ಹೆಚ್.ಎಸ್.ಸುಂದರೇಶ್ ರವರ ಪತ್ರಿಕಾಗೋಷ್ಠಿ *ನಾಳೆ ಗೀತಾ ಶಿವರಾಜ್ ಕುಮಾರ್ ಬೃಹತ್ ಮೆರವಣಿಗೆ* ಭದ್ರಾವತಿಯಿಂದಲೇ ಮೆರವಣಿಗೆ ಆರಂಭವಾಗಿ ಲಗಾನ್ ಕಲ್ಯಾಣ ಮಂದಿರಕ್ಕೆ ತಲುಪಲಿದೆ ಮೆರವಣಿಗೆ ಮೋದಿ ಹವಾಗಿವಾ ಏನಿಲ್ಲ…

ಹೆಚ್.ಎಸ್.ಸುಂದರೇಶ್ ರವರ ಪತ್ರಿಕಾಗೋಷ್ಠಿ *ನಾಳೆ ಗೀತಾ ಶಿವರಾಜ್ ಕುಮಾರ್ ಬೃಹತ್ ಮೆರವಣಿಗೆ* ಭದ್ರಾವತಿಯಿಂದಲೇ ಮೆರವಣಿಗೆ ಆರಂಭವಾಗಿ ಲಗಾನ್ ಕಲ್ಯಾಣ ಮಂದಿರಕ್ಕೆ ತಲುಪಲಿದೆ ಮೆರವಣಿಗೆ ಮೋದಿ ಹವಾಗಿವಾ ಏನಿಲ್ಲ…   ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೀಮತಿ ಗೀತಾ ಶಿವರಾಜ್ ಕುಮಾರ್ ಮಾ.20ರಂದು ಬೃಹತ್ rally ಮೂಲಕ ಆಗಮಿಸಿ ಜಿಲ್ಲಾ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್.ಎಸ್.ಸುಂದರೇಶ್ ಹೇಳಿದರು. ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, rally ಯು ಬುಧವಾರ ಬೆಳಿಗ್ಗೆ…

Read More

ಶಿವಮೊಗ್ಗದಲ್ಲಿ ಪ್ರಧಾನಿ ಮೋದಿ ಏನಂದ್ರು? ಏನೆಲ್ಲಾ ಹೇಳಿದ್ರು?* *ಶಿವಮೊಗ್ಗಾದಾ ಜನತೇಗೇ ನನ್ನ ನಮಸ್ಕಾರ್ ಗಳು ಅಂತ ಭಾಷಣ ಆರಂಭಿಸಿದ ಮೋದಿ* *ಕಾಂಗ್ರೆಸ್ ಸುಳ್ಳುಗಳನ್ನೇ ಹೇಳುತ್ತಾ ನಂಬಿಸುತ್ತಾ ಬಂದಿದೆ* *ಮುಂದಿನ 5 ವರ್ಷಗಳಲ್ಲಿ ದೇಶದ ಸ್ಥಿತಿಯೇ ಬದಲಾಗಲಿದೆ* *ಕರ್ನಾಟಕದ 28 ಕ್ಷೇತ್ರಗಳಲ್ಲೂ ಕಮಲ ಅರಳಲಿದೆ*

*ಶಿವಮೊಗ್ಗದಲ್ಲಿ ಪ್ರಧಾನಿ ಮೋದಿ ಏನಂದ್ರು? ಏನೆಲ್ಲಾ ಹೇಳಿದ್ರು?* *ಶಿವಮೊಗ್ಗಾದಾ ಜನತೇಗೇ ನನ್ನ ನಮಸ್ಕಾರ್ ಗಳು ಅಂತ ಭಾಷಣ ಆರಂಭಿಸಿದ ಮೋದಿ* *ಕಾಂಗ್ರೆಸ್ ಸುಳ್ಳುಗಳನ್ನೇ ಹೇಳುತ್ತಾ ನಂಬಿಸುತ್ತಾ ಬಂದಿದೆ* *ಮುಂದಿನ 5 ವರ್ಷಗಳಲ್ಲಿ ದೇಶದ ಸ್ಥಿತಿಯೇ ಬದಲಾಗಲಿದೆ* *ಕರ್ನಾಟಕದ 28 ಕ್ಷೇತ್ರಗಳಲ್ಲೂ ಕಮಲ ಅರಳಲಿದೆ* ಶಿವಮೊಗ್ಗಾದಾ ಜನತೇಗೇ ನನ್ನ ನಮಸ್ಕಾರ್ ಗಳು ಅಂತ ಭಾಷಣ ಆರಂಭಿಸಿದ ಮೋದಿ ಜನರ ಪ್ರೀತಿ, ಆಶೀರ್ವಾದ, ಜನ ಸಾಗರದ ಈ ದೃಶ್ಯ ಬಿಜೆಪಿಗೆ ದೊಡ್ಡ ಶಕ್ತಿಯಾಗಿದೆ. ಇಡೀ ಮೈದಾನ ಸ್ಫೂರ್ತಿಯ ತಾಣವಾಗಿದೆ ಎಂದರು….

Read More