ಮೃತ ನಂಜುಂಡಪ್ಪ ಅವರ ಮನೆಗೆ ಗೀತಾ ಶಿವರಾಜಕುಮಾರ್ ಭೇಟಿ

ಮೃತ ನಂಜುಂಡಪ್ಪ ಅವರ ಮನೆಗೆ ಗೀತಾ ಶಿವರಾಜಕುಮಾರ್ ಭೇಟಿ ಶಿವಮೊಗ್ಗ: ತಾಲ್ಲೂಕಿನ ಹರಮಘಟ್ಟ ಗ್ರಾಮದ ಒಂದೇ ಕುಟುಂಬದ ಮೂವರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಶನಿವಾರ ಶಿವಮೊಗ್ಗ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಅವರು ಮೃತರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು. ಶಿವಮೊಗ್ಗ- ಶಿಕಾರಿಪುರ ರಸ್ತೆಯ ಚಿನ್ನಿಕಟ್ಟೆ- ಬಿದರಹಳ್ಳಿ ನಡುವೆ ಏ.11ರಂದು ಸಾರಿಗೆ ಬಸ್ ಹಾಗೂ ಓಮಿನಿ ವಾಹನ ನಡುವೆ ನಡೆದ ಅಪಘಾತದಲ್ಲಿ ಹರಮಘಟ್ಟದ ದೊಂಬಳ್ಳರಮನೆ ನಂಜುಂಡಪ್ಪ ಹಾಗೂ ಅವರ ಇಬ್ಬರು ಮೊಮ್ಮಕ್ಕಳು ಸಾವನಪ್ಪಿದ್ದರು….

Read More

ನಾಳೆ ನಾಮಪತ್ರ ಸಲ್ಲಿಸಲಿರುವ ಈಶ್ವರಪ್ಪ; ನಾಮಪತ್ರ ಸಲ್ಲಿಕೆ ಬಳಿಕ ಬೆಂಬಲ ದ್ವಿಗುಣಗೊಳ್ಳಲಿದೆ-ಈಶ್ವರಪ್ಪ ಮೋದಿ ಇವರಪ್ಪನ ಮನೆಯ ಆಸ್ತಿಯಲ್ಲ; ಯಡಿಯೂರಪ್ಪ ಕುಟುಂಬದವರ ಫೋಟೋ ಹಾಕಿಕೊಂಡು ಪ್ರಚಾರ ಮಾಡಿ ಗೆಲ್ಲಲಿ ನೋಡೋಣ ಎಂದು ಸವಾಲ್‌ ಎಸೆದ ಈಶ್ವರಪ್ಪ

ನಾಮಪತ್ರ ಸಲ್ಲಿಕೆ ಬಳಿಕ ಬೆಂಬಲ ದ್ವಿಗುಣಗೊಳ್ಳಲಿದೆ-ಈಶ್ವರಪ್ಪ ಮೋದಿ ಇವರಪ್ಪನ ಮನೆಯ ಆಸ್ತಿಯಲ್ಲ; ಯಡಿಯೂರಪ್ಪ ಕುಟುಂಬದವರ ಫೋಟೋ ಹಾಕಿಕೊಂಡು ಪ್ರಚಾರ ಮಾಡಿ ಗೆಲ್ಲಲಿ ನೋಡೋಣ ಎಂದು ಸವಾಲ್‌ ಎಸೆದ ಈಶ್ವರಪ್ಪ   ಶಿವಮೊಗ್ಗ- ಎಲ್ಲ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿಯೂ ಪ್ರಚಾರ ನಡೆಸಿದ್ದು, ಅಭೂತಪೂರ್ವ ಬೆಂಬಲ ಸಿಗುತ್ತಿದೆ. ನಾಮಪತ್ರ ಸಲ್ಲಿಕೆಯ ಬಳಿಕ ಈ ಬೆಂಬಲ ದ್ವಿಗುಣಗೊಳ್ಳಲಿದೆ ಎಂದು ಸ್ವತಂತ್ರ ಅಭ್ಯರ್ಥಿ ಕೆ. ಎಸ್‌. ಈಶ್ವರಪ್ಪ ಹೇಳಿದರು. ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ನಾನು ಈಗಾಗಲೇ ಎಂಟು ವಿಧಾನಸಭಾ ಕ್ಷೇತ್ರವನ್ನೂ ಸುತ್ತಿ ಬಂದಿದ್ದೇನೆ….

