ಪತ್ರಕರ್ತರಿಗೆ ನಟ ಶಿವರಾಜ್ ಕುಮಾರ್ ಹೇಳಿದ್ದೇನು? ನಾನು ಬಂಗಾರಪ್ಪರ ಅಳಿಯ-ಮಗ ಅಲ್ಲ ಒಂದು ಮಾಡೋಕೆ ನಾನ್ಯಾರು? ಗೀತಾ ಗೆಲ್ಲೋದು ಖಂಡಿತ

ಪತ್ರಕರ್ತರಿಗೆ ನಟ ಶಿವರಾಜ್ ಕುಮಾರ್ ಹೇಳಿದ್ದೇನು?

ನಾನು ಬಂಗಾರಪ್ಪರ ಅಳಿಯ-ಮಗ ಅಲ್ಲ

ಒಂದು ಮಾಡೋಕೆ ನಾನ್ಯಾರು?

ಗೀತಾ ಗೆಲ್ಲೋದು ಖಂಡಿತ
ಬೆಳಗಾವಿ;
ಗೀತಾ ಗೆಲ್ಲೋದು ಖಚಿತ ಎಂದು ನಟ ಶಿವರಾಜ್ ಕುಮಾರ್ ಮತ್ತೆ ಪುನರುಚ್ಛರಿಸಿದ್ದಾರೆ.

ಶಿವಮೊಗ್ಗ ಲೋಕಸಭೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೀತಾ ಶಿವರಾಜ್ ಕುಮಾರ್ ಆಯ್ಕೆ ಮಾಡಿದ ಹಿನ್ನೆಲೆಯಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದರು.

ಕರಟಕ ಡಮನಕ ಸಿನಿಮಾ ಪ್ರಮೋಷನ್ ಹಿನ್ನೆಲೆಯಲ್ಲಿ ಶಿವರಾಜ್ ಕುಮಾರ್ ಬೆಳಗಾವಿಗೆ ಭೇಟಿ ನೀಡಿದ್ದಾರೆ.

ಈ ಸಂದರ್ಭದಲ್ಲಿ ಪತ್ರಕರ್ತರು ಕೆಲವೊಂದು ಪ್ರಶ್ನೆ ಕೇಳಿದ್ದಾರೆ. ಗೀತಾ ಪರ ಪ್ರಚಾರಕ್ಕೆ ಕುಮಾರ್ ಬಂಗಾರಪ್ಪ ಬರ್ತಾರಾ? ಕುಮಾರ್ ಮತ್ತು ಮಧು ರವರಿಬ್ಬರನ್ನು ನೀವು ಒಂದು ಮಾಡಬಹುದಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಇದಕ್ಕೆ ಉತ್ತರಿಸಿದ ಡಾ.ಶಿವರಾಜ್ ಕುಮಾರ್, ನಾನು ಬಂಗಾರಪ್ಪರ ಮಗ ಅಲ್ಲ…ಅಳಿಯ ಅಷ್ಟೇ. ಒಂದು ಮಾಡೋಕೆ ನಾನ್ಯಾರು? ಬಂಗಾರಪ್ಪರ ಮಗಳು ಗೀತಾ ಚುನಾವಣೆಯಲ್ಲಿ ಗೆಲ್ಲೋದು ಖಚಿತ ಎಂದರು.