Read More

ಶಿಕಾರಿಪುರ ತಾಲ್ಲೂಕಿನ ಮುದ್ದನಹಳ್ಳಿ; ಹಗರಣ ಮುಕ್ತ ಗ್ಯಾರಂಟಿ ಯೋಜನೆಗಳು; ಗೀತಾ ಶಿವರಾಜ್ ಕುಮಾರ್

ಶಿಕಾರಿಪುರ ತಾಲ್ಲೂಕಿನ ಮುದ್ದನಹಳ್ಳಿ; ಹಗರಣ ಮುಕ್ತ ಗ್ಯಾರಂಟಿ ಯೋಜನೆಗಳು; ಗೀತಾ ಶಿವರಾಜ್ ಕುಮಾರ್ ಶಿವಮೊಗ್ಗ: ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳು ಮಧ್ಯವರ್ತಿಗಳ ಕಾಲ್ತುಳಿತಕ್ಕೆ ಸಿಲುಕದೆ, ನೇರವಾಗಿ ಬಡವರ ಕೈ ಸೇರುತ್ತಿವೆ ಎಂದು ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಹೇಳಿದರು. ಶಿಕಾರಿಪುರ ತಾಲ್ಲೂಕಿನ ಮುದ್ದನಹಳ್ಳಿಯಲ್ಲಿ ಗುರುವಾರ ಆಯೋಜಿಸಿದ್ದ  ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಗ್ಯಾರಂಟಿ ಯೋಜನೆಗಳಲ್ಲಿ ಯಾವುದೇ ರೀತಿಯ ಹಗರಣ ನಡೆಯುತ್ತಿಲ್ಲ. ಮಾಸಿಕ ₹50 ಲಕ್ಷ ಹಣ ಪ್ರತಿ ಗ್ರಾಮ ಪಂಚಾಯಿತಿಗೆ ವ್ಯಯಿಸಲಾಗುತ್ತಿದೆ. ವಾರ್ಷಿಕ ₹6 ಕೋಟಿ ಹಣ ಗ್ಯಾರಂಟಿ…

Read More

ಗಮನ ಸೆಳೆದ ಬೈಕ್ RALLY; ಗೀತಾ ಶಿವರಾಜಕುಮಾರ್ ಮಂಚಿ ಆಂಜನೇಯ ದೇವಸ್ಥಾನಕ್ಕೆ ಭೇಟಿ

ಗೀತಾ ಶಿವರಾಜಕುಮಾರ್ ಮಂಚಿ ಆಂಜನೇಯ ದೇವಸ್ಥಾನಕ್ಕೆ ಭೇಟಿ ಸೊರಬ ತಾಲ್ಲೂಕಿ‌ನ ಮಂಚಿ ಗ್ರಾಮದ ಆಂಜನೇಯ ದೇವಸ್ಥಾನಕ್ಕೆ ಬುಧವಾರ ಲೋಕಸಭಾ ಶಿವಮೊಗ್ಗ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಅವರು ಭೇಟಿ ನೀಡಿ ಪೂಜೆ ಸಲ್ಲಿಸಿದರು. ನಟ ಶಿವರಾಜಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಣಪತಿ, ಸ್ಥಳೀಯ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಯಲ್ಲಪ್ಪ, ಉಪಾಧ್ಯಕ್ಷ ಚಿರಂಜೀವಿ ಸೇರಿ ಊರಿನ ಗ್ರಾಮಸ್ಥರು ಪಾಲ್ಗೊಂಡಿದ್ದರು. ****************** ಲೋಕಸಭಾ ಶಿವಮೊಗ್ಗ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಅವರು ಬುಧವಾರ ಸೊರಬ ತಾಲ್ಲೂಕು…

Read More

ಹೊನ್ನಾಳಿ ಚಂದ್ರು- ಪೂರ್ಣಿಮಾ ಮಗಳು ಚುಕ್ಕಿಗೆ ಪಿಯು ಕಲಾವಿಭಾಗದಲ್ಲಿ ರಾಜ್ಯದಲ್ಲಿ 4 ನೇ RANK

ಹೊನ್ನಾಳಿ ಚಂದ್ರು- ಪೂರ್ಣಿಮಾ ಮಗಳು ಚುಕ್ಕಿಗೆ ಪಿಯು ಕಲಾವಿಭಾಗದಲ್ಲಿ ರಾಜ್ಯದಲ್ಲಿ 4 ನೇ RANK ಕನ್ನಡ ಮೀಡಿಯಂ 24×7 ವಾಹಿನಿ ಪ್ರಧಾನ ಸಂಪಾದಕ ಹೊನ್ನಾಳಿ ಚಂದ್ರಶೇಖರ್,  ವಕೀಲರಾದ ಹೆಚ್.ಎಂ. ಪೂರ್ಣಿಮಾ ಅವರ ಪುತ್ರಿ ಚುಕ್ಕಿ ಕೆ‌.ಸಿ. ಅವರು ದ್ವಿತೀಯ ಪಿಯು ಪರೀಕ್ಷೆ ಕಲಾ ವಿಭಾಗದಲ್ಲಿ ರಾಜ್ಯದಲ್ಲಿ 4ನೇ RANK ಪಡೆದಿದ್ದಾರೆ. ಇವರು ಶಿವಮೊಗ್ಗದ ಡಿವಿಎಸ್ ಕಾಲೇಜಿನ ವಿದ್ಯಾರ್ಥಿನಿ.

Read More

ದಕ್ಷಿಣ ಕನ್ನಡ ಟಾಪ್, ಗದಗ ಜಿಲ್ಲೆಗೆ ಕೊನೆಯ ಸ್ಥಾನ*ಟಾಪರ್​ಗಳು ಯಾರೆಲ್ಲ?

*ದಕ್ಷಿಣ ಕನ್ನಡ ಟಾಪ್, ಗದಗ ಜಿಲ್ಲೆಗೆ ಕೊನೆಯ ಸ್ಥಾನ* ಮಾರ್ಚ್ 1ರಿಂದ ಮಾರ್ಚ್ 22ರವರೆಗೆ ನಡೆದಿದ್ದ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಬುಧವಾರ (Second PU Result) ಪ್ರಕಟಗೊಂಡಿದೆ. ಬೆಂಗಳೂರಿನಲ್ಲಿ ಶಿಕ್ಷಣ ಇಲಾಖೆ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದೆ. ಈ ಬಾರಿ, ಶೇ 81.15 ಮಂದಿ ಉತ್ತೀರ್ಣರಾಗಿದ್ದಾರೆ. ಪರೀಕ್ಷೆಗೆ ಹಾಜರಾದ ಒಟ್ಟು ವಿದ್ಯಾರ್ಥಿಗಳ ಪೈಕಿ 552690 ಮಂದಿ ತೇರ್ಗಡೆಯಾಗಿದ್ದಾರೆ. 11 ಗಂಟೆಗೆ ಅಧಿಕೃತ ವೆಬ್​​ಸೈಟ್​ನಲ್ಲಿ ಫಲಿತಾಂಶ ಪ್ರಕಟವಾಗುತ್ತಿದ್ದು, ವಿದ್ಯಾರ್ಥಿಗಳು ಲಾಗಿನ್ ಕ್ರೆಡೆನ್ಶಿಯಲ್ಸ್ ನಮೂದಿಸುವ ಮೂಲಕ ಪಿಯು ಮಂಡಳಿಯ…

Read More

ಏನಂದ್ರು ಜಿಲ್ಲಾಧಿಕಾರಿ? ಜಿಲ್ಲಾಧಿಕಾರಿ ಗುರುದತ್ತ ಹೆಗಡೆಯವರ ಜೊತೆ ಪ್ರೆಸ್ ಟ್ರಸ್ಟ್ ನಿಂದ ಪತ್ರಿಕಾ ಸಂವಾದ*

*ಜಿಲ್ಲಾಧಿಕಾರಿ ಗುರುದತ್ತ ಹೆಗಡೆಯವರ ಜೊತೆ ಪ್ರೆಸ್ ಟ್ರಸ್ಟ್ ನಿಂದ ಪತ್ರಿಕಾ ಸಂವಾದ* ಜಿಲ್ಲಾಧಿಕಾರಿ ಗುರುದತ್ತ ಹೆಗಡೆ; ಬೀದರ್, ಕೊಪ್ಪಳ, ಮೈಸೂರು, ಧಾರವಾಡದಲ್ಲಿ ಕೆಲಸ ಮಾಡಿದ ನಂತರ ಇದೀಗ ಶಿವಮೊಗ್ಗದಲ್ಲಿ ಕೆಲಸ. ವೈಬ್ರೆಂಟ್ ಇರೋ ಜಾಗ ಶಿವಮೊಗ್ಗ ಮಾಧ್ಯಮ. ಇಲ್ಲಿನ ಜನ ಜಾಗೃತರಾಗಿದ್ದಾರೆ. ಮಾಧ್ಯಮಗಳ ಸಂಪರ್ಕದಲ್ಲಿ ಅವರಿರುವುದರಿಂದ ಜನರಲ್ಲಿ ಜಾಗೃತಿ ಇದೆ. ಜನರೇ ಬಂದು ಸಲಹೆ ಕೊಡಬಲ್ಲ ಮಟ್ಟದಲ್ಲಿದ್ದಾರೆ. ಅರಣ್ಯ ಕಾನೂನು, ಅರಣ್ಯ ರಕ್ಷಣೆ ಬಗ್ಗೆ ಬಹಳಷ್ಟು ಸಮಸ್ಯೆಗಳು ಇಲ್ಲಿ ಭಿನ್ನವಾಗಿವೆ. ಶಿರಸಿ ಮೂಲವಾದರೂ ಬೆಳೆದಿದ್ದು ಬಯಲು ಧಾರವಾಡದಲ್ಲಿ….

Read More

ಬಂಜಾರ ಸಮುದಾಯದ ಮನ ಮುಟ್ಟಿದ ಗೀತಾ ಶಿವರಾಜ್ ಕುಮಾರ್ ಜೋಗಯ್ಯನ ಜೊತೆಯಲ್ಲಿ ಬಂಜಾರ ಯುಗಾದಿ

ಬಂಜಾರ ಸಮುದಾಯದ ಮನ ಮುಟ್ಟಿದ ಗೀತಾ ಶಿವರಾಜ್ ಕುಮಾರ್ ಜೋಗಯ್ಯನ ಜೊತೆಯಲ್ಲಿ ಬಂಜಾರ ಯುಗಾದಿ ಶಿವಮೊಗ್ಗ: ‘ರಾಜ್ಯದಲ್ಲಿ ಬಿಜೆಪಿ ಪಕ್ಷದವರು ಹಣ ಹಾಗೂ ಧರ್ಮದ ಹೆಸರಿನಲ್ಲಿ ನ್ಯಾಯವನ್ನು ಸೋಲಿಸಲು ಮುಂದಾಗುತ್ತಿದ್ದಾರೆ. ಇದಕ್ಕೆ, ಜನರು ಆಸ್ಪದ ಕೊಡಬಾರದು’ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧುಬಂಗಾರಪ್ಪ ಹೇಳಿದರು. ಸವಳಂಗ ರಸ್ತೆಯ ಕುಂಚೇನಹಳ್ಳಿ ಗ್ರಾಮದಲ್ಲಿ ಮಂಗಳವಾರ ಆಯೋಜಿಸಿದ್ದ ‘ನಮ್ಮೂರ ಹುಡುಗ ಡಾ.ಶಿವರಾಜಕುಮಾರ್ ಹಾಗೂ ಗೀತಾ ಶಿವರಾಜಕುಮಾರ್ ಅವರು ಬಂಜಾರ ಸಮುದಾಯದೊಂದಿಗೆ ಶೀರ್ಷಿಕೆಯಡಿಯ ಯುಗಾದಿ ಹಬ್ಬ ಆಚರಣೆಯಲ್ಲಿ ಪಾಲ್ಗೊಂಡು…

Read More

ಫಾರಂ ಪಡೆದ ಮಧು ಬಂಗಾರಪ್ಪ; ಶುಭ ಹಾರೈಸಿ ಕಳಿಸಿದ ಡಿಕೆಶಿ…

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಶ್ರೀಮತಿ ಗೀತಾ ಶಿವರಾಜ್ ಕುಮಾರ್ ಅವರ ಪರವಾಗಿ ಅವರ‌ ಸಹೋದರ ಹಾಗೂ ಸಚಿವರಾದ ಮಧು ಬಂಗಾರಪ್ಪ ರವರು ಕೆಪಿಸಿಸಿ ಅಧ್ಯಕ್ಷರೂ ಉಪ ಮುಖ್ಯಮಂತ್ರಿಗಳೂ ಆದ ಡಿ.ಕೆ.ಶಿವಕುಮಾರ್ ರವರ ನಿವಾಸದಲ್ಲಿ ‘ಬಿ’ಫಾರಂ ಸ್ವೀಕರಿಸಿದರು. ಶಿವಮೊಗ್ಗದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಲಿ ಎಂದು ಇದೇ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ಶುಭ ಹಾರೈಸಿದರು.

Read More

ಅಶ್ವತ್ಥರ ಅಂಕಣ- ತಿರುವುಗಳಿಲ್ಲದೇ ಕೊನೆಯಾದ ದಾರಿ…

ತಿರುವುಗಳಿಲ್ಲದೇ ಕೊನೆಯಾದ ದಾರಿ… ಅದೆಂದು ಶುರುವಾಗಿದ್ದ ದಾರಿಯೊಂದು ಯಾವ ತಿರುವು ಇಲ್ಲದೆ ಕೊನೆಯಾಗಿದೆ ಕಿರು ಬೆರಳಿಡಿದ ಕೈಯೊಂದು ತಂತಾನೆ ಬಿಗಿ ಸಡಿಲಿಸಿದೆ ಹೆಜ್ಜೆಯೊಳಗೆ ಹೆಜ್ಜೆಯಾಗುತ್ತಿದ್ದ ಹೆಜ್ಜೆಗಳು ತಟಸ್ಥವಾಗಿವೆ ಸುತ್ತುವರಿದಿದ್ದ ನೆರಳೊಂದು ಕರಗಿ ಹೋಗಿದೆ ಹೌದು ಈ ಬದುಕಿನ ಹಾದಿಯಲ್ಲಿ ಅಷ್ಟೊಂದು ದೂರದಿಂದ ಜೊತೆಯಾಗಿ ಬಂದ ಭರವಸೆಯೆಂದು ಮರೆಯಾಗಿದೆ. ಹಾಗೆ ನೋಡಿದರೆ ನಮ್ಮಿಬ್ಬರ ನಡುವಿನ ತಾರ್ಕಿಕವಾದವೊನ್ದು ಇತ್ಯರ್ಥವಾಗಬೇಕಿತ್ತು, ಅದಾಗಲೇ ಇಲ್ಲ. ಅದೆಂದೋ  ಧಗಧಗಿಸಿ ಕೆಂಡವಾಗಿದ್ದ ಹತಾಶೆಯೊಂದು  ಶಮನವಾಗಲೇ ಇಲ್ಲ. ಜೀವಮಾನವಿಡಿ ಸವೆದರು ಆತ್ಮತೃಪ್ತಿ ಎಂಬ ಕಡೆಗೋಲು ಸಂತೃಪ್ತವಾಗಲೇ ಇಲ್ಲ….

Read More